AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮಂದಿರಿಗೆ ಹೆಣ್ಣುಮಕ್ಕಳು ಸೀರೆ ಖರೀದಿಸಿ ಕೊಡಬೇಕು.. ಬಳ್ಳಾರಿಯಲ್ಲಿ ಹರಡಿದೆ ಸಖತ್​ ವದಂತಿ

ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತಿದೆ. ತಾಯಿಗೆ ಸೀರೆ ಕೊಡಿಸದಿದ್ದರೆ ಕೆಟ್ಟದಾಗುತ್ತದೆ ಎನ್ನುವ ವದಂತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಇಂತಹ ವದಂತಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿದ್ದೆ ತಡ ಮಹಿಳೆಯರು ತಮ್ಮ ತಾಯಿಗೆ ಸೀರೆ ಕೊಡಿಸಲು ಮುಂದಾಗಿದ್ದಾರೆ.

ಅಮ್ಮಂದಿರಿಗೆ ಹೆಣ್ಣುಮಕ್ಕಳು ಸೀರೆ ಖರೀದಿಸಿ ಕೊಡಬೇಕು.. ಬಳ್ಳಾರಿಯಲ್ಲಿ ಹರಡಿದೆ ಸಖತ್​ ವದಂತಿ
ತಾಯಿಗೆ ಆರತಿ ಬೆಳಗಿ ಸೀರೆ ಕೊಡುತ್ತಿರುವ ಮಗಳು
sandhya thejappa
| Edited By: |

Updated on: Mar 03, 2021 | 1:34 PM

Share

ಬಳ್ಳಾರಿ: ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ನಾವೆಲ್ಲಾ ಎಷ್ಟೇ ಆಧುನಿಕವಾಗಿ ಮುಂದುವರೆದಿದ್ದರೂ ನಮ್ಮ ಜನರು ಮಾತ್ರ ವದಂತಿಗಳಿಗೆ ಬೇಗ ಮಾರು ಹೋಗುತ್ತಾರೆ. ಈಗ ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಈಗ ಗಣಿ ನಾಡಿನಲ್ಲಿ ಹಬ್ಬಿದೆ. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತಿದೆ. ತಾಯಿಗೆ ಸೀರೆ ಕೊಡಿಸದಿದ್ದರೆ ಕೆಟ್ಟದಾಗುತ್ತದೆ ಎನ್ನುವ ವದಂತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಇಂತಹ ವದಂತಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿದ್ದೇ ತಡ.. ಮಹಿಳೆಯರು ತಮ್ಮ ತಾಯಿಗೆ ಸೀರೆ ಕೊಡಿಸಲು ಮುಂದಾಗಿದ್ದಾರೆ. ಕೆಲವರು ಸೀರೆ ಕೊಡಿಸದಿದ್ದರೆ ಏನಾದರೂ ಕೇಡಾಗಬಹುದು ಎನ್ನುವ ಭಯದಿಂದಲೂ ಸೀರೆ ಕೊಡಿಸಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಬೆಳ್ಳಿ ಕಡಗ ವದಂತಿ ಈ ಹಿಂದೆಯೂ ಜನರು ಒಬ್ಬನೇ ಮಗನಿದ್ದರೆ ಅವರಿಗೆ ಬೆಳ್ಳಿ ಕಡಗ ಕೊಡಬೇಕು ಎನ್ನುವ ವದಂತಿ ಹಬ್ಬಿದಾಗ ಕೂಡ ಬೆಳ್ಳಿ ಕಡಗ ನೀಡಿದ್ದರು. ಈಗ ಮಗಳು ತಾಯಿಗೆ ಸೀರೆ ಕೊಡಬೇಕು ಎನ್ನುವ ವದಂತಿ ಹಬ್ಬಿದೆ. ಹೀಗಾಗಿ ಗಂಡನ ಮನೆಯಲ್ಲಿದ್ದರೂ ತವರು ಮನೆಗೆ ಹೋಗಿ ಮಹಿಳೆಯರು ತಾಯಿಗೆ ಸೀರೆ ಕೊಟ್ಟು ಬರುತ್ತಿದ್ದಾರೆ..

ಸೀರೆಯನ್ನು ಖರೀದಿಸುತ್ತಿರುವ ಮಹಿಳೆಯರು

ಸೀರೆಯನ್ನು ನೋಡುತ್ತಿರುವ ಮಹಿಳೆಯರು

ತಾಯಿ ಹಣೆಗೆ ಕುಂಕುಮ ಇಡುತ್ತಿರುವ ಮಗಳು

ದೂರದ ಊರು, ಬೇರೆ ಜಿಲ್ಲೆಯಲ್ಲಿ ತಾಯಿ ಇದ್ದರೂ ಅಲ್ಲಿಗೆ ಹೋಗಿ ಸೀರೆ ಕೊಟ್ಟು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ನಗರದ ಬಟ್ಟೆ ಅಂಗಡಿಗಳಲ್ಲಿ ಕಳೆದ ಒಂದು ವಾರದಿಂದಲೂ ಸೀರೆ ಖರೀದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಕೊರೊನಾ ಹಾಗೂ ಲಾಕ್ಡೌನ್ ನಂತರ ಬಟ್ಟೆ ಅಂಗಡಿಗಳು ವ್ಯಾಪಾರ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದವು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವ ಸೀರೆ ಕೊಡುವ ವದಂತಿಯಿಂದಾಗಿ ಭರ್ಜರಿಯಾಗಿ ಸೀರೆ ವ್ಯಾಪಾರ ನಡೆಯುತ್ತಿದೆ.

ವಿವಿಧ ಬಗೆಯ ಸೀರೆಗಳು

ಇದನ್ನೂ ಓದಿ

ನೋಟ್ ಬ್ಯಾನ್ ವದಂತಿಗೆ RBI ಸ್ಪಷ್ಟನೆೆ.. ದೇಶದಲ್ಲಿ ಸದ್ಯಕ್ಕೆ ಯಾವುದೇ ನೋಟ್​ ಬ್ಯಾನ್​ ಖಂಡಿತ ಆಗಲ್ಲ!

ಆಸ್ತಿ ವಿವಾದ, ಸಾಲಬಾಧೆ: ಬೆಂಗಳೂರಿನ ತಾಯಿ-ಮಗಳು ನರಸಾಪುರ ಕೆರೆಗೆ ಜಿಗಿದು ಆತ್ಮಹತ್ಯೆ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್