ಲೋಕಸಭಾ ಚುನಾವಣೆ: ಮಂಡ್ಯದಲ್ಲಾದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕಾಂಗ್ರೆಸ್

Mandya Budanoor Utsav: ಕೆರಗೋಡು ಹನುಮ ಧ್ವಜ ತೆರವು ವಿಚಾರವಾಗಿ ಭಾರೀ ಪ್ರತಿಭಟನೆ ನಡೆದಿತ್ತು. ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಬಿಂಬಿಸಲಾಗಿತ್ತು. ಈ ನಡುವೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅಲರ್ಟ್ ಆದ ಕಾಂಗ್ರೆಸ್, ಮಂಡ್ಯದಲ್ಲಾದ ಇಮೇಜ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಅದರಂತೆ, ಕೈ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಮೊದಲಬಾರಿ ಬೂದನೂರು ಉತ್ಸವ ಆಚರಿಸಲಾಗುತ್ತಿದೆ.

ಲೋಕಸಭಾ ಚುನಾವಣೆ: ಮಂಡ್ಯದಲ್ಲಾದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕಾಂಗ್ರೆಸ್
ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯದಲ್ಲಾದ ಇಮೇಜ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕಾಂಗ್ರೆಸ್
Follow us
| Updated By: Rakesh Nayak Manchi

Updated on:Mar 02, 2024 | 9:42 PM

ಮಂಡ್ಯ, ಮಾ.2: ಕೆರಗೋಡು ಹನುಮ ಧ್ವಜ ತೆರವು ವಿಚಾರವಾಗಿ ಭಾರೀ ಪ್ರತಿಭಟನೆ ನಡೆದಿತ್ತು. ಹಿಂದೂ ವಿರೋಧಿ ಕಾಂಗ್ರೆಸ್ (Congress) ಎಂದು ಬಿಂಬಿಸಲಾಗಿತ್ತು. ಈ ನಡುವೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅಲರ್ಟ್ ಆದ ಕಾಂಗ್ರೆಸ್, ಮಂಡ್ಯದಲ್ಲಾದ (Mandya) ಇಮೇಜ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಅದರಂತೆ, ಕೈ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಮೊದಲಬಾರಿ ಬೂದನೂರು ಉತ್ಸವ (Budanoor Utsav) ಆಚರಿಸಲಾಗುತ್ತಿದೆ.

ಕೆರಗೋಡು ಧ್ವಜ ತೆರವು ವಿವಾದದ ವೇಳೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಹಿಂದೂ ವಿರೋಧಿಗಳು ಎಂದಿದ್ದರು. ನಾವು ಹಿಂದೂ ವಿರೋಧಿಗಳಲ್ಲ ಎಂದು ಸಾರಲು ಇದೇ ಮೊದಲ ಬಾರಿ ಬೂದನೂರು ಉತ್ಸವ ಆಯೋಜನೆ ಮಾಡಲಾಗಿದ್ದು, ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ನಡೆಯಲಿದೆ.

ಇಂದಿನಿಂದ ಬೂದನೂರು ಉತ್ಸವ ಆರಂಭ

ಮಂಡ್ಯ ತಾಲೂಕಿನ ಬೂದನೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕಾಶಿವಿಶ್ವನಾಥ ದೇವಸ್ಥಾನ ಹಾಗೂ ಆನಂತ ಪದ್ಮನಾಭ ದೇವಸ್ಥಾನದ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಉತ್ಸವ ನಡೆಯಲಿದೆ. ಸರ್ಕಾರದ ವತಿಯಿಂದ ನಡೆಯುತ್ತಿರುವ ಬೂದನೂರು ಉತ್ಸವ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ನಡೆಯಲಿದೆ.

ಇದನ್ನೂ ಓದಿ: ಹೈಕೋರ್ಟ್ ಆದೇಶದಂತೆ ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್: ಚಲುವರಾಯಸ್ವಾಮಿ ಸಮರ್ಥನೆ

ಬೂದನೂರು ಉತ್ಸವಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದ್ದು, ಗಂಗಾರತಿ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಶಾಸಕರಾದ ರವಿಕುಮಾರ್ ಗಣಿಗ, ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ ಕುಮಾರ್, ಎಸ್ ಪಿ ಯತೀಶ್ ಸೇರಿ ಅನೇಕರು ಭಾಗಿಯಾದರು. ಸಭಾ ಕಾರ್ಯಕ್ರಮದ ನಂತರ ಸಾಧು ಕೋಕಿಲ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಂಡ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಆಗಿಲ್ಲ: ಚಲುವರಾಯಸ್ವಾಮಿ

ಕಾರ್ಯಕ್ರಮದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯ ಸಾಕಷ್ಟು ಇತಿಹಾಸ ಇರುವ ಜಿಲ್ಲೆಯಾಗಿದೆ. ಜಿಲ್ಲೆಯನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಆಗಿಲ್ಲ. ಹೊಯ್ಸಳರ ಪರಂಪರೆಯನ್ನ ಸಾರಲು ಸಾಧ್ಯವಾಗಿಲ್ಲ. ಮಂಡ್ಯದಲ್ಲಿ ನೂರಾರು ಪ್ರಸಿದ್ಧ ದೇವಸ್ಥಾನಗಳು ಇವೆ. ಈ ಹಿಂದಿನ ಸರ್ಕಾರಗಳು ಜಿಲ್ಲೆಯ ಪ್ರವಾಸೋದ್ಯಮವನ್ನ ಬೆಳೆಸುವ ಕೆಲಸ ಮಾಡಿಲ್ಲ ಎಂದರು.

ಎಲ್ಲರಲ್ಲೂ ಸಣ್ಣಪುಟ್ಟ ತಪ್ಪುಗಳು ಇರುತ್ತವೆ. ಅವರ ಒಳ್ಳೆತನವನ್ನ ಗುರುತಿಸಬೇಕು. ಕೇಂದ್ರ ಬರಪರಿಹಾರ ಕೊಡಲಿಲ್ಲದ್ದರು ನಾವು ಸುಮ್ಮನೇ ಕುಳಿತಿಲ್ಲ. ಕೇಂದ್ರದಿಂದ ಬರಪರಿಹಾರ ಬರದಿದ್ದರು ನಾವು ಕೊಟಿದ್ದೇವೆ. ಚುನಾವಣೆ ಭಯದಿಂದ ವಿರೋಧ ಪಕ್ಷದ ಅನವಶ್ಯವಾಗಿ ತಪ್ಪು ಮಾಹಿತಿ ಕೊಡುತ್ತಾರೆ. ಜನರ ಜೊತೆ ಸರ್ಕಾರ ಯಾವಗಲೂ ನಿಲ್ಲುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Sat, 2 March 24