AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ. ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ […]

ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ
ಸಾಧು ಶ್ರೀನಾಥ್​
|

Updated on:Nov 20, 2019 | 4:02 PM

Share

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ.

ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೆ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ. ಮೂಡಬಿದರೆ, ವಾಮಂಜೂರು, ಬಾರಾಡಿ ಮತ್ತು ಕೂಳೂರಿನಲ್ಲಿ ನಡೆದ ಕಂಬಳದಲ್ಲಿ ನಿಯಮಬಾಹಿರವಾಗಿ ವರ್ತಿಸಲಾಗಿದೆ ಅಂತ ಆರೋಪಿಸಿ ಕಂಬಳಕ್ಕೆ ತಡೆ ತರಲು ಪೇಟಾ ಮುಂದಾಗಿದೆ. ಇದು ಕಂಬಳ ಪ್ರೇಮಿಗಳ ನೋವಿಗೆ ಕಾರಣವಾಗಿದೆ.

ಕಂಬಳ ನಡೆಸಲು ಅನೇಕ ನಿಯಮಾವಳಿಗಳಿವೆ. ಕೋಣಗಳಿಗೆ ಹೊಡೆಯಬಾರ್ದು, ಮೂಗುದಾರ ಹಾಕಬಾರ್ದು, 100 ಮೀಟರ್​ಗಿಂತ ಹೆಚ್ಚು ಓಡಿಸಬಾರ್ದು, ಹೆಚ್ಚಿನ ಉಷ್ಣಾಂಶವಿದ್ರೆ ಕಂಬಳ ನಡೆಸಬಾರ್ದು ಅನ್ನೋ ಹತ್ತು ಹಲವು ಕಂಡೀಷನ್​ಗಳಿವೆ. ಆದ್ರೆ ಮಾಹಿತಿ ಕೊರತೆಯಿಂದ ಕೋಣಗಳ ಮಾಲೀಕರು ಸಣ್ಣಪುಟ್ಟ ತಪ್ಪು ಮಾಡಿದ್ದಾರೆ. ಇದರ ವಿಡಿಯೋ ಮಾಡಿರೋ ಪೇಟಾ ಸಂಘಟನೆಯವರು ಕಂಬಳಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಇದ್ರಿಂದ ನವೆಂಬರ್ ಅಂತ್ಯಕ್ಕೆ ಆರಂಭವಾಗಬೇಕಿದ್ದ ಕಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಂಬಳ ಒಂದು ಆರಾಧನಾ ಕಲೆ. ದೈವಗಳ ಆರಾಧನೆ ಭಾಗವಾಗಿ ಕೋಣಗಳನ್ನ ಓಡಿಸುವುದು ಪದ್ದತಿ. ಕ್ರಮೇಣ ಇದಕ್ಕೆ ಸ್ಪರ್ಧೆಯ ಸ್ವರೂಪ ಬಂದಿದ್ದು, ಕಂಬಳದ ಕಾಲಮಾನ ಮತ್ತು ನಂಬಿಕೆಗಳನ್ನ ಕೋರ್ಟ್ ಮುಂದೆ ನಿರೂಪಿಸುವ ಬಹುದೊಡ್ಡ ಸವಾಲು ಎದುರಾಗಿದೆ.

Published On - 3:51 pm, Wed, 20 November 19

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!