AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ‘ಗರಿ’

ಮಂಡ್ಯ: ಜಿಲ್ಲೆಯ‌ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ ಪ್ರಜಾತಿಯ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ಸ್ವಚ್ಛಂದವಾಗಿ ಹಾರುವ ಏಕೈಕ ಸ್ಥಳ ಎಂಬ ಖ್ಯಾತಿಯನ್ನು ಪಡೆದಿತ್ತು. ಇದೀಗ ಈ ಮುಕ್ತ ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಪ್ರತಿಷ್ಠಿತ ಅರ್ಥ್ ಡೇ ನೆಟ್ವರ್ಕ್​ನಿಂದ ಸಿಕ್ತು ‘ಸ್ಟಾರ್ ವಿಲೇಜ್​​’ ಗೌರವ ಹೌದು. ಜನ ಸಮುದಾಯದ ನಡುವೆ ದೇಶ ವಿದೇಶಗಳಿಂದ ಬರುವ […]

ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ‘ಗರಿ’
ಸಾಧು ಶ್ರೀನಾಥ್​
| Edited By: |

Updated on:Jun 17, 2020 | 1:31 PM

Share

ಮಂಡ್ಯ: ಜಿಲ್ಲೆಯ‌ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ ಪ್ರಜಾತಿಯ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ಸ್ವಚ್ಛಂದವಾಗಿ ಹಾರುವ ಏಕೈಕ ಸ್ಥಳ ಎಂಬ ಖ್ಯಾತಿಯನ್ನು ಪಡೆದಿತ್ತು. ಇದೀಗ ಈ ಮುಕ್ತ ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ.

ಪ್ರತಿಷ್ಠಿತ ಅರ್ಥ್ ಡೇ ನೆಟ್ವರ್ಕ್​ನಿಂದ ಸಿಕ್ತು ‘ಸ್ಟಾರ್ ವಿಲೇಜ್​​’ ಗೌರವ ಹೌದು. ಜನ ಸಮುದಾಯದ ನಡುವೆ ದೇಶ ವಿದೇಶಗಳಿಂದ ಬರುವ ಪೆಲಿಕಾನ್, ಹೆಜ್ಜಾರ್ಲೆ ಹಾಗೂ ಇನ್ನಿತರ ಜಾತಿಯ ಕೊಕ್ಕರೆಗಳು ವಾಸವಾಗಿರೋ ಕಾರಣದಿಂದ ಈ ಗ್ರಾಮಕ್ಕೆ ‘ಸ್ಟಾರ್ ವಿಲೇಜ್’ ಎಂಬ ಬಿರುದು ದೊರೆತಿದೆ. ಈ ಗೌರವವನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಅರ್ಥ್ ಡೇ ನೆಟ್ವರ್ಕ್​ ನೀಡಿದೆ.

ಇತ್ತೀಚೇಗಷ್ಟೆ ಈ ಸಂಸ್ಥೆಯು ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಗ್ರಾಮವನ್ನು ಪರಿಚಯಿಸಿತ್ತು. ಇಲ್ಲಿನ ಜನರಿಗೆ ಹಕ್ಕಿಗಳ ಮೇಲಿರೋ ಪ್ರೀತಿ, ತಮ್ಮ ಜಮೀನಿನಲ್ಲಿ ಹಕ್ಕಿಗಳ ಅನುಕೂಲಕ್ಕಾಗಿ ಮರಗಳನ್ನು ಬೆಳೆಸಿರುವ ರೈತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ‌ ನೀಡುತ್ತಿರುವ ಬಗ್ಗೆಯೂ ಕೂಡ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಂಸೆ ಪಡೆದಿರುವ ಗ್ರಾಮಕ್ಕೆ ಇದೀಗ ಈ ಗೌರವ ಸಂದಿದೆ. ಈ ಮಾಹಿತಿಯನ್ನು ಅರ್ಥ್ ಡೇ ನೆಟ್ವರ್ಕ್ ತನ್ನ ವೆಬ್​ಸೈಟ್​ನಲ್ಲೂ ಪ್ರಕಟಿಸಿದೆ. -ರವಿ ಲಾಲಿಪಾಳ್ಯ

Published On - 1:51 am, Tue, 16 June 20

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್