AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಷತ್ ಟಿಕೆಟ್​ಗಾಗಿ ಫೈಟ್, ಸಿದ್ದರಾಮಯ್ಯ-ಡಿಕೆಶಿ ಸೀಕ್ರೆಟ್ ಮೀಟಿಂಗ್!

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗ್ತಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿದ್ರು. ಮತ್ತೊಂದೆಡೆ ಸಿಎಂ ಬಿಎಸ್​ವೈ ಕೂಡ ಅನರ್ಹರ ಪರ ಹೋರಾಟಕ್ಕಿಳಿದಿದ್ದಾರೆ. ಕೊರೊನಾ ಹಾವಳಿ ನಡುವೆಯೂ ರಾಜ್ಯ ರಾಜಕೀಯ ಚುರುಕು ಪಡೆದುಕೊಂಡಿದೆ. ವಿಧಾನ ಪರಿಷತ್ ಟಿಕೆಟ್​​ಗಾಗಿ ಪೈಪೋಟಿ ಶುರುವಾಗಿದೆ. ಎಲ್ಲಾ ಪಕ್ಷದ ನಾಯಕರು ಲಾಬಿ ನಡೆಸೋಕೆ ಮುಂದಾಗಿದ್ದಾರೆ. ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋಕೆ ಸರ್ಕಸ್ ಮಾಡ್ತಿದ್ದಾರೆ. ಕಾಂಗ್ರೆಸ್​ನಲ್ಲಿ […]

ಪರಿಷತ್ ಟಿಕೆಟ್​ಗಾಗಿ ಫೈಟ್, ಸಿದ್ದರಾಮಯ್ಯ-ಡಿಕೆಶಿ ಸೀಕ್ರೆಟ್ ಮೀಟಿಂಗ್!
ಆಯೇಷಾ ಬಾನು
|

Updated on:Jun 17, 2020 | 1:33 PM

Share

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗ್ತಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿದ್ರು. ಮತ್ತೊಂದೆಡೆ ಸಿಎಂ ಬಿಎಸ್​ವೈ ಕೂಡ ಅನರ್ಹರ ಪರ ಹೋರಾಟಕ್ಕಿಳಿದಿದ್ದಾರೆ.

ಕೊರೊನಾ ಹಾವಳಿ ನಡುವೆಯೂ ರಾಜ್ಯ ರಾಜಕೀಯ ಚುರುಕು ಪಡೆದುಕೊಂಡಿದೆ. ವಿಧಾನ ಪರಿಷತ್ ಟಿಕೆಟ್​​ಗಾಗಿ ಪೈಪೋಟಿ ಶುರುವಾಗಿದೆ. ಎಲ್ಲಾ ಪಕ್ಷದ ನಾಯಕರು ಲಾಬಿ ನಡೆಸೋಕೆ ಮುಂದಾಗಿದ್ದಾರೆ. ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋಕೆ ಸರ್ಕಸ್ ಮಾಡ್ತಿದ್ದಾರೆ.

ಕಾಂಗ್ರೆಸ್​ನಲ್ಲಿ ಪರಿಷತ್ ಟಿಕೆಟ್​ಗಾಗಿ ಫೈಟ್! ಹೌದು, ಪರಿಷತ್ ಟಿಕೆಟ್​ಗಾಗಿ ರಾಜ್ಯ ಕಾಂಗ್ರೆಸ್​ನಲ್ಲಂತೂ ಸಿಕ್ಕಾಪಟ್ಟೆ ಲಾಬಿ ನಡೀತಿದೆ. ಹೀಗಾಗಿ ಸಿದ್ದರಾಮಯ್ಯ & ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸೀಕ್ರೆಟ್ ಮೀಟಿಂಗ್ ಮಾಡಿದ್ರು. ಇದಕ್ಕೂ ಮೊದಲು ಸಿದ್ದು ನಿವಾಸದಲ್ಲಿ ಕೆ.ಜೆ ಜಾರ್ಜ್, ರಮೇಶ್ ಕುಮಾರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವ್ರು ಸಭೆ ನಡೆಸಿ ನಜೀರ್ ಅಹ್ಮದ್​ರನ್ನ ಬೆಂಬಲಿಸುವಂತೆ ಒತ್ತಡ ಹೇರಿದ್ರು.

‘ಕೈ’ಯಿಂದ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಫಾರ್ಮುಲಾ! ಅಂದ್ಹಾಗೇ, ಕಾಂಗ್ರೆಸ್​ನಲ್ಲಿ ಇರೋದು ಜಸ್ಟ್ ಎರಡೇ ಎರಡು ಸ್ಥಾನ. ಆದ್ರೆ ಆಕಾಂಕ್ಷಿಗಳು ಮಾತ್ರ ಬರೋಬ್ಬರಿ 12 ಮಂದಿ ಇದ್ದಾರೆ. ಕೈಪಡೆ ಈ ಬಾರಿ ಅಲ್ಪಸಂಖ್ಯಾತ & ಹಿಂದುಳಿದ ವರ್ಗಗಳಿಗೆ ಮಣೆ ಹಾಕಿದೆ. ಅಲ್ಪಸಂಖ್ಯಾತ ಕೋಟಾದಿಂದ ನಜೀರ್ ಅಹ್ಮದ್, ಐವಾನ್ ಡಿಸೋಜಾ ಹಾಗೂ ನಿವೇದಿತ್ ಆಳ್ವಾ ಹೆಸರು ಕೇಳಿ ಬರ್ತಾ ಇದ್ರೆ, ಹಿಂದುಳಿದ ವರ್ಗದಿಂದ ಎಂ.ಸಿ ವೇಣುಗೋಪಾಲ್, ಹೆಚ್. ಎಂ ರೇವಣ್ಣ, ಎಂ.ಆರ್ ಸೀತಾರಾಂ ಹೆಸರು ಮುಂಚೂಣಿಯಲ್ಲಿದೆ. ಇನ್ನು ಸಿದ್ದು ನಜೀರ್ ಅಹ್ಮದ್ ಪರ ಬ್ಯಾಟ್ ಬೀಸಿದ್ರೆ, ಡಿಕೆಶಿ ಮಾತ್ರ ಹೆಚ್.ಎಂ ರೇವಣ್ಣ ಅಥ್ವಾ ಎಂ.ಸಿ ವೇಣುಗೋಪಾಲ್ ಅಂತಿದ್ದಾರೆ. ಇದ್ರ ಜೊತೆಗೆ ಎಂ.ಆರ್ ಸೀತಾರಾಂ ಪರ ಸಿದ್ದು ಬಣ ಬ್ಯಾಟ್ ಬೀಸ್ತಿರೋದು ಕೂಡ ಕುತೂಹಲ ಮೂಡಿಸಿದೆ.

ಅನರ್ಹರಿಗೆ ಟಿಕೆಟ್ ಕೊಡುವಂತೆ ಬಿಎಸ್​ವೈ ಹೋರಾಟ! ಕಾಂಗ್ರೆಸ್​ದು ಒಂದು ಕಥೆಯಾದ್ರೆ, ಇತ್ತ ಬಿಜೆಪಿಯಲ್ಲಿ ಸಿಎಂದು ಮತ್ತೊಂದು ಸಂಕಟ. ಚುನಾವಣೆಯಲ್ಲಿ ಸೋತಿದ್ದ ಅನರ್ಹರಿಗೆ ಪರಿಷತ್ ಟಿಕೆಟ್ ಕೊಡೋದಾಗಿ ಮೊದ್ಲೇ ಬಿಎಸ್​ವೈ ಭರವಸೆ ಕೊಟ್ಟಿದ್ರು. ಹೀಗಾಗಿ ಅನರ್ಹರಿಗೆ ಟಿಕೆಟ್ ಕೊಡಲೇಬೇಕು ಅಂತಾ ಸಿಎಂ ಹೋರಾಟ ಮಾಡ್ತಿದ್ದಾರೆ.

ಒಟ್ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗೇ ನಡೀತಿದೆ. ಕಾಂಗ್ರೆಸ್​ನಲ್ಲಿ ಡಿಕೆಶಿಗೆ ಮೊದಲ ಸವಾಲಾದ್ರೆ, ಸಿದ್ದುಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇವ್ರ ನಡುವೆ ಸಿಎಂ ಬಿಎಸ್​ವೈದು ಕೊಟ್ಟ ಮಾತು ಉಳಿಸಿಕೊಳ್ಳೋ ಆತುರ. ಈ ಎಲ್ಲಾದ್ರ ನಡುವೆ ಬಿಜೆಪಿ, ಕಾಂಗ್ರೆಸ್ & ಜೆಡಿಎಸ್​ನಲ್ಲಿ ಯಾಱರಿಗೆ ಟಿಕೆಟ್ ಸಿಗುತ್ತೆ ಅನ್ನೋದನ್ನ ಮಾತ್ರ ಕಾದು ನೋಡ್ಬೇಕಿದೆ.

Published On - 6:13 am, Tue, 16 June 20

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ