AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ. ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ […]

ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!
ಸಾಧು ಶ್ರೀನಾಥ್​
|

Updated on: Nov 22, 2019 | 9:35 PM

Share

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ.

ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ ಏನೂ ಬದಲಾಗಿಲ್ಲ.

ಸೋಮವಾರ ಅನ್ನದ ಜೊತೆಗೆ ಸೊಪ್ಪು ಅಥವಾ ತರಕಾರಿ ಸಾಂಬಾರು, ಮಂಗಳವಾರ ತರಕಾರಿ ಪಲಾವ್‌ ಮತ್ತು ದಾಲ್‌ ಅಥವಾ ಟೋಮ್ಯಾಟೋ ಬಾತ್‌ ಮತ್ತು ಪಲ್ಯ ನೀಡಬೇಕು. ಬುಧವಾರ ಅನ್ನದ ಜೊತೆ ಬೇಳೆ ರಸಂ ಮತ್ತು ಕಾಳುಪಲ್ಯ ಅಥವಾ ತರಕಾರಿ ಪಲ್ಯ ಕೊಡಬೇಕು. ಗುರುವಾರ ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರು, ಶುಕ್ರವಾರ ಬಿಸಿ ಬೇಳೆ ಬಾತ್‌ ಮತ್ತು ಖಾರ ಬೂಂದಿ, ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ವಾಂಗಿಬಾತ್‌ ಅಥವಾ ಗೋಧಿ ಪೊಂಗಲ್‌ ಅಥವಾ ಚಪಾತಿ ಮತ್ತು ಪೂರಿ ಸಾಗು ಸೇರಿದಂತೆ ಇನ್ನಿತರ ಆಹಾರ ನೀಡಬೇಕು.

ಆದ್ರೆ, ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕಾದ ಆಹಾರದಲ್ಲಿ ಕೆಲ ಸಂಘ-ಸಂಸ್ಥೆಗಳು ಕಾಂಪ್ರಮೈಸ್​ ಮಾಡಿಕೊಂಡಿವೆ. ಹೊಸ ಮೆನುವನ್ನ ಶಾಲೆ ಹಾಗೂ ಸಂಘ-ಸಂಸ್ಥೆಗಳು ಪಾಲಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸರ್ಕಾರ ಹಣ ಬಿಡುಗಡೆ ಮಾಡದಿರೋದೇ ಇದಕ್ಕೆ ಕಾರಣ ಎನ್ನಲಾಗಿದೆ.

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​