AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಸರ್ಕಾರದ ವಿರುದ್ಧ ಸ್ಟೇಟಸ್ ಹಾಕಿದ್ದ ಪಂಚಾಯಿತಿ ಕ್ಲರ್ಕ್​ ಸಸ್ಪೆಂಡ್!

ದೇವದುರ್ಗ ತಾಲೂಕು ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದರು. ನೋಟಿಸ್​ಗೆ ಸಮಂಜಸ ಉತ್ತರ ನೀಡದ ಹಿನ್ನೆಲೆ ಕ್ಲರ್ಕ್​ ಅಮಾನತು ಮಾಡಿ, ಜಾಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ರಾಯಚೂರು: ಸರ್ಕಾರದ ವಿರುದ್ಧ ಸ್ಟೇಟಸ್ ಹಾಕಿದ್ದ ಪಂಚಾಯಿತಿ ಕ್ಲರ್ಕ್​ ಸಸ್ಪೆಂಡ್!
ಸರ್ಕಾರದ ವಿರುದ್ಧ ಸ್ಟೇಟಸ್ ಹಾಕಿದ್ದ ಪಂಚಾಯಿತಿ ಕ್ಲರ್ಕ್​ ಅಮಾನತು
TV9 Web
| Updated By: ಸಾಧು ಶ್ರೀನಾಥ್​|

Updated on:Nov 05, 2022 | 2:22 PM

Share

ರಾಯಚೂರು: ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದ ಪಂಚಾಯಿತಿ ಕ್ಲರ್ಕ್​ ಒಬ್ಬರನ್ನು ಸರ್ಕಾರ ಅಮಾನತು ಮಾಡಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್​ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ರಾಯಪ್ಪ ಎಂಬುವವರನ್ನು ಸಸ್ಪೆಂಡ್​ ಮಾಡಲಾಗಿದೆ. ಕ್ಲರ್ಕ್​ ರಾಯಪ್ಪ ಸರ್ಕಾರದ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು.

ಈ ಬಗ್ಗೆ ದೇವದುರ್ಗ ತಾಲೂಕು ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದರು. ನೋಟಿಸ್​ಗೆ ಸಮಂಜಸ ಉತ್ತರ ನೀಡದ ಹಿನ್ನೆಲೆ ಕ್ಲರ್ಕ್​ ಅಮಾನತು ಮಾಡಿ, ಜಾಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್​ ಆದೇಶ ಹೊರಡಿಸಿದ್ದಾರೆ.

ಸುಧಾಕರ್ ಗೆ ಸ್ವಲ್ಪವಾದರೂ ಮಾನವೀಯತೆ ಇಲ್ಲ, ದುಡ್ಡು ಪಡೆದು ಪೋಸ್ಟಿಂಗ್​ ಆಗುತ್ತಿರುವುದಕ್ಕೆ ಹೀಗೆ ಆಗುತ್ತಿದೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಶಿಶುಗಳ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ​ ​ಪ್ರಿಯಾಂಕ್​ ಖರ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ಬಿಜೆಪಿ ನಾಯಕರಿಗೆ ದುಡ್ಡು ಗಳಿಸುವುದು ಮಾತ್ರ ಗೊತ್ತಿದೆ. PSI ಅಭ್ಯರ್ಥಿಗಳು ಸಚಿವರ ಬಳಿ ಹೋದರೆ DySP ಹೊಡೀತಾರೆ. ಆಸ್ಪತ್ರೆಯಲ್ಲಿ ದುಡ್ಡು ಕೊಡಿ ಅಂತಾ ಹಿಂಸೆ ಕೊಟ್ಟು ಹೊರ ಹಾಕ್ತಾರೆ. ತುಮಕೂರಿನಲ್ಲಿ ನಡೆದ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆಯಾಗಿದೆ. ಸಸ್ಪೆಂಡ್​ ಮಾಡಿದ್ರೆ ಸಾಲದು, ವೈದ್ಯರ ಲೈಸೆನ್ಸ್​ ರದ್ದು ಮಾಡಬೇಕು. ದುಡ್ಡು ಪಡೆದು ಪೋಸ್ಟಿಂಗ್​ ಆಗುತ್ತಿರುವುದಕ್ಕೆ ಹೀಗೆ ಆಗುತ್ತಿದೆ. ಚಾಮರಾಜನಗರದಲ್ಲೂ ದಾಖಲೆ ತಿದ್ದಿ ಯಾರೂ ಸತ್ತಿಲ್ಲ ಅಂದರು. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗೆ ಈವರೆಗೆ 21 ಜನ ಸತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಿಮ್ಮ ಸರ್ಕಾರದಲ್ಲಿ ಸತ್ತಿಲ್ವಾ ಅಂತಾರೆ. ಸಚಿವ ಡಾ. ಸುಧಾಕರ್​ಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಇಂಥವರಿಂದ ರಾಜೀನಾಮೆ ಕೊಡ್ತಾರೆ ಈಗ ಅಂತ ನಿರೀಕ್ಷೆ ಮಾಡಬಹುದಾ? ಏನು ನಿಮ್ಮ ಸಾಧನೆ ಮೂರು ವರ್ಷದಲ್ಲಿ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬೊಮ್ಮಾಯಿ ಸಾಹೇಬರ ಕಂಟ್ರೋಲ್​ನಲ್ಲಿ ಈ ಸರ್ಕಾರ ಇಲ್ಲ:

ಬೊಮ್ಮಾಯಿ ಸಾಹೇಬರ ಕಂಟ್ರೋಲ್​ನಲ್ಲಿ ಈ ಸರ್ಕಾರ ಇಲ್ಲ. ಆರ್​ಎಸ್​ಎಸ್​ ಕಂಟ್ರೋಲ್​ನಲ್ಲಿ ಈ ಸರ್ಕಾರ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಕಂಟ್ರೋಲ್​ನಲ್ಲಿ ಇದ್ದಿದ್ದರೆ ಸ್ಪಂದಿಸುತ್ತಿದ್ದರು. ಕ್ಯಾಬಿನೆಟ್​ ಸಹ ಸಿಎಂ ಬೊಮ್ಮಾಯಿ ಕಂಟ್ರೋಲ್​ನಲ್ಲಿ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.

Published On - 2:09 pm, Sat, 5 November 22