AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National farmers day 2020: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ, ಇದೀಗ ಕೇಂದ್ರದಿಂದಲೂ ಆ್ಯಪ್ ಅಳವಡಿಕೆ!

Farmers Crop Survey App ಅ್ಯಪ್​ಗೆ ಕೇಂದ್ರ ಸರ್ಕಾರದಿಂದ ಕೂಡ ಉತ್ತಮ ಪ್ರಶಂಸೆ ದೊರಕಿದೆ. ಕೇಂದ್ರದ ಕೃಷಿ ಕಾರ್ಯದರ್ಶಿ ಸಹ ಬೆಳೆ ಸಮೀಕ್ಷೆ ಬಳಕೆ, ಪ್ರಯೋಜನ, ರೈತರಿಗಾಗುವ ಲಾಭ, ಇಲಾಖೆಗಾಗುವ ಆರ್ಥಿಕ ಲಾಭ ಕಂಡು ಈ ಯೋಜನೆಯನ್ನು ದೇಶದ ಇತರೆ ರಾಜ್ಯಗಳಿಗೂ ಸಹ ವಿಸ್ತರಿಸಲು ಮುಂದಾಗಿರುವುದು ಶ್ಲಾಘನೀಯ.

National farmers day 2020: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ, ಇದೀಗ ಕೇಂದ್ರದಿಂದಲೂ ಆ್ಯಪ್ ಅಳವಡಿಕೆ!
ರೈತ ಬೆಳೆ ಸಮೀಕ್ಷೆ ಎನ್ನುವುದು ಬರೀ ಸಮೀಕ್ಷೆಯಾಗದೇ ಉತ್ಸವವನ್ನಾಗಿ ಮಾಡಿದ್ದಕ್ಕೆ ಜನಕ್ಕೆ ವಂದನೆಗಳು ಎಂದವರು ಕೃಷಿ ಸಚಿವ ಬಿ.ಸಿ. ಪಾಟೀಲ
ಡಾ. ಭಾಸ್ಕರ ಹೆಗಡೆ
|

Updated on: Dec 23, 2020 | 3:35 PM

Share

ಮೂರು ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಭೂ ಮಾಪನ ಮತ್ತು ಭೂಮಿ ಒಡೆತನದ ತಂತ್ರಾಂಶ ಬಿಡುಗಡೆ ಮಾಡಿ ಸಾವಿರಾರು ಜನರ ಸಮಸ್ಯೆಗಳನ್ನು ಬಗೆಹರಿಸಿದ್ದರು. ಅದಾದ ಮೇಲೆ ಕೃಷಿ ಸಾಲ ಮನ್ನಾ ಆದಾಗಲೂ ಇದೇ ಅಧಿಕಾರಿಯ ಕರ್ತ್ವತ್ವ ಶಕ್ತಿಯಿಂದ ರೈತರ ಖಾತೆಗೆ ನೇರವಾಗಿ ಹಣ ಹಾಕುವ ಹೊಸ ಯುಗ ಪ್ರಾರಂಭವಾಯ್ತು. ಈ ಸಂಪ್ರದಾಯವನ್ನು ಮುಂದುವರಿಸಿದ ಬಿಜೆಪಿ ಸರಕಾರ ಒಂದು ಹಜ್ಜೆ ಮುಂದಕ್ಕೆ ಹೋಗಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯಿಟ್ಟಿತು. ಅದೇ ರೈತ ಬೆಳೆ ಸಮೀಕ್ಷೆ ಮಾಡುವ mobile app “ರೈತ ಬೆಳೆ ಸಮೀಕ್ಷೆ ಆಪ್-2020” ಜಾರಿಗೊಳಿಸಿದ್ದು..

Farmers Crop Survey App 2020-21 ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆ ಸಮೀಕ್ಷೆ ಮಾಡುವ ಕೆಲಸ ರಾಜ್ಯದಲ್ಲಿ ಯಶಸ್ವಿಯಾಗಿದೆ. ರಾಜ್ಯದ 2 ಕೋಟಿ 10 ಲಕ್ಷ ಹೆಚ್ಚಿನ ತಾಕುಗಳು (agriculture holding) ಬೆಳೆ ಸಮೀಕ್ಷೆಯಲ್ಲಿ ನೋಂದಣಿಯಾಗಿರುವುದು ಹೆಮ್ಮೆಯ ವಿಚಾರ. ರೈತ ಬೆಳೆ ಸಮೀಕ್ಷೆ ಎನ್ನುವುದು ಬರೀ ಸಮೀಕ್ಷೆಯಾಗದೇ ಉತ್ಸವವನ್ನಾಗಿ ಮಾಡಿದ್ದಕ್ಕೆ ಜನಕ್ಕೆ ವಂದನೆಗಳು ಎಂದವರು ಕೃಷಿ ಸಚಿವ ಬಿ.ಸಿ. ಪಾಟೀಲ.

ಈ ಅ್ಯಪ್​ಗೆ ಕೇಂದ್ರ ಸರ್ಕಾರದಿಂದ ಕೂಡ ಉತ್ತಮ ಪ್ರಶಂಸೆ ದೊರಕಿದೆ. ಕೇಂದ್ರದ ಕೃಷಿ ಕಾರ್ಯದರ್ಶಿ ಸಹ ಬೆಳೆ ಸಮೀಕ್ಷೆ ಬಳಕೆ, ಪ್ರಯೋಜನ, ರೈತರಿಗಾಗುವ ಲಾಭ, ಇಲಾಖೆಗಾಗುವ ಆರ್ಥಿಕ ಲಾಭ ಕಂಡು ಈ ಯೋಜನೆಯನ್ನು ದೇಶದ ಇತರೆ ರಾಜ್ಯಗಳಿಗೂ ಸಹ ವಿಸ್ತರಿಸಲು ಮುಂದಾಗಿರುವುದು ಶ್ಲಾಘನೀಯ.

ತಂತ್ರಜ್ಞಾನವನ್ನು ಬಳಸಿ ಬೆಳೆ ಸಮೀಕ್ಷೆ ಮಾಡಿರುವುದು ಬಹಳ ಲಾಭದಾಯಕವಾಗಿದ್ದು, ತಂತ್ರಜ್ಞಾನದ ಬೆಳೆ ಸಮೀಕ್ಷೆಯಿಂದ ಸುಮಾರು 7 ಲಕ್ಷ ಮೆಕ್ಕೆಜೋಳ ಬೆಳೆದ ರೈತರಿಗೆ ನಷ್ಟ ಪರಿಹಾರ, ಹಣ್ಣು, ಹೂವು ತರಕಾರಿ ಬೆಳೆದ ರೈತರಿಗೆ ಸೂಕ್ತ ಪ್ಯಾಕೇಜ್ ಸೇರಿದಂತೆ ಸರ್ಕಾರದಿಂದ ರೈತರಿಗೆ ಸೌಲಭ್ಯವನ್ನು ನೀಡಲು ರೈತರು ಮನೆಯಿಂದ ಹೊರಗೆ ಹೋಗದೇ ಅವರ ಖಾತೆಗೆ ಪರಿಹಾರ, ಸೌಲಭ್ಯ ಜಮೆಯಾಗಲು ಈ ತಂತ್ರಜ್ಞಾನ ನೆರವಾಗಿದೆ ಎಂದು ಪಾಟೀಲರು ತಿಳಿಸಿದ್ದಾರೆ.

ಅಲ್ಲದೇ ಇದಕ್ಕೆ ಪೂರಕವಾಗಿ ಬೆಳೆ ದರ್ಶಕ್ ಆಪ್-2020 ಮತ್ತೊಂದು ಆಪ್ ಲೋಕಾರ್ಪಣೆಗೊಳಿಸಿದ್ದು, ಅಪ್ಲೋಡ್ ಆಗಿರುವ ಬೆಳೆಯ ವಿವರಗಳ ಮಾಹಿತಿಯನ್ನು ಪಡೆಯಬಹುದು. ಅಲ್ಲದೇ ಈ ಆಪ್ ಮೂಲಕ ಅಪ್ಲೊಡ್ ಆದ ವಿವರಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿಗೂ ಅವಕಾಶ ಕಲ್ಪಿಸಿರುವುದು ಕೃಷಿಯಲ್ಲಿ ನವೀನತೆಯ ಪ್ರಯೋಗಕ್ಕೆ ಸಾಕ್ಷಿಯಾಗಿದೆ ಎಂದರೆ ಅತಿಶಯೋಕ್ತಿಯಾಗದು.

ಮುಂಗಾರು ಬೆಳೆ ಸಮೀಕ್ಷೆ ಶೇ.100 ರಷ್ಟು ಯಶಸ್ವಿಯಾದ ಬೆನ್ನಲ್ಲೆ ಕೃಷಿ ಇಲಾಖೆ ಮುಂಗಾರು ಬೆಳೆ ಸಮೀಕ್ಷೆ ನಡೆಸಿದ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆ ಸಹ ಡಿಸೆಂಬರ್ 10 ರಿಂದ ಪ್ರಾರಂಭ ಮಾಡಿದೆ.