AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ನೈಟ್ ಕರ್ಫ್ಯೂ.. ಎಣ್ಣೆ ಸರಬರಾಜು ಬಗ್ಗೆ ಅಬಕಾರಿ ಸಚಿವ‌ ಎಚ್. ನಾಗೇಶ್ ಹೇಳಿದ್ದೇನು?

ಇಂದಿನಿಂದ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಅಬಕಾರಿ ಸಚಿವ‌ ಎಚ್.ನಾಗೇಶ್ ರಾತ್ರಿ 10ಗಂಟೆ ಮೇಲೆ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಎಲ್ಲಾ ಬಂದ್ ಮಾಡ್ತೀವಿ ಎಂದಿದ್ದಾರೆ.

ಇಂದಿನಿಂದ ನೈಟ್ ಕರ್ಫ್ಯೂ.. ಎಣ್ಣೆ ಸರಬರಾಜು ಬಗ್ಗೆ ಅಬಕಾರಿ ಸಚಿವ‌ ಎಚ್. ನಾಗೇಶ್ ಹೇಳಿದ್ದೇನು?
ನೈಟ್ ಕರ್ಫ್ಯೂ ಸ್ವಾಗತಾರ್ಹ -ಅಬಕಾರಿ ಸಚಿವ‌ ಎಚ್.ನಾಗೇಶ್
ಆಯೇಷಾ ಬಾನು
| Edited By: |

Updated on: Dec 23, 2020 | 3:41 PM

Share

ಕೋಲಾರ: ಕೊರೊನಾ ಹೊಸ ಪ್ರಭೇದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಸದ್ಯ ಈ ಬಗ್ಗೆ ಮಾತನಾಡಿದ ಅಬಕಾರಿ ಸಚಿವ‌ ಎಚ್.ನಾಗೇಶ್ ರಾತ್ರಿ 10 ಗಂಟೆ ಮೇಲೆ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಎಲ್ಲಾ ಬಂದ್ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

ನೈಟ್ ಕರ್ಫ್ಯೂ ಸ್ವಾಗತಾರ್ಹ. ಇದರಲ್ಲಿ ನಮ್ಮ ಇಲಾಖೆಯ ಪಾತ್ರ ಅತಿ ಮುಖ್ಯವಾಗಿದೆ. ನಾವೇನಾದರೂ ಸಡಿಲ ಬಿಟ್ಟರೆ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಬಾರ್ ಲೈಸೆನ್ಸ್ ರದ್ದು ಮಾಡಲಾಗುತ್ತೆ. ಹೀಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇ ಬೇಕಾಗಿದೆ. ಮುಖ್ಯಮಂತ್ರಿ ಒಳ್ಳೆಯ ನಿರ್ಧಾರ‌ ತೆಗೆದುಕೊಂಡಿದ್ದಾರೆ.

ಕ್ರಿಸ್ಮಸ್, ಹೊಸ ವರ್ಷ ಆಚರಣೆಗೆ ಅನೇಕ ಜನರು ಸೇರುತ್ತಾರೆ. ನೈಟ್ ಕರ್ಫ್ಯೂ ಜಾರಿಯಾಗಿರುವುದರಿಂದ ಜನರಲ್ಲಿ ಭಯ ಬರಲಿದೆ. ಕೊರೊನಾ ರೂಪಾಂತರ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ‌ ಇರಬೇಕು ಎಂದು ಎಚ್.ನಾಗೇಶ್ ತಿಳಿಸಿದ್ದಾರೆ. ಇನ್ನು ಕ್ರಿಸ್ಮಸ್, ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಸಿಎಂ ಯಡಿಯೂರಪ್ಪ ಅವರ ಈ ನಿರ್ಧಾರ ಎಲ್ಲಾ ಸೆಲೆಬ್ರೇಷನ್​ಗಳಿಗೆ ಬ್ರೇಕ್ ಹಾಕಲಿದೆ.

ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ: ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಘೋಷಣೆ