AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ವೀರಭದ್ರ ದೇವರ ಉತ್ಸವ: ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಅಲಿಖಿತ ನಿಯಮ; ಹರಿದು ಬಂದ ಭಕ್ತ ಸಾಗರ

ಆವರಗೋಳ್ ಎಂದರೆ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ. ಕಾರಣ ಸಾವಿರಾರು ವರ್ಷದ ಐತಿಹಾಸಿಕ ವೀರಭದ್ರನ ಪುಣ್ಯಕ್ಷೇತ್ರವಿದೆ. ನಿನ್ನೆ (ಫೆಬ್ರವರಿ 3) ಮತ್ತು ಇಂದು (ಫೆಬ್ರವರಿ 4) ದಾವಣಗೆರೆ ತಾಲೂಕಿನ ಆವರಗೋಳ್ ಗ್ರಾಮದಲ್ಲಿ ಪುಣ್ಯೋತ್ಸವ ನಡೆಯುತ್ತಿದೆ. ಹೀಗಾಗಿ ಸಾವಿರಾರು ಸಂಖ್ಯೆಯ ಭಕ್ತ ಸಾಗರ ಹರಿದು ಬರುತ್ತದೆ.

ದಾವಣಗೆರೆಯಲ್ಲಿ ವೀರಭದ್ರ ದೇವರ ಉತ್ಸವ: ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಅಲಿಖಿತ ನಿಯಮ; ಹರಿದು ಬಂದ ಭಕ್ತ ಸಾಗರ
ವೀರಭದ್ರ ದೇವರ ಉತ್ಸವ
sandhya thejappa
| Updated By: ಸಾಧು ಶ್ರೀನಾಥ್​|

Updated on:Mar 04, 2021 | 12:56 PM

Share

ದಾವಣಗೆರೆ: ವೀರಭದ್ರ ಹೆಸರು ಕೇಳಿದರೆ ಭಯ ಬಿಳುವ ಭಕ್ತರಿದ್ದಾರೆ. ವೀರಭದ್ರ ಸಿಟ್ಟಿಗೆದ್ದರೆ ಭಸ್ಮ ಆಗುತ್ತೀರಾ ಎಂಬ ಮಾತು ಜಿಲ್ಲೆಯ ಜನರ ಬಾಯಿಂದ ಕೇಳಿ ಬರುತ್ತವೆ. ಅಂತಹ ಉಗ್ರ ದೇವರ ಉತ್ಸವ ವರ್ಷಕ್ಕೊಮ್ಮೆ ನಡೆಯುತ್ತದೆ. ಇಂತಹ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಲೇಬೇಕು ಎಂಬ ಸುತ್ತ ಮುತ್ತಲಿನ ಹಳ್ಳಿಯಲ್ಲಿ ಅಲಿಖಿತ ನಿಮಯವಿದೆ.

ಆವರಗೋಳ್ ಎಂದರೆ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ. ಕಾರಣ ಸಾವಿರಾರು ವರ್ಷದ ಐತಿಹಾಸಿಕ ವೀರಭದ್ರನ ಪುಣ್ಯಕ್ಷೇತ್ರವಿದೆ. ನಿನ್ನೆ (ಫೆಬ್ರವರಿ 3) ಮತ್ತು ಇಂದು (ಫೆಬ್ರವರಿ 4) ದಾವಣಗೆರೆ ತಾಲೂಕಿನ ಆವರಗೋಳ್ ಗ್ರಾಮದಲ್ಲಿ ಪುಣ್ಯೋತ್ಸವ ನಡೆಯುತ್ತಿದೆ. ಹೀಗಾಗಿ ಸಾವಿರಾರು ಸಂಖ್ಯೆಯ ಭಕ್ತ ಸಾಗರ ಹರಿದು ಬರುತ್ತದೆ. ಮೇಲಾಗಿ ಎಲ್ಲರೂ ತಪ್ಪದೇ ಈ ವೀರಭದ್ರನ ಉತ್ಸವಕ್ಕೆ ಬರಬೇಕು ಎಂಬ ಮಾತೊಂದಿದೆ.

ಇದೇ ಕಾರಣಕ್ಕೆ ಎರಡು ದಿನಗಳ ಕಾಲ ಬೆಳಗ್ಗೆಯಿಂದ ನಿರಂತರ ಪೂಜೆ ಇಲ್ಲಿ ನಡೆಯುತ್ತದೆ. ನಿನ್ನೆ ಬೇರೆ ಸ್ಥಳದಿಂದ ಬರುವ ಭಕ್ತರಿಗೆ ಮಾತ್ರ ಎನ್ನುವಂತೆ ರಾಜ್ಯದ ಬಹುತೇಕ ಸ್ಥಳಗಳಿಂದ ನಿರಂತರವಾಗಿ ಭಕ್ತರು ಬರುತ್ತಾರೆ. ನಿನ್ನೆ ರಥೋತ್ಸವ ಸಹ ಇಲ್ಲಿ ನಡೆಯಿತು. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಗ್ರಾಮದ ಗಡಿಯಲ್ಲಿ ಪೂಜೆ ನಡೆಸುವುದು ಪಂಚಪೀಠ ಶಾಖಾ ಮಠವಾದ ಪುರವರ್ಗದ ಮಠ ಕೂಡಾ ಇಲ್ಲಿದೆ. ಇಲ್ಲಿನ ಓಂಕಾರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲಿನ ಪೂಜೆ ನಡೆಸಿಕೊಡುತ್ತಾರೆ.

ವೀರಭದ್ರ ದೇವಸ್ಥಾನ ಎಂದರೆ ಇಲ್ಲಿ ಗುಬ್ಬಳ ಇರುವುದು ಸ್ವಾಭಾವಿಕ. ಜೊತೆಗೆ ವೀರಭದ್ರನ ಅವತಾರ ಸ್ವರೂಪವಾದ ಭದ್ರನ ವೇಷದಾರಿಗಳ ಬಂದಿರುತ್ತಾರೆ. ಇವರೆ ಅಸ್ತ್ರ ಪವಾಡ ಸಹ ನಡೆಸಿಕೊಡುತ್ತಾರೆ. ಭಕ್ತರು ತಮ್ಮ ಹರಕೆಗೆ ಅನುಗುಣವಾಗಿ ಇಲ್ಲಿ ಬಂದು ಹರಕೆ ಸ್ವೀಕರಿಸುತ್ತಾರೆ. ಇದು ಇಲ್ಲಿನ ವಿಶೇಷ. ಮದುವೆಯಾದ ವಧು ವರಗಳು ಇಲ್ಲಿಗೆ ಬಂದು ದರ್ಶನ ಪಡೆದು ವೀರಭದ್ರನ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ.

ವೀರಭದ್ರ ದೇವರ ಉತ್ಸವ ಹರಿದು ಬಂದ ಭಕ್ತ ಸಾಗರ

ವೀರಭದ್ರ ರಥೋತ್ಸವ

ಸುತ್ತ ಹಳ್ಳಿಯಲ್ಲಿ ಪ್ರಸಿದ್ಧ ಪಡೆದ ವೀರಭದ್ರನ ಉತ್ಸವ ಗ್ರಾಮದ ಗಡಿ ಪೂಜೆ ಮೇಲಾಗಿ ಸುತ್ತ ಹಳ್ಳಿಯ ಎಲ್ಲರು ಬಂದು ದರ್ಶನ ಪಡೆಯಬೇಕು ಎಂಬ ಅಧಿನಿಯಮ ಇರುವುದರಿಂದ ದೇವಸ್ಥಾನದ ಉತ್ಸವ ಹಾಗೂ ಜಾತ್ರೆ ಪ್ರಸಿದ್ಧಿ ಪಡೆದಿದೆ. ಇದೇ ಕಾರಣಕ್ಕೆ ಬೆಂಕಿಯಂತಹ ದೇವರು ಎಂಬ ಕಾರಣ ಇಲ್ಲಿಗೆ ಬರಬೇಕಾದರೆ ಮಡಿವಂತಿಕೆ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ

ತುಮಕೂರಿನಲ್ಲಿ ದನಗಳ ಜಾತ್ರೆ: ಕರ್ನಾಟಕದ ಮೂಲೆ ಮೂಲೆಗಳಿಂದ ರೈತರ ಆಗಮನ

ವಿದ್ಯಾಕಾಶಿಯಲ್ಲಿ ಮಾರ್ಚ್ 2 ರವರೆಗೆ ವಿಜ್ಞಾನ ಜಾತ್ರೆ; ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ..

Published On - 12:54 pm, Thu, 4 March 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ