AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ

ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ: 24 ಗಂಟೆಯಲ್ಲೇ ಇಬ್ಬರು ತಹಶೀಲ್ದಾರ್‌ಗಳ ವರ್ಗಾವಣೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 30, 2022 | 10:21 PM

Share

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ‌ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, 24 ಗಂಟೆ ಒಳಗೆ ಇಬ್ಬರು ತಹಶೀಲ್ದರ್ ವರ್ಗಾವಣೆಯಾಗಿದೆ. (Transfer)  ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವೇ ಮೇಗಾ ಫೈಟ್ ನಡೆಯುತ್ತಿದ್ದು, ನೆನ್ನೆ ಹೆಚ್​.ಡಿ ಕುಮಾರಸ್ವಾಮಿ ಅಪ್ತರಾಗಿದ್ದ ತಹಶೀಲ್ದರ್ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸಿ.ಪಿ ಯೋಗೇಶ್ವರ್ ಆಪ್ತ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಹೀಗಾಗಿ ಸುದರ್ಶನ್ ನೆನ್ನೆ ತಹಶೀಲ್ದರ್ ಆಗಿ ವರದಿ ಮಾಡಿಕೊಂಡಿದ್ದರು. ಇಂದು ಸುದರ್ಶನ್ ಬಿ.ಕೆ ರನ್ನ ವರ್ಗಾವಣೆ ಮಾಡಿ ಹರ್ಷಾವರ್ಧನ ಜಿ.ಪಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ‌ಜಿಲ್ಲೆ ಕೆ.ಎಸ್.ಎಫ್​.ಸಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ ಜಿ ಪಿ, ಸುದರ್ಶನ್ ರನ್ನ ಕುಟುಂಬ ಇ-ಆಡಳಿತ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಏಪ್ರೀಲ್ 8 ರಂದು ಚನ್ನಪಟ್ಟಣ ತಹಶೀಲ್ದರ್ ಆಗಿದ್ದ ನಾಗೇಶ್​ರನ್ನ ವರ್ಗಾವಣೆ ‌ಮಾಡಿ ಸುದರ್ಶನ್ ನೇಮಕ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್​ರನ್ನ ವರ್ಗಾವಣೆ ಮಾಡಿ ಸುದರ್ಶನ್​ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್​ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ.

10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಪೊಲೀಸ್​ ಮಹಾನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.

ಹೋಳೆಪ್ಪಗೌಡ ಆರ್​​. ಪಾಟೀಲ್-ರಾಯಚೂರು ಪಶ್ಚಿಮ ಗಿರೀಶ್​ ಬಿ.ಸಿ.-ಶಿವಮೊಗ್ಗ ಜಿಲ್ಲೆಯ ಹೊಸನಗರ ಪ್ರವೀಣ್ ಕುಮಾರ್​​-ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಭೀಮಣ್ಣ ಎಂ.ಸೂರಿ-ಬಾಗಲಕೋಟೆ ಗ್ರಾಮಾಂತರ ಧರ್ಮಪ್ಪ ಎನ್.ಜಿ-ಬೆಂಗಳೂರಿನ ಕೆ.ಜಿ.ಹಳ್ಳಿ ಸಂಚಾರಿ ಠಾಣೆ ಅಂಜನ್​ ಕುಮಾರ್​.ಕೆ-ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ ಮಂಜುನಾಥ್​ ಬಿ-ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ ಹರೀಶ್​.ಕೆ ಪಾಟೀಲ್​-ರಾಜ್ಯ ಗುಪ್ತವಾರ್ತೆ ದೀಪಕ್​ ಎಂ.ಎಸ್-ಶಿವಮೊಗ್ಗ ಜಿಲ್ಲೆ ಸಿಇಎನ್​​​​ ಪೊಲೀಸ್ ಠಾಣೆ ರಮೇಶ್​.ಆರ್-ಕರ್ನಾಟಕ ಲೋಕಾಯುಕ್ತ

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ