ರಾಜ್ಯದಲ್ಲಿ 3 ಸಾವಿರದ ಗಡಿಯತ್ತ ಸಾಗುತ್ತಿದೆ ಕೊರೊನಾ ಕ್ರಿಮಿ! ಇಂದು ಮತ್ತೊಬ್ಬರು ಬಲಿ

ಬೆಂಗಳೂರು: ಇನ್ನೇನು ಲಾಕ್​ ಡೌನ್​ 4 ಮುಗಿಯುತ್ತಿದೆ ಅನ್ನುವಾಗ ರಾಜ್ಯದಲ್ಲಿ ಕೊರೊನಾ ಕ್ರಿಮಿ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಇಂದಿನವರೆಗೂ ಕೊರೊನಾ ಸೋಂಕಿತರ ಸಂಖ್ಯೆ 2,922 ಕ್ಕೆ ತಲುಪಿದೆ. ಇಂದು ಮತ್ತೊಬ್ಬರು ಬಲಿ: ರಾಜ್ಯದಲ್ಲಿ ಇಂದು ಹೊಸದಾಗಿ 141 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದೇ ವೇಳೆ, ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 49 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಒಟ್ಟು 997 ಜನ ಗುಣಮುಖರಾಗಿ […]

ರಾಜ್ಯದಲ್ಲಿ 3 ಸಾವಿರದ ಗಡಿಯತ್ತ ಸಾಗುತ್ತಿದೆ ಕೊರೊನಾ ಕ್ರಿಮಿ! ಇಂದು ಮತ್ತೊಬ್ಬರು ಬಲಿ

Updated on: May 30, 2020 | 7:27 PM

ಬೆಂಗಳೂರು: ಇನ್ನೇನು ಲಾಕ್​ ಡೌನ್​ 4 ಮುಗಿಯುತ್ತಿದೆ ಅನ್ನುವಾಗ ರಾಜ್ಯದಲ್ಲಿ ಕೊರೊನಾ ಕ್ರಿಮಿ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಇಂದಿನವರೆಗೂ ಕೊರೊನಾ ಸೋಂಕಿತರ ಸಂಖ್ಯೆ 2,922 ಕ್ಕೆ ತಲುಪಿದೆ.

ಇಂದು ಮತ್ತೊಬ್ಬರು ಬಲಿ: ರಾಜ್ಯದಲ್ಲಿ ಇಂದು ಹೊಸದಾಗಿ 141 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದೇ ವೇಳೆ, ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 49 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಒಟ್ಟು 997 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರ 32, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11 ಕೇಸ್‌ಗಳು ಪತ್ತೆಯಾಗಿವೆ. ಬೀದರ್‌ 10, ಕಲಬುರಗಿ 2, ಬೆಳಗಾವಿ 1, ದಾವಣಗೆರೆ 4, ಮೈಸೂರು 2, ಉತ್ತರಕನ್ನಡ 2, ಧಾರವಾಡ 2, ಶಿವಮೊಗ್ಗ 6, ಚಿತ್ರದುರ್ಗ 1, ತುಮಕೂರು 1, ಕೋಲಾರ 3, ಬೆಂಗಳೂರು ಗ್ರಾಮಾಂತರ 1, ಹಾವೇರಿ 4 ಕೇಸ್​ಗಳು ಇಂದು ದೃಢಪಟ್ಟಿವೆ.

Published On - 5:24 pm, Sat, 30 May 20