ಯಾರೂ ಇಲ್ಲದ ಕಾರು ಕಲ್ಯಾಣಿಯಲ್ಲಿ ಮುಳುಗಿದ್ದು ಹೇಗೆ? ಬಾಗಲೂರು ಪೊಲೀಸರಿಗೆ ತಲೆನೋವು ಶುರು

ದೇವನಹಳ್ಳಿ: ರಸ್ತೆ ಬದಿಯ ಕಲ್ಯಾಣಿಯಲ್ಲಿ ಕಾರು ಮುಳುಗಿದ್ದು, ಪೊಲೀಸರು ಹೊರತೆಗೆದಿದ್ದಾರೆ. ಕ್ರೇನ್ ಮೂಲಕ ನೀರಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕುತೂಹಲದ ಸಂಗತಿಯೆಂದ್ರೆ ಕಾರಿನಲ್ಲಿ ಯಾರೂ ಇರಲಿಲ್ಲ. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಘಟನೆ ನಡೆದಿದೆ. ಇದು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಸಂಖ್ಯೆಯ ವರ್ನಾ ಕಾರು. ಚಾಲಕನ ನಿಯಂತ್ರಣ ತಪ್ಪಿ ಕಳೆದ ರಾತ್ರಿ ಅಪಘಾತವಾಗಿರುವ ಶಂಕೆಯಿದೆ. ಇಡೀ ಕಾರು ಕಲ್ಯಾಣಿಯಲ್ಲಿ ಮುಳುಗಡೆಯಾಗಿತ್ತು. ಕಾರನ್ನ ವಶಕ್ಕೆ ಪಡೆದು ಬಾಗಲೂರು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ. ಇಂದು ಬೆಳಗ್ಗೆ ವಾಕಿಂಗ್ ಮಾಡ್ತಿದ್ದವರು ಕಾರನ್ನ ಕಂಡು […]

ಯಾರೂ ಇಲ್ಲದ ಕಾರು ಕಲ್ಯಾಣಿಯಲ್ಲಿ ಮುಳುಗಿದ್ದು ಹೇಗೆ? ಬಾಗಲೂರು ಪೊಲೀಸರಿಗೆ ತಲೆನೋವು ಶುರು
ಸಾಧು ಶ್ರೀನಾಥ್​

Updated on: May 30, 2020 | 10:55 AM

ದೇವನಹಳ್ಳಿ: ರಸ್ತೆ ಬದಿಯ ಕಲ್ಯಾಣಿಯಲ್ಲಿ ಕಾರು ಮುಳುಗಿದ್ದು, ಪೊಲೀಸರು ಹೊರತೆಗೆದಿದ್ದಾರೆ. ಕ್ರೇನ್ ಮೂಲಕ ನೀರಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕುತೂಹಲದ ಸಂಗತಿಯೆಂದ್ರೆ ಕಾರಿನಲ್ಲಿ ಯಾರೂ ಇರಲಿಲ್ಲ. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಘಟನೆ ನಡೆದಿದೆ.

ಇದು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಸಂಖ್ಯೆಯ ವರ್ನಾ ಕಾರು. ಚಾಲಕನ ನಿಯಂತ್ರಣ ತಪ್ಪಿ ಕಳೆದ ರಾತ್ರಿ ಅಪಘಾತವಾಗಿರುವ ಶಂಕೆಯಿದೆ. ಇಡೀ ಕಾರು ಕಲ್ಯಾಣಿಯಲ್ಲಿ ಮುಳುಗಡೆಯಾಗಿತ್ತು. ಕಾರನ್ನ ವಶಕ್ಕೆ ಪಡೆದು ಬಾಗಲೂರು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಇಂದು ಬೆಳಗ್ಗೆ ವಾಕಿಂಗ್ ಮಾಡ್ತಿದ್ದವರು ಕಾರನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಬಿದ್ದ ಮಳೆಯಿಂದ ಕಲ್ಯಾಣಿಯಲ್ಲಿ ನೀರು ತುಂಬಿತ್ತು. ಯಾರೂ ಇಲ್ಲದ ಕಾರು ಕಲ್ಯಾಣಿಯಲ್ಲಿ ಮುಳುಗಿದ್ದು ಹೇಗೆ? ಡ್ರೈವರ್ ಆದರೂ ಏನಾದ? ಈ ಕಾರು ಯಾರಿಗೆ ಸೇರಿದ್ದು ಎಬ ಪ್ರರ್ಶನೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ.


Published On - 10:52 am, Sat, 30 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us