AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾಪದ ಮಧ್ಯೆ.. ಸಚಿವ-ಆಡಳಿತ ಪಕ್ಷದ ಶಾಸಕ ಹೊಡೆದಾಟ, ಕೈ ಶಾಸಕರು ತಡೆದರು! 

ಬೆಂಗಳೂರು: ಸಚಿವ ನಾರಾಯಣ ಗೌಡ ಮತ್ತು ಶಾಸಕ ಬೆಳ್ಳಿಪ್ರಕಾಶ್ ಮಧ್ಯೆ ಕಿತ್ತಾಟವಾಗಿದೆ. ಉಪಾಹಾರ ಸೇವನೆಯ ವೇಳೆ ಈ ಇಬ್ಬರೂ ನಾಯಕರು ಪರಸ್ಪರ ಕಾಲೆಳೆದುಕೊಂಡು ಕೂಗಾಡಿದ್ದಾರೆ. ನಿನ್ನಂತಹ ಅಸಮರ್ಥನನ್ನು ನೋಡಿಯೇ ಇಲ್ಲ: ನಾರಾಯಣ ಗೌಡ ವಿಧಾನಸೌಧದ ಮೊದಲ ಮಹಡಿಯ ಕ್ಯಾಂಟೀನ್‌ನಲ್ಲಿ ಅನುದಾನದ ವಿಚಾರವಾಗಿ ಸಚಿವ ನಾರಾಯಣಗೌಡ ಮತ್ತು ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಗಲಾಟೆ ಮಾಡಿಕೊಂಡಿದ್ದಾರೆ. ನಿನ್ನಂತಹ ಅಸಮರ್ಥನನ್ನು ನಾನು ನೋಡಿಯೇ ಇಲ್ಲ ಎಂದು ಬೆಳ್ಳಿ ಪ್ರಕಾಶ್ ವಿರುದ್ಧ ಸಚಿವ ನಾರಾಯಣಗೌಡ ರೇಗಾಡಿದ್ದಾರೆ. ಕಂಡಿದ್ದೇನೆ ಸುಮ್ನಿರಪ್ಪಾ ಎಂದು […]

ಕಲಾಪದ ಮಧ್ಯೆ.. ಸಚಿವ-ಆಡಳಿತ ಪಕ್ಷದ ಶಾಸಕ ಹೊಡೆದಾಟ, ಕೈ ಶಾಸಕರು ತಡೆದರು! 
ಆಯೇಷಾ ಬಾನು
|

Updated on:Sep 21, 2020 | 2:22 PM

Share

ಬೆಂಗಳೂರು: ಸಚಿವ ನಾರಾಯಣ ಗೌಡ ಮತ್ತು ಶಾಸಕ ಬೆಳ್ಳಿಪ್ರಕಾಶ್ ಮಧ್ಯೆ ಕಿತ್ತಾಟವಾಗಿದೆ. ಉಪಾಹಾರ ಸೇವನೆಯ ವೇಳೆ ಈ ಇಬ್ಬರೂ ನಾಯಕರು ಪರಸ್ಪರ ಕಾಲೆಳೆದುಕೊಂಡು ಕೂಗಾಡಿದ್ದಾರೆ.

ನಿನ್ನಂತಹ ಅಸಮರ್ಥನನ್ನು ನೋಡಿಯೇ ಇಲ್ಲ: ನಾರಾಯಣ ಗೌಡ ವಿಧಾನಸೌಧದ ಮೊದಲ ಮಹಡಿಯ ಕ್ಯಾಂಟೀನ್‌ನಲ್ಲಿ ಅನುದಾನದ ವಿಚಾರವಾಗಿ ಸಚಿವ ನಾರಾಯಣಗೌಡ ಮತ್ತು ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಗಲಾಟೆ ಮಾಡಿಕೊಂಡಿದ್ದಾರೆ. ನಿನ್ನಂತಹ ಅಸಮರ್ಥನನ್ನು ನಾನು ನೋಡಿಯೇ ಇಲ್ಲ ಎಂದು ಬೆಳ್ಳಿ ಪ್ರಕಾಶ್ ವಿರುದ್ಧ ಸಚಿವ ನಾರಾಯಣಗೌಡ ರೇಗಾಡಿದ್ದಾರೆ. ಕಂಡಿದ್ದೇನೆ ಸುಮ್ನಿರಪ್ಪಾ ಎಂದು ಬೆಳ್ಳಿ ಪ್ರಕಾಶ್ ಕೂಗಾಡಿದ್ದಾರೆ. ಇಬ್ಬರನ್ನೂ ಕಂಡ ಇತರೆ ಸಚಿವರು, ಶಾಸಕರು ಸಮಾಧಾನ ಪಡಿಸಲು ಮುಂದಾದ ಸನ್ನಿವೇಶ ಇಂದು ವಿಧಾನಸೌಧದಲ್ಲಿ ನಡೆದಿದೆ. ಇಬ್ಬರೂ ನಾಯಕರು ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ.

ವಿಪಕ್ಷ ನಾಯಕ ಸಿದ್ಧರಾಮಯ್ಯಗೂ ಶಾಕ್! ಅಲ್ಲದೆ ಗದ್ದಲದ ವೇಳೆ ಕ್ಯಾಂಟೀನ್​ನಲ್ಲಿ ಸಚಿವರಾದ ಕೆಎಸ್. ಈಶ್ವರಪ್ಪ, ಸಿಟಿ. ರವಿ, ವಿ. ಸೋಮಣ್ಣನವರು ಕುಳಿತಿದ್ದ ಕುರ್ಚಿಗಳನ್ನು ತಳ್ಳಿ ನಾರಾಯಣ ಗೌಡ ಮತ್ತು ಬೆಳ್ಳಿ ಪ್ರಕಾಶ್ ಬೈದಾಡಿಕೊಂಡಿದ್ದಾರೆ. ಪರಸ್ಪರ ಹೊಡೆದಾಟದ ಹಂತಕ್ಕೆ ಸಚಿವ ಮತ್ತು ಆಡಳಿತ ಪಕ್ಷದ ಶಾಸಕ ಜಗಳ ತಿರುಗಿತ್ತು. ಗಲಾಟೆ ವೇಳೆ ಅವಾಚ್ಯ ಶಬ್ದಗಳನ್ನೂ ಸಹ ಬಳಸಿದ್ದಾರೆ.

ಗಲಾಟೆ ವೇಳೆ ಕ್ಯಾಂಟೀನ್ ಪ್ರವೇಶಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಗಲಾಟೆ ಕಂಡು ಒಂದು ಕ್ಷಣ ದಿಗಿಲು ಬಡಿದವರಂತೆ ಮಂಕಾದ್ರು. ಕೂಗಾಟದ ಬಳಿಕ ಬೆಳ್ಳಿ ಪ್ರಕಾಶ್ ಸದನದೊಳಕ್ಕೆ ತೆರಳಿದ್ರು. ಆದರೆ ನಾರಾಯಣ ಗೌಡ ಕ್ಯಾಂಟೀನ್​ನಲ್ಲೇ ಉಳಿದುಕೊಂಡ್ರು.

ಕ್ಯಾಂಟೀನ್ ಗಲಾಟೆಗೆ ಕಾರಣ: ಅನುದಾನಕ್ಕಾಗಿ ಶಾಸಕ ಬೆಳ್ಳಿ ಪ್ರಕಾಶ್ ಹಲವು ಬಾರಿ ಸಚಿವ ನಾರಾಯಣ ಗೌಡರ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ರು. ಜೊತೆಗೆ ಸಚಿವರಿಗೆ ಕರೆ ಮಾಡಿದ್ರೂ ಫೋನ್ ರಿಸೀವ್ ಮಾಡದೆ ಸತಾಯಿಸಿದ್ರು. ಹೀಗಾಗಿ ಕ್ಷೇತ್ರದ ಕೆಲಸ ಆಗದೇ ಬೆಳ್ಳಿ ಪ್ರಕಾಶ್ ಅಸಹಾಯಕರಾಗಿದ್ರು.

ಬೆಳ್ಳಿ ಪ್ರಕಾಶ್ ಕೈ ಮಾಡಲು ಮುಂದಾದಾಗ ಕೈ ಶಾಸಕರು ತಡೆದರು!  ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವ ನಾರಾಯಣಗೌಡ ಕಂಡ ತಕ್ಷಣ ಮಾತಾಡಿಸಲು ಮುಂದಾಗಿದ್ದಾರೆ. ಮಾತುಕತೆ ವೇಳೆ ಕೆಲಸ ಇದ್ರೆ ಆಫೀಸ್​ಗೆ ಬಂದು ಮಾತಾಡು ಎಂದು ಸಚಿವ ನಾರಾಯಣ ಗೌಡ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಬೆಳ್ಳಿ ಪ್ರಕಾಶ್ ಅವರು ನಾರಾಯಣ ಗೌಡ ಮೇಲೆ ಕೈ ಮಾಡಲು ಮುಂದಾದ್ರು. ತಕ್ಷಣ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮತ್ತು ಜೆಡಿಎಸ್ ಅನ್ನದಾನಿ ಬೆಳ್ಳಿ ಪ್ರಕಾಶ್ ಅವರನ್ನು ತಡೆದಿದ್ದಾರೆ.

ಗಲಾಟೆಗೆ ಪ್ರತಿಕ್ರಿಯೆ ಕೊಡದ ಬೆಳ್ಳಿ ಪ್ರಕಾಶ್: ಗಲಾಟೆ ಬಗ್ಗೆ ಬೆಳ್ಳಿ ಪ್ರಕಾಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇದು ಅಣ್ಣ ತಮ್ಮಂದಿರ ಜಗಳ ಎಂದು ಮಾಧ್ಯಮಗಳಿಗೆ ಕೈ ಮುಗಿದು ವಿಧಾನಸೌಧದಿಂದ ಹೊರನಡೆದಿದ್ದಾರೆ.

Published On - 2:06 pm, Mon, 21 September 20

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!