AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಬದಲಾವಣೆಯ ಹೊಗೆ: ಹೈಕಮಾಂಡ್ ಅಲರ್ಟ್​

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿರುವ ಪ್ರತಿ ಚಟುವಟಿಕೆಗಳು ಬೆಂಕಿಯಷ್ಟೇ ಧಗಧಗಿಸುತ್ತಿದೆ. ಇದರ ಶಾಖ ದೂರದ ದೆಹಲಿಗೆ ಹೋಗಿ ಮುಟ್ಟುತ್ತಿದೆ. ಯಾಕಂದ್ರೆ ಸಚಿವರ ಸೀಕ್ರೆಟ್ ಸಭೆಗಳು ಅಷ್ಟೊಂದು ಕುತೂಹಲದ ಜೊತೆ ಡಿಕೆ ಬ್ರದರ್ ಆತಂಕಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನು? ಕಾಂಗ್ರೆಸ್ ಕೋಟೆಯಲ್ಲಿ ಆಗ್ತಿರೋ‌ ಮಿಂಚಿನ ಚಟುವಟಿಕೆ ಏನು ಎನ್ನುವ ಒಂದು ವರದಿ ಇಲ್ಲಿದೆ ನೋಡಿ.

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಬದಲಾವಣೆಯ ಹೊಗೆ: ಹೈಕಮಾಂಡ್ ಅಲರ್ಟ್​
ಕರ್ನಾಟಕ ಕಾಂಗ್ರೆಸ್
Follow us
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 9:36 PM

ಬೆಂಗಳೂರು, (ಅಕ್ಟೋಬರ್ 09): ಮುಡಾ ಹಗರಣದಲ್ಲಿ ಇಡಿ ಪ್ರವೇಶದ ಬಳಿಕ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಭೆ ಮೇಲೆ ಸಭೆಗಳು.. ಗುಪ್ತ್ ಗುಪ್ತ್ ಚರ್ಚೆಗಳು.. ರಾಜ್ಯ ರಾಜಕಾರಣದಲ್ಲಿ ಈಗ ನಡೆಯುತ್ತಿರುವ ಒಂದೊಂದೇ ಸಭೆಗಳು ಹಲವು ಚರ್ಚೆಗೆ ಗ್ರಾಸವಾಗುವ ಜೊತೆ ಜೊತೆಗೆ ಕುತೂಹಲ ಹುಟ್ಟಿಸುತ್ತಿವೆ. ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋದ್ರು. ಯಾಕೆ ಹೋದ್ರೂ ಎನ್ನುವುದೇ ಚರ್ಚೆಯ ಕೇಂದ್ರ ಬಿಂದುವಾಗಿದೆ. ಹೆಚ್ಚು ಕಡಿಮೆ ಕಳೆದೊಂದು ವಾರದಿಂದ ನಡೆಯುತ್ತಿರುವ ರಹಸ್ಯ ಸಭೆಗಳ ಜಂಜಾಟಕ್ಕೆ ದೂರದ ದೆಹಲಿ ಹೈಕಮಾಂಡ್ ನಾಯಕರು ಕೂಡ ತಲೆಕೆಡಿಸಿಕೊಂಡಿದ್ದಾರೆ.

ಕುತೂಹಲ ಹೆಚ್ಚಿಸಿದ ದಲಿತ ಸಚಿವರ‌ ಸೀಕ್ರೇಟ್ ಮೀಟಿಂಗ್

ರಾಜ್ಯ ರಾಜಕೀಯದಲ್ಲೀಗ ಬದಲಾವಣೆಯ ಬಿರುಗಾಳಿ ಎದ್ದಿದೆ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೋರ್ಟ್​ನಲ್ಲಿ ಹೋರಾಡುತ್ತಿರುವಾಗ ಬದಲಾವಣೆ ಎಂಬ ಬೆಂಕಿ ಚೆಂಡು ಎಲ್ಲರ ಮನೆ ಬಾಗಿಲಿಗೆ ಹೋಗಿ ಬರುತ್ತಿದೆ. ಇದೇ ವಿಚಾರವಾಗಿ ಸಚಿವರು, ಶಾಸಕರು ಸೀಕ್ರೆಟ್ ಸಭೆಗಳನ್ನ ನಡೆಸ್ತಿದ್ದಾರೆ‌. ನಿನ್ನೆಯಷ್ಟೇ ಮೈಸೂರಿನಲ್ಲಿ ಮೂವರು ದಲಿತ ಸಚಿವರು ಸಭೆ ನಡೆಸಿದ್ದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.. ದಸರಾ ಪ್ರಯುಕ್ತ ಮೈಸೂರಿಗೆ ತೆರಳಿದ್ದ ಸಚಿವ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ‌ ಹಾಗೂ ಹೆಚ್ ಸಿ ಮಹಾದೇವಪ್ಪ ಸಭೆ ಮಾಡಿದ್ದರು. ಸಂಸದ ಸುನೀಲ್ ಬೋಸ್ ನಿವಾಸದಲ್ಲಿ ನಡೆದಿದ್ದ ರಹಸ್ಯ ಮೀಟಿಂಗ್ ಬದಲಾವಣೆ ಎಂಬ ಚರ್ಚೆಗೆ ಕಾರಣವಾಗಿದೆ. ಇದೇ ಸಭೆ ಕುರಿತ ಪ್ರಶ್ನೆಗೆ ಸಚಿವರು ಕಾಫಿಗೆ ಟಚ್ ಕೊಟ್ಟಿದ್ದಾರೆ.‌‌ನಾವು ಕಾಫಿ ಪೇ ಚರ್ಚಾ ನಡೆಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಚಿವರು ಅದೇನೇ ಹೇಳಿದ್ರೂ ಸಭೆ ಮಾತ್ರ ಕುತೂಹಲ ಇನ್ನಷ್ಟು ಹೆಚ್ಚಿಸಿದೆ. ಯಾಕಂದ್ರೆ ಸಿದ್ದರಾಮಯ್ಯ ಅವರ ಅತ್ಯಾಪ್ತ ಸಚಿವರು ಹಾಗೂ ದಲಿತರು ಸಚಿವರು ಎನಿಸಿಕೊಂಡುವರು ಸೀಕ್ರೆಟ್ ಮೀಟಿಂಗ್ ಮಾಡಿದ್ದು ಡಿಕೆ ಬ್ರದರ್ ಅಲರ್ಟ್ ಆಗುವಂತೆ ಮಾಡಿದೆ.. ಇದೇ ಕಾರಣಕ್ಕೆ ಡಿಕೆ ಸಹೋದರರು ಬೇರೆಯದ್ದೇ ರೀತಿಯಲ್ಲಿ ದಾಳ‌ ಉರುಳಿಸುತ್ತಿದ್ದಾರೆ..

ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ದೂರದ ದೆಹಲಿ ಹೈಕಮಾಂಡ್ ನಾಯಕರು ಅಲರ್ಟ್ ಆಗಿದ್ದಾರೆ. ಸೀಕ್ರೆಟ್ ಮೀಟಿಂಗ್ ಗಳಿಗೆ ಬ್ರೇಕ್ ಹಾಕುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಸ್ಕ್ ನೀಡಿದಂತಿದೆ. ಕೆಲ ಸಚಿವರ ಹೇಳಿಕೆಗಳು, ಪ್ರತ್ಯೇಕ ಸಭೆಗಳು ನಡೀತಿರೋದು ಹೈಕಮಾಂಡ್ ಗೆ ಗೊತ್ತಾಗಿದೆ. ಅಲ್ಲದೇ ಒಳ ಜಗಳದಿಂದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲಾದಕ್ಕೆ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್, ಸಚಿವರು, ಶಾಸಕರ ವಿರುದ್ದ ಕ್ರಮಕ್ಕೆ ಮುಂದಾಗಿದೆ.

​ಸಿಎಂ-ಡಿಸಿಎಂಗೆ ಹೈಕಮಾಂಡ್ ಖಡಕ್ ಸೂಚನೆ

ಈ ಬಗ್ಗೆ ದೂರವಾಣಿ ಮೂಲಕ ಸಿಎಂ, ಡಿಸಿಎಂ ಜೊತೆ ಕೆ ಸಿ ವೇಣುಗೋಪಾಲ ಮಾತುಕತೆ ನಡೆಸಿದ್ದು,. ಇಂತಹ ಬೆಳವಣಿಗೆಗಳನ್ನು ಸಹಿಸಲಾಗದು‌. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಗೆ ಲಾಭ ಎಂಬ ಅಭಿಪ್ರಾಯವನ್ನ ವೇಣುಗೋಪಾಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಎನ್ನುವ ಕಾರಣಕ್ಕೆ ಇವತ್ತು ಸಿಎಂ ಹಾಗೂ ಡಿಸಿಎಂ ಸಭೆ ನಡೆಸಿದ್ರು.. ಈ ವೇಳೆ ಶಾಸಕರು, ಸಚಿವರ ‌ಮೀಟಿಂಗ್ ಗಳಿಗೆ ಕಡಿವಾಣ ಹಾಕೋದರ ಕುರಿತು ಚರ್ಚೆ ನಡೆಸಲಾಗಿದೆಯಂತೆ..ಆದ್ರೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಬೇರೆಯದ್ದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ..

ಅದೇನೇ ಹೇಳಿ, ಬೆಂಕಿ ಇಲ್ಲದೇ ಹೊಗೆಯಾಡಲ್ಲ, ಪೆಟ್ರೋಲ್ ಡೀಸೆಲ್ ಇಲ್ಲದೇ ಗಾಡಿ ಓಡಲ್ಲ. ಅದೇ ರೀತಿ ಈ ರಹಸ್ಯ ಸಭೆಗಳು. ಬದಲಾವಣೆ, ಅದು ಇದು ಎಂಬ ಬೆಂಕಿ ಕಾಂಗ್ರೆಸ್ ಮನೆಯಲ್ಲಿ ಹೊಗೆಯಾಡುತ್ತಿದೆ. ಇದು ಮುಂದೆ ಯಾವ್ಯಾವ ಹಾದಿ‌ ಹಿಡಿಯುತ್ತದೆ ಎನ್ನುವುದನ್ನು ಕಾದುನೋಡಬೇಕಷ್ಟೇ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ಐತಿಹಾಸಿಕ ಪ್ರವಾಸಿತಾಣ ನಂದಿಗಿರಿಧಾಮ ಫುಲ್ ಟ್ರಾಫಿಕ್ ಜಾಮ್..!
ಐತಿಹಾಸಿಕ ಪ್ರವಾಸಿತಾಣ ನಂದಿಗಿರಿಧಾಮ ಫುಲ್ ಟ್ರಾಫಿಕ್ ಜಾಮ್..!
ಕೇವಲ 180 ಮೀಟರ್​​ ದೂರಕ್ಕೆ ಓಲಾ ಬೈಕ್ ಬುಕ್ ಮಾಡಿದ ಯುವತಿ
ಕೇವಲ 180 ಮೀಟರ್​​ ದೂರಕ್ಕೆ ಓಲಾ ಬೈಕ್ ಬುಕ್ ಮಾಡಿದ ಯುವತಿ