ತಮಿಳುನಾಡಿಗೆ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳು ಸೀಜ್..!

ಬೆಂಗಳೂರು: ನಗರದಿಂದ ತಮಿಳುನಾಡಿನತ್ತ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳನ್ನು ಅತ್ತಿಬೆಲೆ ಟೋಲ್ ಬಳಿ ಆರ್​ಟಿಒ ಮತ್ತು ಸ್ಥಳೀಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡೆದು, ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದಾರೆ. ಈ ಐಷಾರಾಮಿ ಕಾರುಗಳ ಮಾಲೀಕರು ತೆರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ 3 ಕಾರುಗಳಿಂದ ₹ 30 ಲಕ್ಷ ತೆರಿಗೆ ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ವಂಚಿಸಿದ್ದ ಸುಮಾರು 25 ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ […]

ತಮಿಳುನಾಡಿಗೆ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳು ಸೀಜ್..!
ಸಾಧು ಶ್ರೀನಾಥ್​

Updated on: Nov 29, 2019 | 11:52 AM

ಬೆಂಗಳೂರು: ನಗರದಿಂದ ತಮಿಳುನಾಡಿನತ್ತ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳನ್ನು ಅತ್ತಿಬೆಲೆ ಟೋಲ್ ಬಳಿ ಆರ್​ಟಿಒ ಮತ್ತು ಸ್ಥಳೀಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡೆದು, ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದಾರೆ.

ಈ ಐಷಾರಾಮಿ ಕಾರುಗಳ ಮಾಲೀಕರು ತೆರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ 3 ಕಾರುಗಳಿಂದ ₹ 30 ಲಕ್ಷ ತೆರಿಗೆ ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ವಂಚಿಸಿದ್ದ ಸುಮಾರು 25 ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ₹ 4.5 ಕೋಟಿ ಎಂದು ಅಂದಾಜಿಸಲಾಗಿದೆ. ಕಾರುಗಳ ಮಾಲೀಕರು ನಕಲಿ ನಂಬರ್ ಪ್ಲೇಟ್​ ಅಳವಡಿಸಿ ಸಾರಿಗೆ ಇಲಾಖೆಗೆ ತೆರಿಗೆ ವಂಚಿಸುತ್ತಿದ್ದರು. ಇದರಲ್ಲಿ ಲ್ಯಾಂಬೋರ್ಗಿನಿ ಅಂತಹ ದುಬಾರಿ ಐಷಾರಾಮಿ ಕಾರುಗಳು ಸಹ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published On - 11:49 am, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us