ಪಾದರಾಯನಪುರ ಗೂಂಡಾಗಿರಿ: ಜಮೀರ್ ಪೊಲೀಸರಿಗೆ ಕೇಳಿದ ಬಾಲಿಶ ಪ್ರಶ್ನೆ ಏನು?

ಬೆಂಗಳೂರು: ದೇಶದಲ್ಲಿ ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ಲಾಕ್​ಡೌನ್ ಚಾಲ್ತಿಯಲ್ಲಿದೆ. ಹೇಳ ಕೇಳಿ ಇದು ಜನತಾ ಕರ್ಫ್ಯೂ ಕಾಲ ಪೊಲೀಸರಿಗೂ 24/7 ಡ್ಯೂಟಿ ಇರುತ್ತದೆ. ಆದ್ರೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಪಾದರಾಯನಪುರ ಗೂಂಡಾಗಳ ಬೆಂಬಲಕ್ಕೆ ನಿಂತಿರುವ ದಾಟಿಯಲ್ಲಿ ಪೊಲೀಸರು ಆ ಹೊತ್ತಿನಲ್ಲಿ ಅಲ್ಲಿಗೆ ಯಾಕೆ ಹೋಗಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಜನತಾ ಕರ್ಫ್ಯೂ ಕಾಲದಲ್ಲಿ ಪೊಲೀಸರು 24/7 ಡ್ಯೂಟಿಯಲ್ಲಿ ಇರುತ್ತಾರೆ ಎಂಬುದು ಜಮೀರ್​ಗೆ ಹೇಗೆ ಅರ್ಥವಾಗ ಬೇಕು ಅಲ್ವಾ? ನಿನ್ನೆ ಕ್ವಾರಂಟೈನ್‌ಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. […]

ಪಾದರಾಯನಪುರ ಗೂಂಡಾಗಿರಿ: ಜಮೀರ್ ಪೊಲೀಸರಿಗೆ ಕೇಳಿದ ಬಾಲಿಶ ಪ್ರಶ್ನೆ ಏನು?
ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ
ಸಾಧು ಶ್ರೀನಾಥ್​

Updated on: Apr 20, 2020 | 11:54 AM

ಬೆಂಗಳೂರು: ದೇಶದಲ್ಲಿ ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ಲಾಕ್​ಡೌನ್ ಚಾಲ್ತಿಯಲ್ಲಿದೆ. ಹೇಳ ಕೇಳಿ ಇದು ಜನತಾ ಕರ್ಫ್ಯೂ ಕಾಲ ಪೊಲೀಸರಿಗೂ 24/7 ಡ್ಯೂಟಿ ಇರುತ್ತದೆ. ಆದ್ರೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಪಾದರಾಯನಪುರ ಗೂಂಡಾಗಳ ಬೆಂಬಲಕ್ಕೆ ನಿಂತಿರುವ ದಾಟಿಯಲ್ಲಿ ಪೊಲೀಸರು ಆ ಹೊತ್ತಿನಲ್ಲಿ ಅಲ್ಲಿಗೆ ಯಾಕೆ ಹೋಗಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಜನತಾ ಕರ್ಫ್ಯೂ ಕಾಲದಲ್ಲಿ ಪೊಲೀಸರು 24/7 ಡ್ಯೂಟಿಯಲ್ಲಿ ಇರುತ್ತಾರೆ ಎಂಬುದು ಜಮೀರ್​ಗೆ ಹೇಗೆ ಅರ್ಥವಾಗ ಬೇಕು ಅಲ್ವಾ?

ನಿನ್ನೆ ಕ್ವಾರಂಟೈನ್‌ಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. ರಾತ್ರಿ ವೇಳೆ ಕ್ವಾರಂಟೈನ್ ಮಾಡುವುದು ಬೇಡ ಅಂದಿದ್ದ ಬಿಬಿಎಂಪಿ ಆಯುಕ್ತರ ಜತೆ ನಾನು ಈ ಬಗ್ಗೆ ಮಾತಾಡಿದ್ದೇನೆ. ಬೆಳಗ್ಗೆ ನಾನೇ ಬರುವುದಾಗಿ ಅವರಿಗೆ ತಿಳಿಸಿದ್ದೆ. ಹಗಲಿನ ವೇಳೆ ಹೋಗಬೇಕಿತ್ತು ಎಂದು ನಾನು ಹೇಳಿದ್ದೇನೆ. ಕೊರೊನಾ ಸೋಂಕಿತರಿದ್ದರೆ ಒದ್ದು ಕರೆದುಕೊಂಡು ಹೋಗಿ. ಶಂಕಿತರು ಇದ್ದಾಗ ಹಗಲು ವೇಳೆ ಹೋಗಬೇಕಾಗಿತ್ತು. ಒಬ್ರೂ ಇಬ್ಬರಲ್ಲ ಅಲ್ಲಿ ಸುಮಾರು 58 ಜನರಿದ್ದಾರೆ. ಹೀಗಾಗಿ ಹಗಲು ವೇಳೆ ಹೋಗಬೇಕಿತ್ತು ಎಂದಿದ್ದಾರೆ.

Published On - 11:25 am, Mon, 20 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us