AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈನುಗಾರಿಕೆ ನಂಬಿದ ಜಿಲ್ಲೆ ರೈತರಿಗೆ ಪ್ರೋತ್ಸಾಹ ಧನ ನೀಡದ ‘ರಾಬಕೊ’ ಒಕ್ಕೂಟ

ಕೊಪ್ಪಳ: ಆ ಮೂರು ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದ್ರೆ ಆ ಮೂರು ಜಿಲ್ಲೆಯ ರೈತರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹ ಧನ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿಂದ ಒಕ್ಕೂಟ ಪ್ರೋತ್ಸಾಹ ಧನ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ. ಹೈನುಗಾರಿಕೆ ನಂಬಿದ ರೈತರು ಕಂಗಾಲು: ರಾ.ಬ.ಕೊ ಅಂದ್ರೆ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ. ಸದ್ಯ ಈ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. […]

ಹೈನುಗಾರಿಕೆ ನಂಬಿದ ಜಿಲ್ಲೆ ರೈತರಿಗೆ ಪ್ರೋತ್ಸಾಹ ಧನ ನೀಡದ ‘ರಾಬಕೊ’ ಒಕ್ಕೂಟ
ಸಾಧು ಶ್ರೀನಾಥ್​
|

Updated on: Jan 20, 2020 | 7:29 PM

Share

ಕೊಪ್ಪಳ: ಆ ಮೂರು ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದ್ರೆ ಆ ಮೂರು ಜಿಲ್ಲೆಯ ರೈತರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹ ಧನ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿಂದ ಒಕ್ಕೂಟ ಪ್ರೋತ್ಸಾಹ ಧನ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ.

ಹೈನುಗಾರಿಕೆ ನಂಬಿದ ರೈತರು ಕಂಗಾಲು: ರಾ.ಬ.ಕೊ ಅಂದ್ರೆ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ. ಸದ್ಯ ಈ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. ಕೊಪ್ಪಳ ಬಳ್ಳಾರಿ ಹಾಗೂ ರಾಯಚೂರ ಜಿಲ್ಲೆಯ ಹೈನುಗಾರಿಕೆ ನಂಬಿದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಯಾಕಂದ್ರೆ ಮೂರು ತಿಂಗಳಿಂದ ರಾ.ಬ.ಕೊ ಹಾಲು ಒಕ್ಕೂಟ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಸರ್ಕಾರದಿಂದ ಎರಡು ರೂಪಾಯಿ ಪ್ರೋತ್ಸಾಹ ಧನ ಬರಬೇಕಾದ ಹಣವನ್ನು ರೈತರ ಖಾತೆಗೆ ಜಮೆ ಮಾಡಿಲ್ಲ. ಮೂರು ಜಿಲ್ಲೆಯು ರೈತರಿಗೆ ಕಳೆದ ಸಪ್ಟೆಂಬರ್ ಹಣ ಜಮೆಯಾಗಿದ್ದು ಬಿಟ್ರೆ ಹೊಸ ವರ್ಷ ಬಂದ್ರೂ ಪ್ರೋತ್ಸಾಹ ಧನ ಮರಿಚೀಕೆಯಾಗಿದೆ.

ಪ್ರೋತ್ಸಾಹ ಧನಕ್ಕೆ ಒಕ್ಕೂಟ ಬ್ರೇಕ್: ಹೀಗಾಗಿ ಮೂರು ಜಿಲ್ಲೆಯ ಹೈನುಗಾರಿಕೆ ನಂಬಿದ ರೈತರು ಪ್ರೋತ್ಸಾಹ ಧನ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸುಮಾರು 6 ಕೋಟಿ ಅಷ್ಟು ಹಣವನ್ನು ರಾ.ಬ.ಕೊ. ಒಕ್ಕೂಟ ಪ್ರೋತ್ಸಾಹ ಧನ ನೀಡಿಲ್ಲ. ತ್ರಿವಳಿ ಜಿಲ್ಲೆಯ ಮೂರು ಜಿಲ್ಲೆಯಲ್ಲಿ 32 ಸಾವಿರ ಹಾಲು ಉತ್ಪಾದಕರಿದ್ದು ಪ್ರೋತ್ಸಾಹ ಧನಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದ ನಿತ್ಯ ಹಾಲು ಮಾರಿ ಜೀವನ ನಡೆಸುತ್ತಿರೋ ರೈತ ಕುಟುಂಬಗಳು ಕಂಗಾಲಾಗಿವೆ.

ಹಾಲು ಉತ್ಪಾದಕರ ಆಕ್ರೋಶ: ತ್ರಿವಳಿ ಜಿಲ್ಲೆಯಲ್ಲಿ ನಿತ್ಯ ಒಟ್ಟು 2 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕೊಪ್ಪಳದಿಂದ 70 ಸಾವಿರ, ರಾಯಚೂರಿನಿಂದ 30 ಸಾವಿರ ಹಾಗೂ ಬಳ್ಳಾರಿ ಇಂದ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ತ್ರಿವಳಿ ಜಿಲ್ಲೆಯಲ್ಲಿ ಹೈನುಗಾರಿಕೆ ಇದ್ರೂ ಒಕ್ಕೂಟ ಮಾತ್ರ ಹಣ ಬಿಡುಗಡೆ ಮಾಡದೆ ಇರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೈನುಗಾರಿಕೆ ಮಾಡೋ ಸಣ್ಣ ಪುಟ್ಟ ಕುಟಂಬಗಳಿಗೆ ಪ್ರೋತ್ಸಾಹ ಧನವೇ ಆಸರೆಯಾಗಿದ್ದು, ಒಕ್ಕೂಟ ಮೂರು ತಿಂಗಳಿಂದ ಹಣ ಬಿಡುಗಡೆ ಮಾಡದೆ ಇರೋದು ಬಡ ರೈತರನ್ನು ಬೀದಿಗೆ ತಳ್ಳಿದಂತಾಗಿದೆ.

ಒಟ್ಟಾರೆ ಸರ್ಕಾರ ಹಾಗೂ ಒಕ್ಕೂಟ ಮಾಡಿದ ಯುಡವಟ್ಟಿಗೆ ತ್ರಿವಳಿ ಜಿಲ್ಲೆಯ ರೈತರು ಬೀದಿಗೆ ಬಂದಿದ್ದಾರೆ. ಒಕ್ಕೂಟ ಲಾಭದಲ್ಲಿದ್ರೂ ಅಧಿಕಾರಿಗಳು ಮಾತ್ರ ಸರ್ಕಾರ ನೀಡೋ ಪ್ರೋತ್ಸಾಹ ಧನಕ್ಕೆ ಕಡಿವಾಣ ಹಾಕಿ ರೈತರ ಹೊಟ್ಟೆ ಮೇಲೆ ಬರೆ ಎಳೆದಿದ್ದು ಮಾತ್ರ ದುರಂತ.

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ