AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ

HD Kote municipal office: ಕೆಲಸಕ್ಕೆ ಗೈರು ಹಾಜರಾಗಿದ್ದರೂ ಹೆಚ್.ಡಿ. ಕೋಟೆ ಪುರಸಭೆಯ ಸಂಘಟನಾಧಿಕಾರಿಗೆ ವೇತನ ಪಾವತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಪುರಸಭೆ ಸದಸ್ಯರಿಂದ ದೂರು ನೀಡಲಾಗಿದೆ. ಪುರಸಭೆಯ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ದೂರು ಕೇಳಿಬಂದಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತಿ ತಿಂಗಳು 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ
ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ
TV9 Web
| Edited By: |

Updated on: Jul 21, 2021 | 1:13 PM

Share

ಮೈಸೂರು: ಮೂರು ವರ್ಷಗಳ ಸುದೀರ್ಘ ಅವಧಿಗೆ ಕೆಲಸಕ್ಕೇ ಬಾರದೆ ಅಧಿಕಾರಿಯೊಬ್ಬ ವೇತನ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಈ ಅಕ್ರಮ ಬಟಾಬಯಲಾಗಿದೆ. ಪುರಸಭೆ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ಈ ದೂರು ಕೇಳಿಬಂದಿದ್ದು, ಈತ ಆಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಕೆಲಸಕ್ಕೆ ಗೈರು ಹಾಜರಾಗಿದ್ದರೂ ಹೆಚ್.ಡಿ. ಕೋಟೆ ಪುರಸಭೆಯ ಸಂಘಟನಾಧಿಕಾರಿಗೆ ವೇತನ ಪಾವತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಪುರಸಭೆ ಸದಸ್ಯರಿಂದ ದೂರು ನೀಡಲಾಗಿದೆ. ಪುರಸಭೆಯ ಸಂಘಟನಾಧಿಕಾರಿ ಎಸ್​. ಉಮಾಶಂಕರ್ ವಿರುದ್ಧ ದೂರು ಕೇಳಿಬಂದಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತಿ ತಿಂಗಳು 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ. ದಾಖಲಾತಿ ತಿದ್ದುಪಡಿ ಮಾಡಿ ಹಿರಿಯ ಅಧಿಕಾರಿಯಿಂದ ತಮ್ಮ ಖಾತೆಗೆ ವೇತನ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ವೇತನ ಪಡೆದ ಉಮಾಶಂಕರ್ ವಿರುದ್ಧ ಕ್ರಮಕ್ಕೆ ಆಗ್ರಹ:

Mysore HD Kote municipal officer umashankar absent from duty for 3 years but given salary monthly 2

ಅಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ ವರ್ಷಗಟ್ಟಲೆ ಲಕ್ಷಾಂತರ ರೂಪಾಯಿ ವೇತನ ಪಡೆದ ಉಮಾಶಂಕರ್

ಅಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ ವರ್ಷಗಟ್ಟಲೆ ಲಕ್ಷಾಂತರ ರೂಪಾಯಿ ವೇತನ ಪಡೆದ ಉಮಾಶಂಕರ್ ವಿರುದ್ಧ ತನಿಖೆ ನಡೆಸಿ, ಸಂಪೂರ್ಣ ವರದಿ ನೀಡಲು ಶಾಸಕ ಚಿಕ್ಕಮಾದು ಮೇಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಇದ್ದ ಪುರಸಭೆ ಮುಖ್ಯಾಧಿಕಾರಿ ವೇತನ ಮಂಜೂರು ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ನೂತನ ಮುಖ್ಯಾಧಿಕಾರಿ ಹೆಗಲಿಗೆ ಹಗರಣದ ತನಿಖೆ ಜವಾಬ್ದಾರಿ ವಹಿಸಲಾಗಿದೆ.

ನಾನು 5 ಲಕ್ಷ ರೂ.ಸಂಬಳದಲ್ಲಿ ಪ್ರತಿ ತಿಂಗಳು 2.75 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ; ದೇಶದ ಅಭಿವೃದ್ಧಿಗಾಗಿ ತೆರಿಗೆ ಕಟ್ಟಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್

(Mysore HD Kote municipal officer umashankar absent from duty for 3 years but given salary monthly)

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು