AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ: ಕಾನೂನು ಹೋರಾಟಕ್ಕಿಳಿದ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ

7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋದಾಗಿ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ ಹೊಸಮನಿ ಆರೋಪ ಮಾಡಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ: ಕಾನೂನು ಹೋರಾಟಕ್ಕಿಳಿದ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ
ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ
TV9 Web
| Edited By: |

Updated on: Jun 22, 2022 | 12:26 PM

Share

ರಾಯಚೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, 20 ವರ್ಷಗಳ ಹಳೆಯ ಕವಿತೆ ಕದ್ದು ಹೊಸ ಪಠ್ಯ ಪುಸ್ತಕದಲ್ಲಿ ಪ್ರಕಟಣೆ ಆರೋಪಿಸಿ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಈ ಹಿನ್ನೆಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಎಡವಟ್ಟಾಗಿದೆ. ಸದ್ಯ 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋ ಆರೋಪ ಮಾಡಿದ್ದು, ಆಮೆಯ ಕವಿತೆಯ ಬಗ್ಗೆ ಅದರ ಮೂಲ‌ ರಚನೆಕಾರ ಗಿರಿರಾಜ್ ಹೊಸಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ 3ನೇ ತರಗತಿಯಲ್ಲಿ ಆಮೆ ಹೆಸರಿನ ಕವಿತೆ ಪ್ರಕಟವಾಗಿದ್ದು, ಈಗ ಅದನ್ನೇ ಜಾಣ ಆಮೆ ಎಂದು ತಿರುಚಿ 7ನೇ ತರಗತಿಯಲ್ಲಿ ಪ್ರಕಟ ಮಾಡಲಾಗಿದೆ. 1973ರಲ್ಲೇ ಪ್ರಕಟಗೊಂಡಿದ್ದ ಕವಿತೆಯನ್ನ ನಕಲು ಮಾಡಿದ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ನವರು ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ: ಪಠ್ಯ ಪರಿಷ್ಕರಣೆ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕಿಡಿ

ರಾಯಚೂರು ಮೂಲದ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ ಹೊಸಮನಿ ಆಮೆ ಕವಿತೆ ಬರೆದಿದ್ದರು. 20 ವರ್ಷಗಳ ಹಿಂದೆ ಇದೇ ಕವಿತೆ 3ನೇ ತರಗತಿ ಪಠ್ಯದಲ್ಲಿ ಪ್ರಕಟಣೆಯಾಗಿದೆ. ಆದರೀಗ ಅದೇ ಕವಿತೆಯನ್ನ ಭಾಸ್ಕರ್ ನೆಲ್ಯಾಡಿ ಅನ್ನೋರು ತಿರುಚಿ ಬರೆಯಲಾಗಿದೆ. ಯಾವುದೇ ಪರಿಷ್ಕರಣೆ ಮಾಡದೇ ಪಠ್ಯದಲ್ಲಿ ಕವಿತೆ ಅಳವಡಿಸಿದ್ದಕ್ಕೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ದ ಕಸಾಪ ಹಾಗೂ ಕವಿತೆಯ ಮೂಲ ಕತೃ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆಗಿರುವ ಲೋಪದೋಷ ಸರಿಪಡಿಸಬೇಕು. ಈಗಿನ 7 ನೇ ತರಗತಿ ಪಠ್ಯದಿಂದ ತಿರುಚಲಾದ ಕವಿತೆಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಲಾಗಿದೆ.

ಪಠ್ಯ ಪರಿಷ್ಕರಣೆ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕಿಡಿ

ರಾಯಚೂರು: ಆರ್​ಎಸ್​ಎಸ್​ನವರು (RSS) ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದವರಲ್ಲ. ಅಂಥವರ ವಿಚಾರವನ್ನ ಪಠ್ಯದಲ್ಲಿ (Text book) ಸೇರಿಸಿ, ದೇಶಪ್ರೇಮ ಹೇಳುತ್ತಿರುವುದು ಅಪಹಾಸ್ಯ. ಈಗಿನ ಪಠ್ಯಕ್ರಮ ಅಪಾಯಕಾರಿಯಾಗಿದೆ. ಇದಕ್ಕೆಲ್ಲಾ ಆರ್​ಎಸ್​ಎಸ್​ ಕಾರಣ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಟಿವಿ 9ಗೆ ಹೇಳಿಕೆ ನೀಡಿದ ಕುಂ ವೀರಭದ್ರಪ್ಪ, ಪಠ್ಯ ಪುಸ್ತಕ ಪರಿಷ್ಕರಣೆ ದುರಂತ ನಾಟಕ. ಯಾವ ರಾಜ್ಯ ಮತ್ತು ದೇಶದಲ್ಲಿ ನಡೆದಿಲ್ಲ. ಮಕ್ಕಳನ್ನ ರಾಷ್ಟ್ರ ನಿರ್ಮಾಣಕ್ಕೆ ರೂಪಿಸಲು ಪಠ್ಯಕ್ರಮ ಜಾರಿಗೊಳಿಸಬೇಕು. ಬಿಸಿ ನಾಗೇಶ್ ಅನ್ನೋ ಮಹಾನುಭಾವ ಶಿಕ್ಷಣ ಸಚಿವ, ಟುಟೋರಿಯಲ್ ಶಿಕ್ಷಕ ರೋಹಿತ್ ಚಕ್ರತೀರ್ಥ ಅನ್ನೋನನ್ನ ಅಯ್ಕೆ ಮಾಡಿದ್ದಾರೆ. ಬ್ರಾಹ್ಮಣ್ಯದ ಬಗ್ಗೆ ಅಪಾರ ಕಾಳಜಿಯಿರುವ ಉಡಾಫೆ ಹಿನ್ನೆಲೆ ವ್ಯಕ್ತಿ ಆತ. ಕುವೆಂಪು ಅವರ ನಾಡಗೀತೆ ತಿರುಚಿ, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಈತ ಸಮೀತಿ ಅಧ್ಯಕ್ಷ ಅಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ. ಇಲ್ಲಿನ ಬಹುತ್ವವನ್ನ ಪ್ರೀತಿಸಬೇಕು. ಗುಡಿ ಕೈಗಾರಿಕೆಗಳಿವೆ. ಅವರನ್ನೆಲ್ಲಾ ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳಿದರು.

ಪೇಚಿಗೆ ಸಿಲುಕಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ

ಪಠ್ಯ ಪರಿಷ್ಕರಣೆ ಹಿನ್ನೆಲೆ ಡಿ.ಕೆ. ಶಿವಕುಮಾರ ಪುಸ್ತಕ ಹರಿದು ಹಾಕಿದ್ದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದ್ದು, ಬಹಳ ಆವೇಷದಿಂದ ಹರಿದು ಹಾಕಿದ್ದಾರೆ. ನಮ್ಮ ಡಿ.ಕೆ. ಶಿವಕುಮಾರ ಹಾಗೇ ಮಾಡೋ ವ್ಯಕ್ತಿಯಲ್ಲ. ನಾನು ಕಾಂಗ್ರೆಸಿಸಮ್ ಅಲ್ಲ, ಬಿಜೆಪಿಗೂ ಸಂಬಂಧವಿಲ್ಲ. ನಾನು ಮನುಷ್ಯನ ಪರವಾಗಿರೋನು. ಪುಸ್ತಕಗಳನ್ನು ಹರಿದು ಎಸೆಯೋದು, ಸುಡೋದು ಇಷ್ಟಪಡಲ್ಲ ಎಂದರು. ಇದಕ್ಕೂ ಮುನ್ನ ಪಠ್ಯ ಪರಿಕ್ಷರಣೆಗೆ ಆರ್​ಎಸ್​ಎಸ್​ ಕಾರಣ ಅಂತ ಕಿಡಿ ಕಾರಿದ್ದ ಕುಂ ವೀರಭದ್ರಪ್ಪ, ಈ ಮಧ್ಯೆ ನಮ್ಮ ಡಿ.ಕೆ. ಶಿವಕುಮಾರ ಅಂತ ಹೇಳಿ ಪೇಚಿಗೆ ಸಿಲುಕಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ