ಜಮೀರ್ ವಿದೇಶ ಪ್ರವಾಸಕ್ಕೆ ಹೋದ ಮಾಹಿತಿಯನ್ನ ಸರ್ಕಾರಕ್ಕೆ ಕೊಟ್ಟಿಲ್ಲ -ಪ್ರಶಾಂತ್ ಸಂಬರಗಿ
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ BS ಯಡಿಯೂರಪ್ಪರನ್ನು ಮಾತನಾಡಿಸಲು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗಮಿಸಿದ್ದರು. ಆದರೆ, ಸಿಎಂ ಜೊತೆ ಮಾತುಕತೆ ನಡೆಸಲು ಸಂಬರಗಿಗೆ ಸಮಯ ಸಿಗದ ಹಿನ್ನೆಲೆಯಲ್ಲಿ ವಿಧಾನಸೌಧದ ಕಾರಿಡಾರ್ನಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ಕಾನೂನು ಬಾಹಿರವಾಗಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಜೊತೆಗೆ, ಪ್ರೋಟೋಕಾಲ್ ಪ್ರಕಾರ ಈ ಕುರಿತು ಯಾವುದೇ ದಾಖಲೆ ಸಹ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು ನೀಡಿದ್ದೇನೆ. […]

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ BS ಯಡಿಯೂರಪ್ಪರನ್ನು ಮಾತನಾಡಿಸಲು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗಮಿಸಿದ್ದರು. ಆದರೆ, ಸಿಎಂ ಜೊತೆ ಮಾತುಕತೆ ನಡೆಸಲು ಸಂಬರಗಿಗೆ ಸಮಯ ಸಿಗದ ಹಿನ್ನೆಲೆಯಲ್ಲಿ ವಿಧಾನಸೌಧದ ಕಾರಿಡಾರ್ನಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ಕಾನೂನು ಬಾಹಿರವಾಗಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಜೊತೆಗೆ, ಪ್ರೋಟೋಕಾಲ್ ಪ್ರಕಾರ ಈ ಕುರಿತು ಯಾವುದೇ ದಾಖಲೆ ಸಹ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು ನೀಡಿದ್ದೇನೆ. ಮತ್ತೆ ಸಿಸಿಬಿಗೆ ಹೋಗ್ತೀನಿ ಹಾಗೂ ಡಿಜಿಟಲ್ ಎವಿಡೆನ್ಸ್ ಕೊಡುತ್ತೇನೆ ಎಂದು ಪ್ರಶಾಂತ್ ಹೇಳಿದರು.
ಜಮೀರ್ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ RTI ಮಾಹಿತಿಯನ್ನು ಸಹ ಕೊಡುತ್ತೇನೆ. ಶಾಸಕ ಜಮೀರ್ ಅಹ್ಮದ್ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. RTI ಮೂಲಕವೂ ಅವರ ಪ್ರವಾಸದ ಮಾಹಿತಿ ಸಿಗ್ತಿಲ್ಲ. ಹಿಂದೆ ಕ್ಯಾಬಿನೆಟ್ ಸಚಿವರಾದಾಗಲೂ ಅವರು ಸಾಕಷ್ಟು ಬಾರಿ ಕೊಲೊಂಬೋಗೆ ಹೋಗಿದ್ದರು ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.
ಜಮೀರ್ ಅಹ್ಮದ್ ಪ್ರೋಟೋಕಾಲ್ ಪ್ರಕಾರ ಸ್ಪೀಕರ್ಗಾದರೂ ಮಾಹಿತಿ ನೀಡಬೇಕಿತ್ತು. ಹಾಗಾಗಿ, ಜಮೀರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ, ಇವರ ವಿರುದ್ಧ ತನಿಖೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದ್ದಾರೆ.



