ಸಚಿವ ಮಹದೇವಪ್ಪ ಕ್ಷೇತ್ರದ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಕಡಿತ, ಸರ್ಕಾರಿ ಕೆಲಸಗಳು ಸ್ಥಗಿತ

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಮತ್ತೊಂದೆಡೆ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸಿದೆ ಕೋಟಿಗಟ್ಟಲ್ಲೇ ಹಣ ಬಾಕಿ ಉಳಿಸಿಕೊಂಡಿವೆ. ಅದರಂತೆ ಮುಖ್ಯಮಂತ್ರಿ ತವರು ಜಿಲ್ಲೆ, ಸಚಿವ ಡಾ ಹೆಚ್​ಸಿ ಮಹದೇವಪ್ಪ ಪ್ರತಿನಿಧಿಸುವ ಟಿ ನರಸೀಪುರ ತಾಲೂಕು ಆಡಳಿತ ಸಹ ಬಿಲ್​ ಬಾಕಿ ಉಳಿಸಿಕೊಂಡಿದೆ. ಇದರಿಂದ ಚೆಸ್ಕಾಂ ಮಿನಿ ವಿಧಾನಸೌಧದ ಕರೆಂಟ್ ಕಟ್ ಮಾಡಿದೆ.

ಸಚಿವ ಮಹದೇವಪ್ಪ ಕ್ಷೇತ್ರದ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಕಡಿತ, ಸರ್ಕಾರಿ ಕೆಲಸಗಳು ಸ್ಥಗಿತ
ಟಿ.ನರಸೀಪುರ ಮಿನಿ ವಿಧಾನಸೌಧ
Edited By:

Updated on: Oct 12, 2023 | 11:50 AM

ಮೈಸೂರು, (ಅಕ್ಟೋಬರ್ 12): ಕರ್ನಾಟಕದಲ್ಲಿ (Karnataka) ಮಳೆ ಮಾಯವಾಗಿದೆ. ಡ್ಯಾಂಗಳೆಲ್ಲಾ ಖಾಲಿಯಾಗಿವೆ. ಈ ಬರದ ನಡುವೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಇದರಿಂದ ವಿದ್ಯುತ್ ನಿಗಮಗಳು ಬೇರೆ-ಬೇರೆ ನೆಪದಲ್ಲಿ ಲೋಡ್​ ಶೆಡ್ಡಿಂಗ್​ ಆರಂಭಿಸಿವೆ. ಇದರ ಮಧ್ಯೆ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್​ ವರೆಗೂ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಮತ್ತೊಂದೆಡೆ ಸರ್ಕಾರಿ ಕಚೇರಿಗಳು ವಿದ್ಯುತ್​ ಬಿಲ್ ಪಾವತಿಸಿದೇ ಭಾರೀ ಮೊತ್ತ ಬಾಕಿ ಉಳಿಸಿಕೊಂಡಿವೆ. ಅದರಂತೆ ಮುಖ್ಯಮಂತ್ರ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ಟಿ.ನರಸೀಪುರ ತಾಲೂಕು ಆಡಳಿತ ವಿದ್ಯುತ್​ ಬಿಲ್​ ಮೊತ್ತ ಬಾಕಿ ಉಳಿಸಿಕೊಂಡಿದೆ. ಇದರಿಂದ ಚೆಸ್ಕಾಂ(Chamundeshwari Electricity Supply Corporation Limited)  ಟಿ.ನರಸೀಪುರದ ಮಿನಿ ವಿಧಾನಸೌಧದ ಕರೆಂಟ್ ಕಟ್ ಮಾಡಿದೆ.

ಹೌದು….ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಅವರ ಕ್ಷೇತ್ರ ಟಿ.ನರಸೀಪುರದಲ್ಲಿರುವ ಮಿನಿ ವಿಧಾನಸೌಧದ ವಿದ್ಯುತ್​ ಕಡಿತಗೊಳಿಸಲಾಗಿದೆ. ತಾಲೂಕು ಆಡಳಿತ ಚೆಸ್ಕಾಂಗೆ 2,45,000 ಬಾಕಿ ಬಿಲ್ ಉಳಿಸಿಕೊಂಡಿದೆ. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಚೆಸ್ಕಾಂ, ಮಿನಿ ವಿಧಾನಸೌಧದ ವಿದ್ಯುತ್ ಕಡಿತಗೊಳಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್​ ಇಲ್ಲದೇ ಮಿನಿ ವಿಧಾನಸೌಧದಲ್ಲಿ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದೆಡೆ ವಿದ್ಯುತ್​ ಬೇಡಿಕೆ ಹೆಚ್ಚಳ, ಮತ್ತೊಂದೆಡೆ ಉತ್ಪಾದನೆಯಲ್ಲಿ ಕುಸಿತ: ಇಲ್ಲಿದೆ ಅಂಕಿ-ಅಂಶ

ನರಸೀಪುರ ಮಾತ್ರ ಒಂದೇ ಅಲ್ಲ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ವಿದ್ಯುತ್​ ಬಿಲ್ ಪಾವತಿಸಿದೇ ಬಾಕಿ ಉಳಿಸಿಕೊಂಡಿವೆ. ಇದರಿಂದ ಇಂಧನ ಇಲಾಖೆಗೆ ಬಾಕಿ ಬಿಲ್​ ಕೋಟಿಗಟ್ಟಲೇ ಬರಬೇಕಿದೆ.

ರಾಜ್ಯದಲ್ಲಿ ಶುರುವಾಯ್ತು ಲೋಡ್​ ಶೆಡ್ಡಿಂಗ್

ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 7 ತಾಸು ತ್ರೀಪೇಸ್‌ ಕರೆಂಟ್‌ ನೀಡುತ್ತಿದ್ದ ಸರ್ಕಾರ ಅದನ್ನ ಎರಡು ತಾಸಿಗೆ ಇಳಿಸಿದೆ. ಇದ್ರಿಂದ ರೈತರಂತೂ ಕೆರಳಿದ್ದಾರೆ. ಕೆಲವರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ನ ಶಾಸಕ ಡಾ.ರಂಗನಾಥ್​ಗೂ ಲೋಡ್​ಶೆಡ್ಡಿಂಗ್ ಬಿಸಿ ತಟ್ಟಿತ್ತು. ಆಡಳಿತ ಪಕ್ಷದ ಶಾಕರೇ ಆಗಿರೋ ರಂಗನಾಥ್‌, ಅಮೃತ ಯೋಜನೆ ಬಗ್ಗೆ ಪುರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ರು. ಈ ವೇಳೆ ಕರೆಂಟ್ ಕೈಕೊಟ್ಟಿದ್ದರಿಂದ ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಶಾಸಕರು ಸಭೆ ಮಾಡಿದ್ದರು. ಇನ್ನು ತುಮಕೂರಿನಲ್ಲಿ ಕೋರ್ಟ್​ ಕಲಾಪಕ್ಕೂ ಲೋಡ್​ ಶೆಡ್ಡಿಂಗ್ ಬಿಸಿ ತಟ್ಟಿತ್ತು. ಇದರಿಂದ ನ್ಯಾಯಾಧೀಕರು ಮೊಬೈಲ್​ ಟಾರ್ಚ್​ನಲ್ಲೇ ಪ್ರಕರಣದ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Thu, 12 October 23