ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಐವರು ರೌಡಿಶೀಟರ್ ಮೈಸೂರು ಜಿಲ್ಲೆಯಿಂದ ಗಡಿಪಾರು

ರಾಜ್ಯದಲ್ಲಿ ಚುನಾವಣೆ ಘೋಷಣೆ ಹಿನ್ನೆಲೆ ನಗರದಲ್ಲಿ ಐವರು ರೌಡಿಶೀಟರ್​ಗಳು ಗಡಿಪಾರು ಮಾಡಲು ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸೂಚನೆ ನೀಡಿದ್ದಾರೆ. ಅದರಂತೆ ಡಿಸಿಪಿ ಮುತ್ತುರಾಜ್ ಐವರನ್ನ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದು ಗಡಿಪಾರು ಮಾಡಲಾಗಿದೆ.

ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಐವರು ರೌಡಿಶೀಟರ್ ಮೈಸೂರು ಜಿಲ್ಲೆಯಿಂದ ಗಡಿಪಾರು
ರೌಡಿ ಶೀಟರ್​ಗಳನ್ನ ಗಡಿಪಾರು ಮಾಡಲು ಮೈಸೂರು ಪೊಲೀಸ್​ ಕಮೀಷನರ್​ ಸೂಚನೆ

Updated on: Mar 30, 2023 | 7:13 AM

ಮೈಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka Assembly Election) ಘೋಷಣೆ ಹಿನ್ನೆಲೆ ನಗರದಲ್ಲಿ ಐವರು ರೌಡಿಶೀಟರ್​ಗಳು ಗಡಿಪಾರು ಮಾಡಲು ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸೂಚನೆ ನೀಡಿದ್ದಾರೆ. ಅದರಂತೆ ಡಿಸಿಪಿ ಮುತ್ತುರಾಜ್ ಐವರನ್ನ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕದಡಿ ಅಶಾಂತಿ ಮೂಡಿಸುವ ಸಂಭಾವ್ಯವಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕಾನೂನು ಬಾಹಿರ ಚಟುವಟಿಕೆ, ಹಿಂಸೆ, ಬೆದರಿಕೆ, ಅಪರಾಧ ಚಟುವಟಿಕೆ ನಡೆಸದಂತೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಎಚ್ಚರಿಕೆ ನೀಡಿ ರೌಡಿ ಶೀಟರ್‌ಗಳನ್ನ ಗಡಿಪಾರು ಸೂಚನೆ ನೀಡಿದ್ದಾರೆ.

ಗಡಿಪಾರು ಮಾಡಲಾದ ರೌಡಿ ಶೀಟರ್‌ಗಳು

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ರೌಡಿ ಶೀಟರ್ ಯಶವಂತ್ ಅಲಿಯಾಸ್ ಯಶು ಅಲಿಯಾಸ್ ಮಿಕ್ಕಿಯನ್ನ
4 ತಿಂಗಳು ಶಿವಮೊಗ್ಗ ಜಿಲ್ಲೆಗೆ ಗಡಿಪಾರು, ಸುಬಾನ್ ಅಲಿಯಾಸ್ ಕೊಯ್ತಾಬಾಬುನನ್ನ 4 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಪಾರು, ಎನ್.ಆರ್.ಹಾಗೂ ಮಂಡಿ ಪೊಲೀಸ್ ಠಾಣಾ ರೌಡಿಶೀಟರ್ ಕೃಷ್ಣ ಅಲಿಯಾಸ್ ಕಿಟ್ಟಿಯನ್ನ 5 ತಿಂಗಳ ಕಾಲ ದಾವಣಗೆರೆ ಜಿಲ್ಲೆಗೆ ಗಡಿಪಾರು, ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸೈಯದ್ ಅಯೂಬ್ ಅಲಿಯಾಸ್ ಬಿಡ್ಡನನ್ನ 5 ತಿಂಗಳು ಚಿಕ್ಕಮಂಗಳೂರು ಜಿಲ್ಲೆಗೆ ಗಡಿಪಾರು ಮತ್ತು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ತೌಸೀಫ್ ಖಾನ್ ಅಲಿಯಾಸ್ ಡಾನ್​ನನ್ನ 5 ತಿಂಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಈ ಐವರನ್ನ ಗಡಿಪಾರು ಮಾಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 am, Thu, 30 March 23