ಪಾದರಾಯನಪುರ ಮತ್ತು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗಿದೆಯಾ ಸಂಬಂಧ?

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್​ಗಳಲ್ಲಿ ಪಾಲು ಹೊಂದಿವೆ. ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ […]

ಪಾದರಾಯನಪುರ ಮತ್ತು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗಿದೆಯಾ ಸಂಬಂಧ?
ಆಯೇಷಾ ಬಾನು

Updated on: Aug 13, 2020 | 8:30 AM

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್​ಗಳಲ್ಲಿ ಪಾಲು ಹೊಂದಿವೆ.

ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ ಮಾಡುತ್ತಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಜನರ ಹೆಸರು ಕೇಳಿ ಬಂದಿತ್ತು.

ಹಾಗೂ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಘಟನೆನಲ್ಲಿ ಪಾದರಾಯನಪುರ ಜನರ ಲಿಂಕ್ ಇದೆ. ಗೋವಾ-ಮುಂಬೈ ಹೆಸರಿನಲ್ಲಿ ಒಂದೇ ಸಮುದಾಯದವರಿಂದ ಪುಂಡಾಟ ನಡೀತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಒಂದೇ ಸಂಘಟನೆ ಹೆಸರಿನಲ್ಲಿ ಹಲವೆಡೆ ಗಲಭೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us