ಪಾದರಾಯನಪುರ ಶಂಕಿತರು ಶಾಸಕ ಜಮೀರ್ ಮುಂದಿಟ್ಟ ಬೇಡಿಕೆ ಏನು ಗೊತ್ತಾ?

ಬೆಂಗಳೂರು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಹೋಟೆಲ್​ ಕ್ವಾರಂಟೈನ್​​ನಲ್ಲಿರುವ ಪಾದರಾಯನಪುರದ ಸೆಕೆಂಡರಿ ಕಾಂಟ್ಯಾಕ್ಟ್​​ಗಳು ಹೋಟೆಲ್​ ಕ್ವಾರಂಟೈನ್​ನಿಂದ ಹಜ್ ಭವನಕ್ಕೆ ಶಿಫ್ಟ್​ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಪಾದರಾಯನಪುರದ 58 ಸೆಕೆಂಡರಿ ಕಾಂಟ್ಯಾಕ್ಟ್​​ಗಳು ನಮಗೆ ಹೋಟೆಲ್ ಬೇಡ ಹಜ್​​ಭವನಕ್ಕೆ ಶಿಫ್ಟ್ ಮಾಡಿ ಎಂದು ಶಾಸಕ ಜಮೀರ್ ಅಹ್ಮದ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಹೋಟೆಲ್ ಕ್ವಾರಂಟೈನ್​​ನಲ್ಲಿರುವವರನ್ನು ಜಮೀರ್ ಅಹ್ಮದ್ ಭೇಟಿಯಾಗಿದ್ದರು ಈ ವೇಳೆ ಈ ರೀತಿಯ ಬೇಡಿಕೆಯನ್ನಿಟ್ಟಿದ್ದಾರೆ. ಈ ಬೇಡಿಕೆಯ ಕುರಿತು ಆಲೋಚನೆ ಮಾಡುವಂತೆ ಅಧಿಕಾರಿಗಳಿಗೆ ಜಮೀರ್‌ ಸೂಚನೆ ನೀಡಿದ್ದಾರೆ. ಇವರಿಗೆ […]

ಪಾದರಾಯನಪುರ ಶಂಕಿತರು ಶಾಸಕ ಜಮೀರ್  ಮುಂದಿಟ್ಟ ಬೇಡಿಕೆ ಏನು ಗೊತ್ತಾ?
ಸಾಧು ಶ್ರೀನಾಥ್​

Updated on: Apr 22, 2020 | 12:05 PM

ಬೆಂಗಳೂರು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಹೋಟೆಲ್​ ಕ್ವಾರಂಟೈನ್​​ನಲ್ಲಿರುವ ಪಾದರಾಯನಪುರದ ಸೆಕೆಂಡರಿ ಕಾಂಟ್ಯಾಕ್ಟ್​​ಗಳು ಹೋಟೆಲ್​ ಕ್ವಾರಂಟೈನ್​ನಿಂದ ಹಜ್ ಭವನಕ್ಕೆ ಶಿಫ್ಟ್​ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಪಾದರಾಯನಪುರದ 58 ಸೆಕೆಂಡರಿ ಕಾಂಟ್ಯಾಕ್ಟ್​​ಗಳು ನಮಗೆ ಹೋಟೆಲ್ ಬೇಡ ಹಜ್​​ಭವನಕ್ಕೆ ಶಿಫ್ಟ್ ಮಾಡಿ ಎಂದು ಶಾಸಕ ಜಮೀರ್ ಅಹ್ಮದ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಹೋಟೆಲ್ ಕ್ವಾರಂಟೈನ್​​ನಲ್ಲಿರುವವರನ್ನು ಜಮೀರ್ ಅಹ್ಮದ್ ಭೇಟಿಯಾಗಿದ್ದರು ಈ ವೇಳೆ ಈ ರೀತಿಯ ಬೇಡಿಕೆಯನ್ನಿಟ್ಟಿದ್ದಾರೆ. ಈ ಬೇಡಿಕೆಯ ಕುರಿತು ಆಲೋಚನೆ ಮಾಡುವಂತೆ ಅಧಿಕಾರಿಗಳಿಗೆ ಜಮೀರ್‌ ಸೂಚನೆ ನೀಡಿದ್ದಾರೆ.

ಇವರಿಗೆ ವೆಜ್ ಊಟ ಬೇಡ್ವಂತೆ.. ನಾನ್​ವೆಜ್ ಊಟವೇ ಬೇಕಂತೆ..!
ಕ್ವಾರಂಟೈನ್​​ನಲ್ಲಿರುವವರೆಗೂ ಕೇವಲ ಸಸ್ಯಾಹಾರಿ ಊಟ ಮಾತ್ರ ಸಿಗುತ್ತದೆ. ಆದರೆ ಪಾದರಾಯನಪುರದ ಶಂಕಿತರು ಮಾಂಸಹಾರಿ ಪ್ರಿಯರು ಅವರಿಗೆ ಬಿರಿಯಾನಿನೇ ಬೇಕಂತೆ. ಹೀಗಾಗಿ ಹಜ್‌ಭವನಕ್ಕೆ ಸ್ಥಳಾಂತರಿಸಿದರೆ ಅಲ್ಲಿ ಬೇಕಾದ ಊಟ ಸಿಗುತ್ತದೆ. ಹೋಟೆಲ್ ಕ್ವಾರಂಟೈನ್​ನಲ್ಲಿ ಸ್ವಾತಂತ್ರ್ಯವಿಲ್ಲ. ಹಜ್‌ಭವನದಲ್ಲಿ ತಮ್ಮದೇ ಸಮುದಾಯದ ಜನ ಇರ್ತಾರೆ. ಹೀಗಾಗಿ ಹೋಟೆಲ್​​ನಿಂದ ಹಜ್​ಭವನಕ್ಕೆ ಶಿಫ್ಟ್​ ಆಗಲು ಶಂಕಿತರು ನೌಟಂಕಿ ಆಟ ಶುರು ಮಾಡಿಕೊಂಡಿದ್ದಾರೆ.

Published On - 9:15 am, Wed, 22 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us