AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್

ಆಳಂದ ತಾಲೂಕಿನ ಹಿರಾಪುರ ಗ್ರಾಮದ ರಾಜಶೇಖರ್ ಯಳಮೇಲಿ ಎನ್ನುವವರು ಧರ್ಮವಾಡಿ ಗ್ರಾಮದಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಈ ಬಾರಿ ಜೋಳ ಬೆಳೆದಿದ್ದಾರೆ. ಕಳೆದ ಮೂರ ತಲೆಮಾರುಗಳಿಂದ ಯಳಮೇಲಿ ಕುಟುಂಬ ಕೃಷಿಯನ್ನು ಮಾಡಿಕೊಂಡು ಬಂದಿದೆ.

ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್
ಮುತ್ತಿನಂತೆ ಕಾಣುತ್ತಿರುವ ಜೋಳ
sandhya thejappa
| Edited By: |

Updated on:Mar 02, 2021 | 6:52 PM

Share

ಕಲಬುರಗಿ: ದೂರದಿಂದ ನೋಡಿದರೆ ಹೈದರಾಬಾದ್​ನ ಮುತ್ತಿನಂತೆ ಕಾಣುತ್ತದೆ. ಹೀಗಾಗಿ ಜಮೀನಿನಲ್ಲಿ ಮುತ್ತುಗಳನ್ನು ಬೆಳೆದಿದ್ದಾರೆ ಅಂತ ಅನೇಕರು ಅಚ್ಚರಿ ಪಟ್ಟಿದ್ದರು. ಹೊಲದಲ್ಲಿ ಈ ಭಾರಿ ಅಚ್ಚರಿ ಎನ್ನುವಂತೆ ಜೋಳ ಬೆಳೆದಿದೆ. ಒಂದೆ ದಂಟಿನಲ್ಲಿ ಐದಾರು ಟಿಸಲು ಒಡೆದು, ಐದಾರು ತನೆಗಳಾಗಿವೆ. ಈ ಸೋಜಿಗ ನೋಡಲು ಅನೇಕರು ಜಮೀನಿಗೆ ಬರುತ್ತಿದ್ದಾರೆ.

ಜಿಲ್ಲೆಯ ಆಳಂದ ತಾಲೂಕಿನ ಹಿರಾಪುರ ಗ್ರಾಮದ ರಾಜಶೇಖರ್ ಯಳಮೇಲಿ ಎನ್ನುವವರು ಧರ್ಮವಾಡಿ ಗ್ರಾಮದಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಈ ಬಾರಿ ಜೋಳ ಬೆಳೆದಿದ್ದಾರೆ. ಕಳೆದ ಮೂರು ತಲೆಮಾರುಗಳಿಂದ ಯಳಮೇಲಿ ಕುಟುಂಬ ಕೃಷಿ ಮಾಡಿಕೊಂಡು ಬಂದಿದೆ. ಪ್ರತಿ ವರ್ಷ ಜೋಳ ಬೆಳೆಯುತ್ತಾರೆ. ಆದರೆ ಈ ಬಾರಿ ಬೆಳೆದಿರುವ ಜೋಳ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಉತ್ತರ ಕರ್ನಾಟಕ ಭಾಗದ ಜನರ ಪ್ರಮುಖ ಆಹಾರದ ಬೆಳೆ ಜೋಳ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಜನರು ಪ್ರತಿ ವರ್ಷ ಹಿಂಗಾರು ಬೆಳೆಯಾಗಿ ಜೋಳವನ್ನು ಬೆಳೆಯುತ್ತಾರೆ. ಅದೇ ರೀತಿ ರಾಜಶೇಖರ ಯಳಮೇಲಿ ತಮ್ಮ 50 ಎಕರೆ ಜಮೀನಿನ ಪೈಕಿ ಹತ್ತು ಎಕರೆ ಭೂಮಿಯಲ್ಲಿ ಬಿಳಿ ಜೋಳವನ್ನು ಬೆಳೆದಿದ್ದಾರೆ. ಅಲ್ಲದೇ ಈ ಜೋಳ ಹೈದರಾಬಾದ್ ಮುತ್ತಿನಂತೆ ಕಂಗೊಳಿಸುತ್ತಿದೆ. ಒಂದೇ ಬೀಜದಿಂದ ಐದಾರು ದಂಟುಗಳು ಬೆಳದಿದ್ದು, ಒಂದೊಂದು ದಂಟಿನಲ್ಲಿ ಐದಾರು ಟಿಸಿಲುಗಳು ಬಂದಿದ್ದು, ಐದಾರು ತನೆಗೆಳೂ ಬೆಳದಿವೆ.

ಮುತ್ತಿನಂತೆ ಕಾಣುವ ಜೋಳ

ಜೋಳವನ್ನು ವೀಕ್ಷಿಸುತ್ತಿರುವ ರೈತರು

ಎಂಬತ್ತು ಕ್ವಿಂಟಲ್ ಬೆಳೆ ನಿರೀಕ್ಷೆ ಸಾಮಾನ್ಯವಾಗಿ ಒಂದು ದಂಟಿನಲ್ಲಿ ಎರಡು ಟಿಸಲುಗಳು ಬಂದಿರುತ್ತವೆ. ಒಂದು ದಂಟಿನಲ್ಲಿ ಎರಡು ತೆನೆಗಳು ಬರುವುದನ್ನು ರೈತರು ನೋಡಿದ್ದಾರೆ. ಆದರೆ ರಾಜಶೇಖರವರ ಜಮೀನಿನಲ್ಲಿ ಈ ಬಾರಿ ಐದಾರು ಟಿಸಲುಗಳು, ಐದಾರು ತನೆಗಳು ಬಂದಿದ್ದು, ಎಲ್ಲಾ ತೆನೆಗಳಲ್ಲಿ ಕೂಡಾ ಉತ್ತಮ ಕಾಳುಗಳಾಗಿವೆ. ಹೀಗಾಗಿ ರಾಜಶೇಖರವರು ಹತ್ತು ಎಕರೆಯಲ್ಲಿ ಬರೋಬ್ಬರಿ ಎಂಬತ್ತು ಕ್ವಿಂಟಲ್​ಗೂ ಹೆಚ್ಚು ಜೋಳ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಬೆಳೆದಿರುವ ಜೋಳ ಎಲ್ಲರ ಅಚ್ಚರಿಗೆ ಕಾರಣವಾಗಿದೆ

ಗೊಬ್ಬರ ಆಧುನಿಕ ಬೀಜ ಬಳಸಿಲ್ಲ ಉತ್ತಮವಾಗಿ ಜೋಳ ಬೆಳೆಯಲು ಯಾವುದೇ ಗೊಬ್ಬರವನ್ನು ಹಾಕಿಲ್ಲಾ. ಯಾವುದೇ ಆಧುನಿಕ ಬೀಜವನ್ನು ಕೂಡಾ ಬಳಸಿಲ್ಲವಂತೆ. ಮನೆಯಲ್ಲಿಯೇ ಇದ್ದ ಜೋಳವನ್ನು ಬಿತ್ತನೆ ಮಾಡಿದ್ದಾರಂತೆ. ಸಗಣಿ ಗೊಬ್ಬರ ಬಿಟ್ಟರೆ ಜಮೀನಿಗೆ ಯಾವುದೇ ಗೊಬ್ಬರ ಹಾಕಿಲ್ಲಾ. ಕ್ರಿಮಿನಾಶಕ ಸಿಂಪಡಣೆ ಮಾಡಿಲ್ಲಾ.

ಭೂಮಿ ತಾಯಿ ಪ್ರೀತಿಯಿಂದ ಇಷ್ಟೊಂದು ಬೆಳೆಯನ್ನು ಕೊಟ್ಟಿದ್ದಾಳೆ. ನನ್ನ ಜೀವನದಲ್ಲಿ ಇಂತಹದೊಂದು ಬೆಳೆಯನ್ನು ನಾನು ನೋಡಿಲ್ಲಾ ಅಂತಿದ್ದಾರೆ ರಾಜಶೇಖರ. ಜೋಳವನ್ನು ಅನೇಕರು ಬಂದು ಆಶ್ಚರ್ಯದಿಂದ ನೋಡುತ್ತಿದ್ದಾರೆ. ತಮಗೂ ಮುಂದಿನ ಬಾರಿ ಬೀಜವನ್ನು ನೀಡಿ, ನಾವು ನಮ್ಮ ಜಮೀನಿನಲ್ಲಿ ಬೆಳೆಯುತ್ತೇವೆ ಅಂತ ಹೇಳುತ್ತಿದ್ದಾರಂತೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಕಾಲಿಕ ಮಳೆಯಿಂದಾಗಿ ಜೋಳದ ಬೆಳೆ ಹಾಳಾಗಿದೆ. ಆದರೆ ರಾಜಶೇಖರ್​ರವರ ಹೊಲದಲ್ಲಿ ಮಾತ್ರ ಭರ್ಜರಿ ಜೋಳದ ಬೆಳೆ ಬಂದಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ

ಮೆಕ್ಕೆಜೋಳದ ಕಣಕ್ಕೆ ಬೆಂಕಿ: ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಹಾವೇರಿ ರೈತರಿಗೆ ಶಾಕ್

ಯಾದಗಿರಿ: ಜೋಳದ ಬೆಳೆಗೆ ಹಕ್ಕಿ, ಹಂದಿಗಳ ಕಾಟ; ರೈತರ ಪರದಾಟ

Published On - 1:30 pm, Tue, 2 March 21

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ