AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ: ಸಾಮಗ್ರಿಗಳನ್ನು ಬುಕ್​​ ಮಾಡಲು ಹೋದರೆ ಅನುಮತಿ ಕೇಳಿದ ಅಂಗಡಿ ಮಾಲೀಕ

ಮೈಸೂರಿನ ಹೆಚ್​.ಸಿ ಲಕ್ಷ್ಮಿಕಾಂತ್​ ಎಂಬುವರು ತಮ್ಮ ಮಗಳ ಮದುವೆಯನ್ನು ಇದೇ ತಿಂಗಳು ಏಪ್ರಿಲ್​ 23 ಮತ್ತು 24 ರಂದು ನಿಶ್ಚಯ ಮಾಡಿದ್ದಾರೆ. ಮದುವೆಗೆಂದು ಐಸ್​ ಕ್ರೀಮ್​ ಬುಕ್​​ ಮಾಡಲು ಹೋದರೇ, ಐಸ್​​ ಕ್ರೀಮ್​ ಸರಬರಾಜಿಗೆ, ಅಂಗಡಿ ಮಾಲೀಕರು, ಚುನಾವಣಾ ಆಯೋಗದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಮದುವೆಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ: ಸಾಮಗ್ರಿಗಳನ್ನು ಬುಕ್​​ ಮಾಡಲು ಹೋದರೆ ಅನುಮತಿ ಕೇಳಿದ ಅಂಗಡಿ ಮಾಲೀಕ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Apr 11, 2023 | 8:28 AM

Share

ಮೈಸೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election) ಘೋಷಣೆಯಾದ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಾಗಿದೆ. ಹೀಗಾಗಿ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಮತ್ತು ಹೆಚ್ಚಿನ ಪ್ರಮಾಣದ ಸಾಮಾಗ್ರಿಗಳನ್ನು ಸಾಗಿಸಲು ಸೂಕ್ತ ದಾಖಲೆ ಇರಬೇಕು ಅಥವಾ ಕಡ್ಡಾಯವಾಗಿ ಚುನಾವಣಾ ಆಯೋಗದ (Election Commission) ಅನುಮತಿಯನ್ನು ಪಡೆಯಬೇಕು. ಇಲ್ಲವಾದರೆ ಹಣ ಮತ್ತು ವಸ್ತುಗಳನ್ನು ಸೀಜ್​​ ಮಾಡಲಾಗುವುದು. ಈ ನೀತಿ ಸಂಹಿತೆ ನಿಯಮದ ಬಿಸಿ ಮದುವೆ ಮನೆಗಳಿಗೆ ತಟ್ಟಿದೆ. ಹೌದು ಮೈಸೂರಿನ (Mysore) ಹೆಚ್​.ಸಿ ಲಕ್ಷ್ಮಿಕಾಂತ್​ ಎಂಬುವರು ತಮ್ಮ ಮಗಳ ಮದುವೆಯನ್ನು ಇದೇ ತಿಂಗಳು ಏಪ್ರಿಲ್​ 23 ಮತ್ತು 24 ರಂದು ನಿಶ್ಚಯ ಮಾಡಿದ್ದಾರೆ. ಮದುವೆಗೆಂದು ಐಸ್​ ಕ್ರೀಮ್​ ಬುಕ್​​ ಮಾಡಲು ಹೋದರೇ, ಐಸ್​​ ಕ್ರೀಮ್​ ಸರಬರಾಜಿಗೆ, ಅಂಗಡಿ ಮಾಲೀಕ ಚುನಾವಣಾ ಆಯೋಗದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಲಕ್ಷ್ಮಿಕಾಂತ್​ ಕಂಗಾಲಾಗಿದ್ದಾರೆ.

ಐಸ್​ ಕ್ರೀಮ್​ ಮಾತ್ರವಲ್ಲದೇ ಮದುವೆಗೆ ಬೇಕಾದ ಉಡುಗೊರೆ ಮತ್ತು ದಿನಸಿ ಸಾಮಗ್ರಿ ಇತ್ಯಾದಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ಕೂಡ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾದ ಹಿನ್ನೆಲೆ ಲಕ್ಷ್ಮಿಕಾಂತ್​ ಅವರಿಗೆ ತೆಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಹಾಗೆ ಸಾಗಿಸಿದರೂ ಚೆಕ್​ ಪೋಸ್ಟ್​​ನಲ್ಲಿ ತಪಾಸಣೆ ವೇಳೆ ಸಿಕ್ಕಿಬೀಳಲಿದ್ದು, ಅಧಿಕಾರಿಗಳು ಸೀಜ್​ ಮಾಡಿಕೊಳ್ಳುತ್ತಾರೆ.

ಅನುಮತಿ ಇಲ್ಲಿದೆ ವಸ್ತುಗಳನ್ನು ಸಾಗಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ, ಚುನಾವಣಾ ಆಯೋಗ ನಮಗೆ ನಿರ್ದೇಶನ ನೀಡಿದೆ. ಈ ವಿಚಾರವನ್ನು ನಾವು ಲಕ್ಷ್ಮಿಕಾಂತ್​ ಅವರಿಗೆ ತಿಳಿಸಿದ್ದು, ಚುನಾವಣಾ ಆಯೋಗದ ಅನುಮತಿ ಪಡೆಯಿರಿ ಅಂತ ಹೇಳಿದ್ದೇವೆ ಎಂದು ಮೈಸೂರಿನ ಯಾದವಗಿರಿ ಐಸ್​​ ಕ್ರೀಮ್​​ ತಯಾರಕ ವಿಜಯಕುಮಾರ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀತಿ ಸಂಹಿತೆ ಜಾರಿ ಹಿನ್ನೆಲೆ ಶಸ್ತ್ರಾಸ್ತ್ರ ಬಳಕೆ ನಿಷೇಧ: ವಿನಾಯಿತಿ ನೀಡುವಂತೆ ಮೈಸೂರು ಪೊಲೀಸ್ ಕಮಿಷನರ್​ಗೆ ಪರವಾನಿಗೆದಾರರ ಮನವಿ

ಸಂಘಟಕರು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಆಯೋಗಕ್ಕೆ ನಿಗಾ ಇಡಲು ಅನುಕೂಲವಾಗುತ್ತದೆ. ಈ ಹಿಂದೆ ಸಾರ್ವಜನಿಕರಿಗೆ ಊಟ ಹಾಕಿಸುವ ಮೂಲಕ ರಾಜಕಾರಣಿಗಳು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಇದು ಕೂಡ ಮಾದರಿ ನೀತಿ ಸಂಹಿತೆ ಉಲ್ಲಂಘಟನೆಯಾಗಿದೆ. ಸಂಘಟಕರು ಅಧಿಕಾರ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆದು ಕಾರ್ಯಕ್ರಮ ಆಯೋಜನೆ ಮಾಡಬಹುದಾಗಿದೆ. ಆದರೆ ಈ ಸಮಾರಂಭಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

ಮದುವೆ ಮತ್ತಿತರ ಸಮಾರಂಭಗಳ ಆಯೋಜಕರು ಮದುವೆಯ ಆಮಂತ್ರಣ ಪತ್ರಿಕೆ, ಕಲ್ಯಾಣ ಮಂಟಪವನ್ನು ಬುಕ್ ಮಾಡಿದ ರಸೀದಿ ಮುಂತಾದ ವಿವರಗಳನ್ನು ಒದಗಿಸಿ, ಚುನಾವಣಾಧಿಕಾರಿಗಳಿಂದ ಸ್ವೀಕೃತಿ ಪತ್ರ ಪಡೆದರೇ ಅನುಮತಿ ಪಡೆದಂತೆ. “ಸರಕುಗಳು ಚೆಕ್ ಪೋಸ್ಟ್‌ಗಳ ಮೂಲಕ ಹಾದುಹೋಗಲು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳಿಂದ ಅನುಮತಿ ಪಡೆಯಲು ಸ್ವೀಕೃತಿ ಅಗತ್ಯ” ಎಂದು ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಮಲಾಬಾಯಿ ಬಿ. ಹೇಳಿದ್ದಾರೆ.

ರಾಜಕಾರಣಿಗಳನ್ನು ಆಹ್ವಾನಿಸಲು ಇದೆ ನಿಯಮ

ಅಲ್ಲದೆ, ರಾಜಕಾರಣಿಗಳು ಅಥವಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮದುವೆಗೆ ಆಹ್ವಾನಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಮದುವೆ ಮತ್ತು ಇತರ ಸಾಮಾಜಿಕ ಕೂಟಗಳ ಸಂಘಟಕರಿಗೆ ಎಚ್ಚರಿಕೆ ನೀಡಲಾಗಿದೆ. ಮದುವೆಯನ್ನು ರಾಜಕಾರಣಿಗಳು ಚುನಾವಣಾ ಉದ್ದೇಶಗಳಿಗಾಗಿ ಬಳಸಿದರೆ, ಸಮಾರಂಭಕ್ಕೆ ತಗಲುವ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚ ಎಂದು ಲೆಕ್ಕಹಾಕಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Tue, 11 April 23

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ