ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ

ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ
ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು
Follow us
| Updated By: preethi shettigar

Updated on:Oct 08, 2021 | 12:41 PM

ಮೈಸೂರು: ಫೆಬ್ರವರಿ 14 ಬಂತೆಂದರೆ ಸಾಕು ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಮಾರ್ಚ್ 8 ಮಹಿಳೆಯರ ದಿನ, ಇನ್ನು ಸ್ನೇಹಿತರ ದಿನ, ಅಮ್ಮಂದಿರ ದಿನ, ಈ ರೀತಿ ನಾನಾ ದಿನಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೊಟ್ಟೆ ದಿ‌ನ ಅಂತಾನೂ ಒಂದು ಇದೆ ಎಂದು ನಿಮಗೆ ಗೊತ್ತಾ ? ಏನು ಮೊಟ್ಟೆ ದಿನನಾ ಎಂದು ಹುಬ್ಬೇರಿಸುವವರು ಈ ವರದಿಯನ್ನೊಮ್ಮೆ ಓದಿ.

ಇಂದು (ಅಕ್ಟೋಬರ್ 8) ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ 2ನೇ ಶುಕ್ರವಾರ ಮೊಟ್ಟೆ ದಿನ ಆಚರಿಸಲಾಗುತ್ತದೆ. ಇವತ್ತು ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ, ಮೊಟ್ಟೆ ದಿನ ಆಚರಿಸಲಾಯಿತು. ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ವಾಕ್ ಬಂದಿದ್ದ ಎಲ್ಲರಿಗೂ ಮೊಟ್ಟೆ ಜತೆಗೆ ಈರುಳ್ಳಿ, ಟೊಮೆಟೋ ವಿತರಿಸಲಾಯಿತು. ಉಚಿತವಾಗಿ ಸಿಕ್ಕ ಮೊಟ್ಟೆ ತಿಂದವರು ಸಂತೋಷಪಟ್ಟಿದ್ದಾರೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಹಾರ. ಇದನ್ನು ಜನರಿಗೆ ತಿಳಿಸಲು ಮೊಟ್ಟೆ ದಿನ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ವಿವರಗಳ ಬ್ಯಾನರ್ ಸಹಾ ಹಾಕಲಾಗಿತ್ತು. ಒಟ್ಟಾರೆ ಮೊಟ್ಟೆ ದಿನ ಜನರ ಗಮನ‌ ಸೆಳೆಯುವಲ್ಲಿ ಯಶಸ್ವಿಯಾಯಿತು.

ವರದಿ: ರಾಮ್

ಇದನ್ನೂ ಓದಿ: ಕೋಳಿಯ ಹೊಟ್ಟೆಯಲ್ಲಿ ಕಬ್ಬಿಣದ ಚೂರು ಹೋಗಬಹುದು, ಮೊಟ್ಟೆಯಲ್ಲಿ ಹೇಗೆ ಹೋಗಿರಲು ಸಾಧ್ಯ?

Boiled Eggs: ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಗಂಟೆಗಳೊಳಗೆ ಸೇವಿಸಬೇಕು? ದೀರ್ಘಕಾಲದವರೆಗೆ ಇದನ್ನು ಶೇಖರಿಸಬಹುದೇ?

Published On - 12:40 pm, Fri, 8 October 21

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ