AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವರ್ಯಾರು? 3 ವಿಶೇಷ ಪಡೆಗಳಿಂದ ರಾತ್ರಿಯಿಡೀ ತನಿಖೆ

ಮಂಗಳೂರು: ಒಂದೇ ಒಂದು ಕ್ಷಣ ಯಾಮಾರಿದ್ರೂ ನಿನ್ನೆ ಕರಾವಳಿ ಕದಡಿ ಹೋಗ್ತಿತ್ತು. ದೊಡ್ಡ ದುರಂತವೇ ನಡೆದು ಹೋಗ್ತಿತ್ತು. ಅಮಾಯಕರ ನೆತ್ತರೋಕುಳಿ ಹರಿಯುತ್ತಿತ್ತು. ಆದ್ರೆ, ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಖಾಕಿ ಪಡೆ ಮತ್ತು ಬಾಂಬ್ ನಿಷ್ಕ್ರಿಯ ದಳ ಸಾಹಸದ ಕಾರ್ಯಾಚರಣೆ. ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದುಬಿಟ್ಟಿತ್ತು. ಏರ್​ಪೋರ್ಟ್ ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ನರರಕ್ಕಸರು ಅಮಾಯಕರ ರಕ್ತ ಹರಿಸಲು ಸ್ಕೆಚ್ ಹಾಕಿದ್ರು. ಆದ್ರೆ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವರ್ಯಾರು? 3 ವಿಶೇಷ ಪಡೆಗಳಿಂದ ರಾತ್ರಿಯಿಡೀ ತನಿಖೆ
ಸಾಧು ಶ್ರೀನಾಥ್​
|

Updated on: Jan 21, 2020 | 6:39 AM

Share

ಮಂಗಳೂರು: ಒಂದೇ ಒಂದು ಕ್ಷಣ ಯಾಮಾರಿದ್ರೂ ನಿನ್ನೆ ಕರಾವಳಿ ಕದಡಿ ಹೋಗ್ತಿತ್ತು. ದೊಡ್ಡ ದುರಂತವೇ ನಡೆದು ಹೋಗ್ತಿತ್ತು. ಅಮಾಯಕರ ನೆತ್ತರೋಕುಳಿ ಹರಿಯುತ್ತಿತ್ತು. ಆದ್ರೆ, ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಖಾಕಿ ಪಡೆ ಮತ್ತು ಬಾಂಬ್ ನಿಷ್ಕ್ರಿಯ ದಳ ಸಾಹಸದ ಕಾರ್ಯಾಚರಣೆ.

ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದುಬಿಟ್ಟಿತ್ತು. ಏರ್​ಪೋರ್ಟ್ ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ನರರಕ್ಕಸರು ಅಮಾಯಕರ ರಕ್ತ ಹರಿಸಲು ಸ್ಕೆಚ್ ಹಾಕಿದ್ರು. ಆದ್ರೆ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಮಂಗಳೂರು ಪೊಲೀಸ್ರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯ ಕೆಚ್ಚೆದೆಯ ಕಾರ್ಯಾಚರಣೆಯಿಂದ ಸಜೀವ ಬಾಂಬ್​ನ್ನು ಸ್ಫೋಟಿಸಿ ನಾಶಗೊಳಿಸಲಾಯ್ತು.

3 ‘ವಿಶೇಷ ಪಡೆ’ಗಳಿಂದ ರಾತ್ರಿಯಿಡೀ ತನಿಖೆ! ಈ ಬಾಂಬ್​ನ್ನು ಇಬ್ಬರು ದುಷ್ಕರ್ಮಿಗಳು ಇಟ್ಟು ಹೋಗಿರೋ ಶಂಕೆ ಇದೆ. ಬಾಡಿಗೆ ಆಟೋದಲ್ಲಿ ಬಂದ ಇಬ್ಬರು ಲ್ಯಾಪ್​ಟಾಪ್ ಮಾದರಿ ಬ್ಲ್ಯಾಕ್ ಬ್ಯಾಗ್​ನಲ್ಲಿ ಬಾಂಬ್ ತಂದಿಟ್ಟು ಹೋಗಿರುವ ಸ್ಪಷ್ಟ ಮಾಹಿತಿ ಖಾಕಿಗೆ ಸಿಕ್ಕಿದೆ. ಈ ದೃಶ್ಯ ಏರ್​ಪೋರ್ಟ್​ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಗಳ ಫೋಟೋ ಮತ್ತು ಆಟೋ ನಂಬರ್​ನ್ನು ಎಲ್ಲಾ ಠಾಣೆಗಳಿಗೆ ರವಾನಿಸಲಾಗಿದೆ. ಇನ್ನು, ರಾತ್ರಿಯಿಡೀ 3 ವಿಶೇಷ ತಂಡಗಳು ತನಿಖೆ ನಡೆಸಿದ್ವು. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ್ರು. ಏರ್​ಪೋರ್ಟ್​ ಸಿಬ್ಬಂದಿ, ಪೊಲೀಸರು ಮತ್ತು ವ್ಯಕ್ತಿಗಳ ಫೋನ್ ಟ್ರ್ಯಾಪ್ ಮಾಡ್ಲಾಯಿತು. ಈ ವೇಳೆ, ಬಲವಾದ ಸಾಕ್ಷ್ಯಗಳು ದೊರೆತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭಯೋತ್ಪಾದನಾ ಸಂಘಟನೆಗಳಿಂದ ಕೃತ್ಯ ಶಂಕೆ! ಹೊರಗಿನಿಂದ ಬಂದವರು ಅಥವಾ ಭಯೋತ್ಪಾದನಾ ಸಂಘಟನೆಗಳು ಕೃತ್ಯ ಎಸಗಿರೋ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಹಲವಾರು ಶಂಕಿತರನ್ನು ಪಾಯಿಂಟ್ ಔಟ್ ಮಾಡಿರುವ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಅಲ್ದೆ, ಕೇರಳ ಗಡಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ನಾಕಾಬಂದಿ ಹಾಕಿ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡಲಾಗುತ್ತಿದೆ.

ಇನ್ನು, ಈ ಘಟನೆಯಿಂದಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಸೇರಿದಂತೆ ವಿವಿಧ ಕಡೆ ಖಾಕಿ ಹದ್ದಿನ ಕಣ್ಣಿಟ್ಟಿದೆ. ಸದ್ಯ ಮಂಗಳೂರು ಬಾಂಬ್ ಬಗ್ಗೆ ಬಜ್ಪೆ ಠಾಣೆ ಪೊಲೀಸ್ರು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆದ್ರೆ, ಈ ಬಾಂಬ್​ನ್ನು ಉಗ್ರರೇ ಇಟ್ಟಿದ್ದಾರಾ? ಅಥವಾ ಯಾವುದಾದ್ರೂ ಸಂಘಟನೆಗಳ ಕೈವಾಡ ಇರಬಹುದಾ? ಅನ್ನೋ ಪ್ರಶ್ನೆಗಳು ತನಿಖಾ ತಂಡಗಳನ್ನು ಕಾಡುತ್ತಿವೆ. ಹೀಗಾಗೇ ರಾತ್ರಿಯಿಡೀ ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ.

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!