AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್‌ ಏರಿಯಾಗೆ ಬೇರೆಯವರನ್ನ ಸೇರಿಸಬೇಡಿ -‘ಕೊರೊನಾ ಪಾದರಾಯನಪುರ’ ಟ್ಯಾಗ್​ಲೈನ್ ತಪ್ಪಿಸಲು ಸ್ಥಳೀಯರ ಹರಸಾಹಸ

ನಗರದಲ್ಲಿ ಕೊರೊನಾ ಮಹಾಮಾರಿಗೆ ಸಿಲುಕಿ ಮೊದಲ ಹಾಟ್​ಸ್ಪಾಟ್​ ಆಗಿ ಹೊರಹೊಮ್ಮಿದ ಪಾದರಾಯನಪುರ ಇದೀಗ ವಿಶ್ವದಲ್ಲಿ ಹೊಸ ಕೊರೊನಾ ಪ್ರಭೇದಗಳು ಪತ್ತೆಯಾಗುತ್ತಿದ್ದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ.

ನಮ್‌ ಏರಿಯಾಗೆ ಬೇರೆಯವರನ್ನ ಸೇರಿಸಬೇಡಿ -‘ಕೊರೊನಾ ಪಾದರಾಯನಪುರ’ ಟ್ಯಾಗ್​ಲೈನ್ ತಪ್ಪಿಸಲು ಸ್ಥಳೀಯರ ಹರಸಾಹಸ
‘ಕೊರೊನಾ ಪಾದರಾಯನಪುರ’ ಟ್ಯಾಗ್​ಲೈನ್ ತಪ್ಪಿಸಲು ಸ್ಥಳೀಯರ ಹರಸಾಹಸ
KUSHAL V
|

Updated on: Dec 26, 2020 | 12:14 PM

Share

ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿಗೆ ಸಿಲುಕಿ ಮೊದಲ ಹಾಟ್​ಸ್ಪಾಟ್​ ಆಗಿ ಹೊರಹೊಮ್ಮಿದ ಪಾದರಾಯನಪುರ ಇದೀಗ ವಿಶ್ವದಲ್ಲಿ ಹೊಸ ಕೊರೊನಾ ಪ್ರಭೇದಗಳು ಪತ್ತೆಯಾಗುತ್ತಿದ್ದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ.

ಈ ನಡುವೆ, ನಮ್‌ ಏರಿಯಾಗೆ ಬೇರೆಯವರನ್ನ ಸೇರಿಸಬೇಡಿ ಎಂದು ಪಾದರಾಯನಪುರದ ನಿವಾಸಿಗಳಿಗೆ ಪರೋಕ್ಷವಾಗಿ ತಾಕೀತು ಮಾಡಲಾಗುತ್ತಿದೆ. ಜೊತೆಗೆ, ಬಡಾವಣೆಯಲ್ಲಿ ವಿದೇಶಿಗರ ಮೇಲೆ ಹದ್ದಿನಕಣ್ಣು ಇಡಲು ಸಹ ಸ್ಥಳೀಯರಿಗೆ ಹೇಳಲಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದ್ದ ಪಾದರಾಯನಪುರ ಸೋಂಕಿನ ಸುಳಿಯಲ್ಲಿ ಸಿಲುಕಿ ಕಂಟೇನ್​ಮೆಂಟ್​ ಜೋನ್​ ಆಗಿತ್ತು. ಇದರಿಂದ, ಏರಿಯಾಗೆ ಕೊರೊನಾ ಪಾದರಾಯನಪುರ ಎಂಬ ಟ್ಯಾಗ್​ಲೈನ್ ಸಹ ಅಂಟಿಕೊಂಡಿದೆ. ಹಾಗಾಗಿ, ಈ ಅಪಖ್ಯಾತಿಯಿಂದ ಪಾರಾಗಲು ಸ್ಥಳೀಯರು ಹರಸಾಹಸ ಪಡಬೇಕಾಗಿದೆ.

ಇದೀಗ, ಬ್ರಿಟನ್​ನಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಭೇದ ಭಾರತಕ್ಕೆ ಕಾಲಿಡುವ ಭೀತಿ ಎದುರಾಗಿದೆ. ಹಾಗಾಗಿ, ಈ ಹೊಸ ಪ್ರಭೇದ ತಮ್ಮ ಬಡಾವಣೆಯಲ್ಲೂ ಹರಡುವ ಭೀತಿಯಲ್ಲಿರುವ ಪಾದರಾಯನಪುರದ ನಿವಾಸಿಗಳು ಮತ್ತೊಮ್ಮೆ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಲು ಹಾಗೂ ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಲು ಸನ್ನದ್ಧರಾಗಿದ್ದಾರೆ.

ವಿದೇಶದಿಂದ ಬಂದವರ ಬಗ್ಗೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯರ ಜೊತೆಗೂಡಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್​ ಪಾಷಾ ಜನರಲ್ಲಿ‌ ಮನವಿ ಮಾಡಿದರು. ಕೊರೊನಾ ಅಂದ್ರೆ ಪಾದರಾಯನಪುರ, ಪಾದರಾಯನಪುರ ಅಂದ್ರೆ ಕೊರೊನಾ ಎಂಬ ಅಪಖ್ಯಾತಿಗೆ ನಮ್ಮ ಏರಿಯಾ ತುತ್ತಾಗಿದೆ. ಹೀಗಾಗಿ, ನಮ್ಮ ಜನರಿಗೆ ಕೊರೊನಾ ಹೊಸ ಪ್ರಭೇದದ ಬಗ್ಗೆ ಹಾಗೂ ಈ ಬ್ರಿಟನ್ ವೈರಸ್​ ಕುರಿತು ಅರಿವು ಮೂಡಿಸುತ್ತಿದ್ದೇವೆ. ಹೊರಗಡೆಯಿಂದ ಬಂದವರ ಮೇಲೆ ನಿಗಾ ಇಡಬೇಕು. ಈ ಸೋಂಕು ಮತ್ತೆ ಪಾದರಾಯನಪುರಕ್ಕೆ ಕಂಟಕವಾಗೋದು ಬೇಡ. ಜೊತೆಗೆ, ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡ್ತಿದ್ದೇವೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್​ ಪಾಷಾ ಹೇಳಿದರು.

ಹೊಸ ದಾಖಲೆ ಬರೆದ ಧಾರಾವಿ.. 24 ಗಂಟೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳಿಲ್ಲ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು