ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ

ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ
ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು
Follow us
| Updated By: preethi shettigar

Updated on:Oct 08, 2021 | 12:41 PM

ಮೈಸೂರು: ಫೆಬ್ರವರಿ 14 ಬಂತೆಂದರೆ ಸಾಕು ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಮಾರ್ಚ್ 8 ಮಹಿಳೆಯರ ದಿನ, ಇನ್ನು ಸ್ನೇಹಿತರ ದಿನ, ಅಮ್ಮಂದಿರ ದಿನ, ಈ ರೀತಿ ನಾನಾ ದಿನಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೊಟ್ಟೆ ದಿ‌ನ ಅಂತಾನೂ ಒಂದು ಇದೆ ಎಂದು ನಿಮಗೆ ಗೊತ್ತಾ ? ಏನು ಮೊಟ್ಟೆ ದಿನನಾ ಎಂದು ಹುಬ್ಬೇರಿಸುವವರು ಈ ವರದಿಯನ್ನೊಮ್ಮೆ ಓದಿ.

ಇಂದು (ಅಕ್ಟೋಬರ್ 8) ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ 2ನೇ ಶುಕ್ರವಾರ ಮೊಟ್ಟೆ ದಿನ ಆಚರಿಸಲಾಗುತ್ತದೆ. ಇವತ್ತು ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ, ಮೊಟ್ಟೆ ದಿನ ಆಚರಿಸಲಾಯಿತು. ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ವಾಕ್ ಬಂದಿದ್ದ ಎಲ್ಲರಿಗೂ ಮೊಟ್ಟೆ ಜತೆಗೆ ಈರುಳ್ಳಿ, ಟೊಮೆಟೋ ವಿತರಿಸಲಾಯಿತು. ಉಚಿತವಾಗಿ ಸಿಕ್ಕ ಮೊಟ್ಟೆ ತಿಂದವರು ಸಂತೋಷಪಟ್ಟಿದ್ದಾರೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಹಾರ. ಇದನ್ನು ಜನರಿಗೆ ತಿಳಿಸಲು ಮೊಟ್ಟೆ ದಿನ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ವಿವರಗಳ ಬ್ಯಾನರ್ ಸಹಾ ಹಾಕಲಾಗಿತ್ತು. ಒಟ್ಟಾರೆ ಮೊಟ್ಟೆ ದಿನ ಜನರ ಗಮನ‌ ಸೆಳೆಯುವಲ್ಲಿ ಯಶಸ್ವಿಯಾಯಿತು.

ವರದಿ: ರಾಮ್

ಇದನ್ನೂ ಓದಿ: ಕೋಳಿಯ ಹೊಟ್ಟೆಯಲ್ಲಿ ಕಬ್ಬಿಣದ ಚೂರು ಹೋಗಬಹುದು, ಮೊಟ್ಟೆಯಲ್ಲಿ ಹೇಗೆ ಹೋಗಿರಲು ಸಾಧ್ಯ?

Boiled Eggs: ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಗಂಟೆಗಳೊಳಗೆ ಸೇವಿಸಬೇಕು? ದೀರ್ಘಕಾಲದವರೆಗೆ ಇದನ್ನು ಶೇಖರಿಸಬಹುದೇ?

Published On - 12:40 pm, Fri, 8 October 21

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ