AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ […]

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!
’ಶಿಕ್ಷಣ ಸಚಿವ’ ಸುರೇಶ್ ಕುಮಾರ್​
TV9 Web
| Updated By: ಸಾಧು ಶ್ರೀನಾಥ್​|

Updated on:Jul 30, 2021 | 11:06 AM

Share

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ ಅವರಿನ್ನೂ ಹಾಲಿ ಸಚಿವರಾಗಿ, ಖಾತೆಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ ಆದಿಯಾಗಿ ಅನೇಕ ಮಾಜಿ ಸಚಿವರು ಇಂತಹ ಚಿಕ್ಕ ಪ್ರಯತ್ನಕ್ಕೂ ಕೈ ಹಾಕದೆ, ಖಾತೆ ಕೈ ತಪ್ಪುವ ಭೀತಿಯಲ್ಲಿದ್ದಾರೆ.

ಕೆಲವರು ಮಾತ್ರ ಪ್ರಾಂಪ್ಟ್​: ಬಿ ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಬದಲಾದ ನಂತರವೂ ಟ್ವಿಟರ್​​ನಲ್ಲಿ ಅನೇಕ ಮಾಜಿ ಸಚಿವರು ಇನ್ನೂ ತಮ್ಮ ಡೆಸಿಗ್ನೇಷನ್​ ಬದಲಾಯಿಸಿಕೊಂಡಿಲ್ಲ. ತಮ್ಮ ತಮ್ಮ ಇಲಾಖೆಗಳ ಹೆಸರು ಸಮೇತ ಅವರು ಸಚಿವರಾಗಿಯೇ ಮುಂದುವರಿದಿದ್ದಾರೆ! ಕೆಲವರು ಮಾತ್ರ ಪ್ರಾಂಪ್ಟ್​ ಆಗಿ ಮಾಜಿ ಸಚಿವರೆಂದು ಬರೆದುಕೊಂಡಿದ್ದಾರೆ. ಬಹುತೇಕ ಮಾಜಿ ಸಚಿವರು 4 ದಿನ ಕಳೆದರೂ, ಈ ಕ್ಷಣದವರೆಗೂ ಬದಲಾಯಿಸಿಕೊಳ್ಳದೆ ಹಾಲಿ ಸಚಿವರು ಎಂದೇ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದರೂ ಸದ್ಯಕ್ಕೆ ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ.

Many ex ministers in karnataka not ready to change designation in social media accounts 3

ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ

Many ex ministers in karnataka not ready to change designation in social media accounts 1

ಕೆ ಎಸ್​ ಈಶ್ವರಪ್ಪ ಅವರು ಇನ್ನೂ ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೇ ಮುಂದುವರಿದಿದ್ದಾರೆ.

Published On - 5:01 pm, Thu, 29 July 21

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ