ಶರತ್ ಒಪ್ಪಿಕೊಂಡಿದ್ದಕ್ಕೇ ಅಂದು ನಾನು ರಾಜೀನಾಮೆ ನೀಡಿದ್ದು: ಎಂಟಿಬಿ ಹೊಸ ವರಸೆ!

ಹೊಸಕೋಟೆ: ಬಿಜೆಪಿ ಸಂಸದ ಬಚ್ಚೇಗೌಡ ಅವ್ರ ಪುತ್ರ ಶರತ್ ಒಪ್ಪಿಕೊಂಡ ಮೇಲೆಯೇ ನಾನು ಅಂದು ರಾಜೀನಾಮೆ ನೀಡಿದ್ದು ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಈಗ ಆಟ ತೋರಿಸುತ್ತಿದ್ದಾರೆ. ಅವರು ಒಪ್ಪಿಕೊಂಡಿದ್ದಕ್ಕೇ ನಾನು ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನಾನು ಸುಳ್ಳು ಹೇಳಿದರೂ.. ಸಿಎಂ ಬಿಎಸ್‌ ಯಡಿಯೂರಪ್ಪನವ್ರು ಸುಳ್ಳು ಹೇಳ್ತಾರಾ? ತಂದೆಗೆ ಗೊತ್ತಿಲ್ಲದೆ ಮಗ ಹೀಗೆ ಆಟವಾಡಲು ಸಾಧ್ಯನಾ? ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ಕೆಡಕಾರಿದ್ದಾರೆ. […]

ಶರತ್ ಒಪ್ಪಿಕೊಂಡಿದ್ದಕ್ಕೇ ಅಂದು ನಾನು ರಾಜೀನಾಮೆ ನೀಡಿದ್ದು: ಎಂಟಿಬಿ ಹೊಸ ವರಸೆ!
ಸಾಧು ಶ್ರೀನಾಥ್​

Updated on: Nov 19, 2019 | 12:56 PM

ಹೊಸಕೋಟೆ: ಬಿಜೆಪಿ ಸಂಸದ ಬಚ್ಚೇಗೌಡ ಅವ್ರ ಪುತ್ರ ಶರತ್ ಒಪ್ಪಿಕೊಂಡ ಮೇಲೆಯೇ ನಾನು ಅಂದು ರಾಜೀನಾಮೆ ನೀಡಿದ್ದು ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಈಗ ಆಟ ತೋರಿಸುತ್ತಿದ್ದಾರೆ. ಅವರು ಒಪ್ಪಿಕೊಂಡಿದ್ದಕ್ಕೇ ನಾನು ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನಾನು ಸುಳ್ಳು ಹೇಳಿದರೂ.. ಸಿಎಂ ಬಿಎಸ್‌ ಯಡಿಯೂರಪ್ಪನವ್ರು ಸುಳ್ಳು ಹೇಳ್ತಾರಾ? ತಂದೆಗೆ ಗೊತ್ತಿಲ್ಲದೆ ಮಗ ಹೀಗೆ ಆಟವಾಡಲು ಸಾಧ್ಯನಾ? ಎಂದು BJP ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ಕೆಡಕಾರಿದ್ದಾರೆ.
ಇಂದು ನಂದಗುಡಿ ಹೋಬಳಿಯಲ್ಲಿ ಚುನಾವಣೆ ಪ್ರಚಾರ ವೇಳೆ ಮಹದೇವಪುರದ ತಮ್ಮ ಗೃಹ ಕಚೇರಿ ಬಳಿ ಎಂಟಿಬಿ ನಾಗರಾಜ್ ಹೀಗೆ ಹೇಳಿದ್ದಾರೆ.

Published On - 11:22 am, Tue, 19 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us