AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ. ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ […]

ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!
ಸಾಧು ಶ್ರೀನಾಥ್​
|

Updated on: Nov 22, 2019 | 9:35 PM

Share

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ.

ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ ಏನೂ ಬದಲಾಗಿಲ್ಲ.

ಸೋಮವಾರ ಅನ್ನದ ಜೊತೆಗೆ ಸೊಪ್ಪು ಅಥವಾ ತರಕಾರಿ ಸಾಂಬಾರು, ಮಂಗಳವಾರ ತರಕಾರಿ ಪಲಾವ್‌ ಮತ್ತು ದಾಲ್‌ ಅಥವಾ ಟೋಮ್ಯಾಟೋ ಬಾತ್‌ ಮತ್ತು ಪಲ್ಯ ನೀಡಬೇಕು. ಬುಧವಾರ ಅನ್ನದ ಜೊತೆ ಬೇಳೆ ರಸಂ ಮತ್ತು ಕಾಳುಪಲ್ಯ ಅಥವಾ ತರಕಾರಿ ಪಲ್ಯ ಕೊಡಬೇಕು. ಗುರುವಾರ ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರು, ಶುಕ್ರವಾರ ಬಿಸಿ ಬೇಳೆ ಬಾತ್‌ ಮತ್ತು ಖಾರ ಬೂಂದಿ, ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ವಾಂಗಿಬಾತ್‌ ಅಥವಾ ಗೋಧಿ ಪೊಂಗಲ್‌ ಅಥವಾ ಚಪಾತಿ ಮತ್ತು ಪೂರಿ ಸಾಗು ಸೇರಿದಂತೆ ಇನ್ನಿತರ ಆಹಾರ ನೀಡಬೇಕು.

ಆದ್ರೆ, ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕಾದ ಆಹಾರದಲ್ಲಿ ಕೆಲ ಸಂಘ-ಸಂಸ್ಥೆಗಳು ಕಾಂಪ್ರಮೈಸ್​ ಮಾಡಿಕೊಂಡಿವೆ. ಹೊಸ ಮೆನುವನ್ನ ಶಾಲೆ ಹಾಗೂ ಸಂಘ-ಸಂಸ್ಥೆಗಳು ಪಾಲಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸರ್ಕಾರ ಹಣ ಬಿಡುಗಡೆ ಮಾಡದಿರೋದೇ ಇದಕ್ಕೆ ಕಾರಣ ಎನ್ನಲಾಗಿದೆ.

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ