AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಳೇ ಕಳ್ಳಕಾಕರ ಹಾವಳಿ! ಜೋರು ಗಾಳಿ ಬೀಸಿದ್ರೆ ಸಾಕು ಹೈ ವೋಲ್ಟೇಜ್ ಕಂಬಗಳೇ ಉರುಳಬಹುದು, ಜಾಗ್ರತೆ!

ಅದೇನೆ ಆಗ್ಲಿ ಅಲ್ಪ ಕಾಸಿಗೆ ಆಸೆ ಪಟ್ಟು ಮಾಡಬಾರದ ಕೆಲಸವನ್ನ ಕಳ್ಳಕಾಕರು ಮಾಡಿದ್ದಾರೆ. ಇದರ ದುಷ್ಪರಿಣಾಮ ಏನಾಗುತ್ತೆ ಅನ್ನೋದೂ ಅವರ ಅರಿವಿಗೆ ಬಂದಿಲ್ಲ.. ಕೆಇಬಿ ಅಧಿಕಾರಿಗಳು ಇದನ್ನ ತತಕ್ಷಣವೇ ಸರಿ ಪಡಿಸಬೇಕಿದೆ.

ಹೊಸ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಳೇ ಕಳ್ಳಕಾಕರ ಹಾವಳಿ! ಜೋರು ಗಾಳಿ ಬೀಸಿದ್ರೆ ಸಾಕು ಹೈ ವೋಲ್ಟೇಜ್ ಕಂಬಗಳೇ ಉರುಳಬಹುದು, ಜಾಗ್ರತೆ!
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಳ್ಳಕಾಕರ ಹಾವಳಿ!
Follow us
ಸಾಧು ಶ್ರೀನಾಥ್​
|

Updated on:May 17, 2023 | 2:58 PM

ಕಳ್ಳಕಾಕರ ಕಾಟಕ್ಕೆ ಅಕ್ಷರಶಃ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.. ಯಾರೋ ಮಾಡಿದ ಯಡವಟ್ಟಿಗೆ ಅಮಾಯಕರು ಪರಿತಪ್ಪಿಸುವಂತಾಗಿದೆ.. ಅಷ್ಟಕ್ಕೂ ಅಲ್ಲಿ ಆಗಿದಾದ್ರು ಏನು.. ಜನರ ಜೀವದ ಜೊತೆ ಆಟವಾಡುತ್ತಿರುವವರಾದ್ರು ಯಾರು ಅಂತೀರಾ ಈ ಸ್ಟೋರಿ ನೋಡಿ. ಅಂಕುಡೊಂಕಾಗಿ ಬಳ್ಳಿಯಂತೆ ಬಳಕುತ್ತಾ ಬಾಗಿ ನಿಂತಿರೊ ವಿದ್ಯುತ್ ಕಂಬಗಳು.. ಮತ್ತೊಂದೆಡೆ ಹೈ ಸ್ಪೀಡಲ್ಲಿ ಚಲಿಸುತ್ತಿರೊ ವಾಹನಗಳು.. ಮತ್ತೊಂದೆಡೆ ಭಯಭೀತರಾಗಿ ಸಂಚರಿಸುತ್ತಿರೊ ವಾಹನ ಸವಾರರು.. ಈ ಎಲ್ಲಾ ದೃಶ್ಯಗಳು ಕಣ್ಣಿಗೆ ರಾಚಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬಳಿ.. ಹೌದು ಕಳ್ಳಕಾಕರ ಕಾಟಕ್ಕೆ ವಿದ್ಯುತ್ ಕಂಬಗಳು ಬಲಹೀನಗೊಂಡಿವೆ. ಜೋರು ಗಾಳಿ ಬೀಸಿದ್ರೆ ಸಾಕು ಕೆಳಗೆ ಉರುಳುವ ಸಾಧ್ಯತೆಯಿದೆ. ಇದಕ್ಕೆಲ್ಲಾ ಕಾರಣ ಮತ್ಯಾರು ಅಲ್ಲಾ ಬೀದಿ ಚೋರರು!

ಆಗಿರುವುದಿಷ್ಟೇ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ 11 ಕೆವಿ ಹೈವೋಲ್ಟೇಜ್ ಕಂಬಗಳನ್ನ ಅಳವಡಿಸಲಾಗಿದೆ.. ಆ ಕಂಬಗಳಿಗೆ ಅಲ್ಯೂಮಿನಿಯಮ್ ಪ್ಲೇಟ್ ಗಳನ್ನ ಸಹಾಯಕ್ಕಾಗಿ ಅಳವಡಿಸಲಾಗಿದೆ.. ಆದ್ರೆ ಆ ಪ್ಲೇಟ್ ಗಳನ್ನ ಕಳ್ಳರು ಸಾರಾಯಿ ಲಿಕ್ಕರ್​ ಆಸೆಗಾಗಿ ಕದ್ದಿದ್ದಾದ್ರೆ. ಪರಿಣಾಮ ವಿದ್ಯುತ್ ಕಂಬಗಳು ಬಲಹೀನವಾಗಿದೆ. ಪರಿಣಾಮ ಜೋರು ಗಾಳಿ ಬೀಸಿದ್ರೆ ಶಿಥಿಲಗೊಂಡಿರುವ ಕಂಬಗಳು ಬೀಳುವ ಸಾಧ್ಯತೆಯಿದೆ. ದಿನನಿತ್ಯ ಲಕ್ಷಾಂತರ ವಾಹನಗಳು ಈ ಹೈ ವೆಯಲ್ಲಿ ಸಂಚರಿಸುತ್ತವೆ.. ಒಂದು ವೇಳೆ ರಸ್ತೆಯ ಮೇಲೆ ಈ ಹೈ ಟೆನ್ಷನ್ ಕಂಬ ಬಿದ್ದಿದ್ದೇ ಆದರೆ ದುರಂತ ನಡೆದು ಹೋಗುತ್ತೆ ಎಂಬ ಆತಂಕವಿದೆ.

ಅದೇನೆ ಆಗ್ಲಿ ಅಲ್ಪ ಕಾಸಿಗೆ ಆಸೆ ಪಟ್ಟು ಮಾಡಬಾರದ ಕೆಲಸವನ್ನ ಕಳ್ಳಕಾಕರು ಮಾಡಿದ್ದಾರೆ. ಇದರ ದುಷ್ಪರಿಣಾಮ ಏನಾಗುತ್ತೆ ಅನ್ನೋದೂ ಅವರ ಅರಿವಿಗೆ ಬಂದಿಲ್ಲ.. ಕೆಇಬಿ ಅಧಿಕಾರಿಗಳು ಇದನ್ನ ತತಕ್ಷಣವೇ ಸರಿ ಪಡಿಸಬೇಕಿದೆ. ಪೊಲೀಸರಿಗೆ ದೂರು ನೀಡಬೇಕಿದೆ. ಇಲ್ಲದೇ ಹೋದ್ರೆ ಮಾಡದ ತಪ್ಪಿಗೆ ಅಮಾಯಕರ ಜೀವ ಬಲಿಯಾಗೋದಂತು ಗ್ಯಾರಂಟಿ.

ವರದಿ: ಸೂರಜ್ ಪ್ರಸಾದ್, ಟಿವಿ9, ಮಂಡ್ಯ

Published On - 2:52 pm, Wed, 17 May 23

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?