ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ, ಅಂಗನವಾಡಿ, ಕಾಲೇಜುಗಳಿಗೆ ಶೌಚಾಲಯ ನಿರ್ಮಾಣ ಗಡುವು!

ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಗ್ರಾಮ ಪಂಚಾಯತಿಗಳೇ ವೀಶೇಷ ಮುತುವರ್ಜಿವಹಿಸಿ ಶೌಚಾಲಯ ನಿರ್ಮಿಸಬೇಕಾದ ಅವಶ್ಯಕತೆಯಿದೆ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಸೈಯದ್ ಹಫಿಜ್ ಹೇಳಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ, ಅಂಗನವಾಡಿ, ಕಾಲೇಜುಗಳಿಗೆ ಶೌಚಾಲಯ ನಿರ್ಮಾಣ ಗಡುವು!
ಶೌಚಾಲಯ (ಸಂಗ್ರಹ ಚಿತ್ರ)
Edited By:

Updated on: Sep 26, 2021 | 8:35 AM

ರಾಯಚೂರು: ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶೌಚಾಲಯ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಜನವರಿ 26ರ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೌಚಾಲಯ ಮುಕ್ತ ಜಿಲ್ಲೆಗೆ ಘೋಷಣೆ ಮಾಡುವ ಒತ್ತಡಕ್ಕೆ ಜಿಲ್ಲಾ ಪಂಚಾಯತಿ ಸಿಲುಕಿದೆ. ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಿಗೆ ಶೌಚಾಲಯ ಕೊರತೆಯನ್ನು ನೀಗಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಮಾದರಿ ಅಂದಾಜು ಪತ್ರಿಕೆಯಂತೆ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಬೇಕಿದೆ.

ಅಂಗನವಾಡಿ ಕೇಂದ್ರಗಳು ಸೇರಿದಂತೆ ಶಾಲಾ, ಕಾಲೇಜುಗಳಿಗೆ ಶೌಚಾಲಯ ನಿರ್ಮಾಣ ಮಾಡಲು ಅನುದಾನ ಒದಗಿಸಲಾಗಿದ್ದರೂ, ಇಂದಿಗೂ ಬಹುತೇಕ ಶಾಲಾ ಕಾಲೇಜುಗಳಿಗೆ ನಿರ್ಮಾಣವಾಗಿರುವ ಶೌಚಾಲಯಗಳಿಗೆ ನೀರಿನ ವ್ಯವಸ್ಥೆಯೇ ಇಲ್ಲ. ಇದ್ದರೂ ಬಳಕೆಯಾಗುತ್ತಿಲ್ಲ. ಇನ್ನು ಅನೇಕ ನಿರ್ಮಾಣ ಹೆಸರಿನಲ್ಲಿ ದುರ್ಬಳಕೆಯಾಗಿರುವ ಆರೋಪಗಳಿವೆ ಎಂದು ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಸೈಯದ್ ಹಫಿಜ್ ಹೇಳಿದ್ದಾರೆ.

ಈಗಾಗಲೇ ಬರ್ಹಿದೆಸೆ ಮುಕ್ತ ಜಿಲ್ಲೆಯೆಂದು ದಾಖಲೆಯಲ್ಲಿ ಘೋಷಣೆಯಾಗಿದೆ ಹೊರತು, ವಾಸ್ತವದಲ್ಲಿ ಇಂದಿಗೂ ಬರ್ಹಿದೆಸೆಯೆ ಶೌಚ ಮುಂದುವರೆದಿದೆ. ಶಾಲಾ, ಕಾಲೇಜುಗಳು, ಅಂಗನವಾಡಿಗಳು ಸಹ ಇದರಿಂದ ಹೊರತಾಗಿಲ್ಲ. ಅನೇಕ ಯೋಜನೆಗಳಲ್ಲಿ ಏಜೆನ್ಸಿಗಳಿಗೆ ಶೌಚಾಲಯ ನಿರ್ಮಿಸಲು ಅನುದಾನ ನೀಡಲಾಗಿದೆ. ವರ್ಷಗಳೇ ಕಳೆದರೂ ಶೌಚಾಲಯ ನಿರ್ಮಾಣ ಮಾತ್ರ ಪೂರ್ಣಗೊಂಡಿಲ್ಲ ಎಂದು ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಸೈಯದ್ ಹಫಿಜ್ ತಿಳಿಸಿದ್ದಾರೆ.

ಬಳಕೆಯಾಗದೇ ಇರುವ ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ನಿರ್ಮಾಣ ಮಾಡಬೇಕಾದ ಏಜೆನ್ಸಿಗಳ ವೈಫಲ್ಯದಿಂದ ಅನುದಾನವಿದ್ದರೂ ಬಳಕೆಯಾಗದೇ ಹೋಗಿದೆ. ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಗ್ರಾಮ ಪಂಚಾಯತಿಗಳೇ ವೀಶೇಷ ಮುತುವರ್ಜಿವಹಿಸಿ ಶೌಚಾಲಯ ನಿರ್ಮಿಸಬೇಕಾದ ಅವಶ್ಯಕತೆಯಿದೆ ಎಂದು ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಸೈಯದ್ ಹಫಿಜ್ ಹೇಳಿದ್ದಾರೆ.

ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಕೇಂದ್ರಗಳು ಹಾಗೂ ಪಿಯುಸಿ ಕಾಲೇಜುಗಳ ಸಂಖ್ಯೆಗೂ ಹಾಗೂ ಈಗಾಗಲೇ ನಿರ್ಮಾಣವಾಗಿರುವ ಶೌಚಾಲಯಗಳ ಸಂಖ್ಯೆಗೂ ಹೊಂದಾಣಿಕೆಯಾಗದಂತಾಗಿದೆ. ಎಲ್ಲಾ ಶಾಲಾ, ಕಾಲೇಜುಗಳಿಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ನಿರ್ಮಾಣವಾಗದೇ ಇರುವ ದೂರುಗಳಿವೆ. ಪ್ರಮುಖವಾಗಿ ನೀರಿನ ಸಂಪರ್ಕ ಇಲ್ಲದೇ ಇರುವ ದೂರುಗಳೇ ಹೆಚ್ಚು. ಈಗ ಮತ್ತೊಮ್ಮೆ ಶೌಚಾಲಯ ನಿರ್ಮಾಣ ಗಡವು ನೀಡಲಾಗಿದೆ. ಇನ್ನೂ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೂ ಶೌಚಾಲಯ ನಿರ್ಮಾಣ ಮಾಡಬೇಕಿದೆ. ಏಜೆನ್ಸಿಗಳು ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳ ಇಚ್ಚಾಶಕ್ತಿ ಮೇಲೆ ಶೌಚಾಲಯ ನಿರ್ಮಾಣ ಸಾಧ್ಯ ಎಂದು ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಸೈಯದ್ ಹಫಿಜ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:
ಬೀದರ್: ಹೆಸರಿಗೆ ಮಾತ್ರ ಸ್ವಚ್ಚ ಭಾರತ್ ಮಿಷನ್ ಯೋಜನೆ; ಶೇಕಡಾ 95 ರಷ್ಟು ಶೌಚಾಲಯ ಬಳಕೆಯಾಗದೆ ಪಾಳು

ಹಾವೇರಿ: ಸ್ವತಃ ರೈತರಿಂದಲೇ ರಸ್ತೆ ದುರಸ್ತಿ; ತಲಾ 10 ಸಾವಿರ ರೂ. ಸಂಗ್ರಹಿಸಿ ರಸ್ತೆ ನಿರ್ಮಾಣ

Web contact

TV9 Kannada

Read More
Follow Us