AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!

ಒಂದರ ಮೇಲೊಂದರಂತೆ ಆರೋಪಗಳ ಸರಮಾಲೆ ಕೇಳಿ ಬಂದ ಹಿನ್ನೆಲೆ, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಿರವಾರ ಅವರು ಲೇಡಿ ಪಿಎಸ್ ಐ ಗೀತಾಂಜಲಿ ಸಿಂಧೆ ಅವರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ.

ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!
ರಾಯಚೂರಿನ ಲೇಡಿ ಪಿಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್
TV9 Web
| Edited By: ಸಾಧು ಶ್ರೀನಾಥ್​|

Updated on:Dec 19, 2022 | 2:21 PM

Share

ಅಲ್ಲಿ ಪೊಲೀಸ್ ಸ್ಟೇಷನ್ ಇನ್ ಚಾರ್ಜ್‌ ಲೇಡಿ ಪಿಎಸ್ಐ (PSI) ವಿರುದ್ಧ ಆರೋಪಿಗಳ ಸರಮಾಲೆಯೇ ಕೇಳಿಬಂದಿತ್ತು.. ರೈತರ ಜೊತೆ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್, ಅಷ್ಟೇ ಯಾಕೇ ತನ್ನ ಸಾವಿಗೆ ಇದೇ ಪಿಎಸ್ಐ ಮೇಡಂ ಕಾರಣ ಅಂತ ಯುವಕನೊಬ್ಬ ಪತ್ರ ಬರೆದಿಟ್ಟು ಎಸ್ಕೇಪ್ ಆಗಿದ್ದ.. ಇಷ್ಟೆಲ್ಲಾ ಕಿರಿಕ್ ಗಳ ಬೆನ್ನಲ್ಲೇ ಆ ಪಿಎಸ್ ಐ ಮೇಡಂ ಕೊನೆಗೂ ಸಸ್ಪೆಂಡ್ (suspend) ಆಗಿದ್ದಾರೆ.

ಮೇಲಿನ ಚಿತ್ರದಲ್ಲಿ ಯುನಿಫಾರ್ಮ್ನಲ್ಲಿ ನಿಂತಿರೊ ಈ ಮೇಡಂ ಹೆಸ್ರು ಗೀತಾಂಜಲಿ ಸಿಂಧೆ. ರಾಯಚೂರು ಜಿಲ್ಲೆ ಸಿರವಾರ (Siravara) ಪೊಲೀಸ್ ಠಾಣೆಯ ಪಿಎಸ್ಐ. ಇದೇ ಪಿಎಸ್ಐ ಮೇಡಂ ಈಗ ಭಾರೀ ಸುದ್ದಿಯಾಗಿದ್ದಾರೆ. ಸಿರವಾರ ಪಿಎಸ್ಐ ಗೀತಾಂಜಲಿ ಅವರ ವಿರುದ್ಧ ಆರೋಪಗಳ ಸರಮಾಲೆಯೇ ಕೇಳಿ ಬಂದಿದೆ. ಈ ಹಿಂದೆ ಪಿಎಸ್ ಐ ಮೇಡಂ ತಮ್ಮ ಹುಟ್ಟುಹಬ್ಬವನ್ನ (birthday) ಸಿರವಾರ ಪೊಲೀಸ್ ಠಾಣೆಯಲ್ಲೇ ಆಚರಿಸಿಕೊಂಡಿದ್ರು.. ಈ ಮೂಲಕ ಇಲಾಖೆಯ‌ ಆದೇಶವನ್ನು ಗಾಳಿಗೆ ತೂರಿರೊ ಆರೋಪ ಕೇಳಿ ಬಂದಿತ್ತು.

ಇದಾದ ಬಳಿಕ ಠಾಣೆಯೊಳಗಡೆಯಿದ್ದ ಆರೋಪಿಯೊಬ್ಬ ಎಸ್ಕೇಪ್ ಆಗಿದ್ದ. ಈ ಕೇಸ್ ಕೂಡ ಗೀತಾಂಜಲಿ ಅವರಿಗೆ ತಿರುಗುಬಾಣವಾಗಿತ್ತು. ಇದೆಲ್ಲಾ ತಣ್ಣಗಾಯ್ತು ಅನ್ನೋವಾಗ್ಲೆ ಇತ್ತೀಚೆಗೆ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ರೈತರ ಮೇವಿನ ಟ್ರಾಕ್ಟರ್ ಟಚ್ ಆದ ಬಗ್ಗೆ ಕಿರಿಕ್ ಮಾಡಿಕೊಂಡಿದ್ರು. ಆ ವಿಡಿಯೋಗಳು ಕೂಡ ವೈರಲ್ ಆಗಿದ್ವು. ಹೀಗೆ ಒಂದರ ಮೇಲೊಂದರಂತೆ ಆರೋಪಗಳ ಸರಮಾಲೆ ಕೇಳಿ ಬಂದ ಹಿನ್ನೆಲೆ, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಿರವಾರ ಅವರು ಲೇಡಿ ಪಿಎಸ್ ಐ ಗೀತಾಂಜಲಿ ಸಿಂಧೆ ಅವರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ.

ಪಿಎಸ್ ಐ ಗೀತಾಂಜಲಿ ಸಿಂಧೆ ವಿರುದ್ಧ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದಿದ್ದರೂ ಅವರ ಮೇಲೆ ಕ್ರಮವಾಗಿಲ್ಲ ಅಂತ ಸಾರ್ವಜನಿಕರು ಆರೋಪಿಸಿದ್ದರು. ಆದ್ರೆ ಈ ಮಧ್ಯೆ ಸಿರವಾರ ಪಟ್ಟಣದ ನಿವಾಸಿ ತಾಯಣ್ಣ ಅನ್ನೋ ಯುವಕ, ಇದೇ ಪಿಎಸ್ ಐ ಮೇಡಂ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ.. ತನ್ನ ಸಾವಿಗೆ ಪಿಎಸ್ ಐ ಗೀತಾಂಜಲಿ ಕಾರಣ ಅಂತ ಲೆಟರ್ ಬರೆದಿಟ್ಟು ಊರು ಬಿಟ್ಟುಹೋಗಿದ್ದ.

ನಿತ್ಯ ಈ ಮೇಡಂ ಕಂಡಕಂಡಲ್ಲಿ ಕಿರುಕುಳ ಕೊಡ್ತಾರಂತೆ. ತಮ್ಮ ಕುಟುಂಬಸ್ಥರ ಮಧ್ಯದ ಸಿವಿಲ್ ಡಿಸ್ಪ್ಯೂಟ್ ನಲ್ಲಿ ಗೀತಾಂಜಲಿ ಅವರು ಮಧ್ಯಸ್ಥಿಕೆ ವಹಿಸಿದಾರೆ ಅಂತಾ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲ ತನ್ನ ವಿರುದ್ಧ ರೌಡಿ ಶೀಟ್ ಓಪನ್ ಮಾಡೋದಾಗಿ ಬೆದರಿಸಿದ್ದಾರೆ ಅಂತ ಆರೋಪಿಸಿ ಪತ್ರ ಬರೆದಿಟ್ಟು ತಾಯಣ್ಣ ನಾಪತ್ತೆಯಾಗಿದ್ದ. ಈತ ಬರೆದಿಟ್ಟಿದ್ದ ಲೆಟರ್ ಗಳು ವೈರಲ್ ಆಗಿದ್ವು. ಖುದ್ದು ತಾಯಣ್ಣನ ಕುಟುಂಬಸ್ಥರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರನ್ನ ಭೇಟಿಯಾಗಿ ನ್ಯಾಯಕ್ಕಾಗಿ ಅಂಗಲಾಚಿದ್ದರು.. ಮಗನನ್ನ ಹುಡುಕಿಕೊಡಿ ಅಂತ ತಾಯಣ್ಣನ ಕುಟುಂಬಸ್ಥರು ಕಣ್ಣೀರ ಕೋಡಿಯನ್ನೇ ಹರಿಸಿದ್ದರು.

ಈ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ ಪಿ ನಿಖಿಲ್ ಬಿ ಅವರು ಖುದ್ದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ನಾಪತ್ತೆಯಾಗಿದ್ದ ತಾಯಣ್ಣನನ್ನ ಹುಡುಕಿ ಕರೆತಂದಿದ್ರು.. ಸದ್ಯ ಪಿಎಸ್ ಐ ಗೀತಾಂಜಲಿ ಅಮಾನತಾಗಿದ್ದು, ಇಲಾಖೆ ತನಿಖೆ‌ ಮುಂದುವರೆದಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 19 December 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್