AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ. ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ […]

ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ
Follow us
ಸಾಧು ಶ್ರೀನಾಥ್​
|

Updated on:Nov 20, 2019 | 4:02 PM

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ.

ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೆ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ. ಮೂಡಬಿದರೆ, ವಾಮಂಜೂರು, ಬಾರಾಡಿ ಮತ್ತು ಕೂಳೂರಿನಲ್ಲಿ ನಡೆದ ಕಂಬಳದಲ್ಲಿ ನಿಯಮಬಾಹಿರವಾಗಿ ವರ್ತಿಸಲಾಗಿದೆ ಅಂತ ಆರೋಪಿಸಿ ಕಂಬಳಕ್ಕೆ ತಡೆ ತರಲು ಪೇಟಾ ಮುಂದಾಗಿದೆ. ಇದು ಕಂಬಳ ಪ್ರೇಮಿಗಳ ನೋವಿಗೆ ಕಾರಣವಾಗಿದೆ.

ಕಂಬಳ ನಡೆಸಲು ಅನೇಕ ನಿಯಮಾವಳಿಗಳಿವೆ. ಕೋಣಗಳಿಗೆ ಹೊಡೆಯಬಾರ್ದು, ಮೂಗುದಾರ ಹಾಕಬಾರ್ದು, 100 ಮೀಟರ್​ಗಿಂತ ಹೆಚ್ಚು ಓಡಿಸಬಾರ್ದು, ಹೆಚ್ಚಿನ ಉಷ್ಣಾಂಶವಿದ್ರೆ ಕಂಬಳ ನಡೆಸಬಾರ್ದು ಅನ್ನೋ ಹತ್ತು ಹಲವು ಕಂಡೀಷನ್​ಗಳಿವೆ. ಆದ್ರೆ ಮಾಹಿತಿ ಕೊರತೆಯಿಂದ ಕೋಣಗಳ ಮಾಲೀಕರು ಸಣ್ಣಪುಟ್ಟ ತಪ್ಪು ಮಾಡಿದ್ದಾರೆ. ಇದರ ವಿಡಿಯೋ ಮಾಡಿರೋ ಪೇಟಾ ಸಂಘಟನೆಯವರು ಕಂಬಳಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಇದ್ರಿಂದ ನವೆಂಬರ್ ಅಂತ್ಯಕ್ಕೆ ಆರಂಭವಾಗಬೇಕಿದ್ದ ಕಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಂಬಳ ಒಂದು ಆರಾಧನಾ ಕಲೆ. ದೈವಗಳ ಆರಾಧನೆ ಭಾಗವಾಗಿ ಕೋಣಗಳನ್ನ ಓಡಿಸುವುದು ಪದ್ದತಿ. ಕ್ರಮೇಣ ಇದಕ್ಕೆ ಸ್ಪರ್ಧೆಯ ಸ್ವರೂಪ ಬಂದಿದ್ದು, ಕಂಬಳದ ಕಾಲಮಾನ ಮತ್ತು ನಂಬಿಕೆಗಳನ್ನ ಕೋರ್ಟ್ ಮುಂದೆ ನಿರೂಪಿಸುವ ಬಹುದೊಡ್ಡ ಸವಾಲು ಎದುರಾಗಿದೆ.

Published On - 3:51 pm, Wed, 20 November 19

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ