ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು

Shivamogga Black Fungus surgery: ಮಲೆನಾಡಿನ ಶಿವಮೊಗ್ಗದಲ್ಲಿ 48 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ, ಬ್ಲ್ಯಾಕ್ ಫಂಗಸ್‌ ಅನ್ನು ದೂರಮಾಡಲಾಗಿದೆ. ಸೋಂಕಿತ ಅಪಾಯದಿಂದ ಪಾರಾಗಿದ್ದಾರೆ

ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು
ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು
ಸಾಧು ಶ್ರೀನಾಥ್​

Updated on: May 28, 2021 | 5:10 PM

ಶಿವಮೊಗ್ಗ: ಕೊರೊನಾ ಪೆಡಂಭೂತ ಜೊತೆಗೆ ಫಂಗಸ್​ಗಳ ಹಾವಳಿಯೂ ಜೋರಾಗಿ ಕಾಡತೊಡಗಿದೆ. ಒಂದು ಸಾಲದು ಅಂತಾ ಮೂರು ಫಂಗಸ್​​ಗಳು ಬಣ್ಣ ಬಣ್ಣಗಳಲ್ಲಿ ಕಾಣಿಸಿಕೊಂಡು ಕೊರೊನಾ ಸೋಂಕಿತರನ್ನು ಪೇಲವವಾಗಿಸುತ್ತಿದೆ. ಈ ಮಧ್ಯೆ, ಫಂಗಸ್​ ಹಬ್ಬುವುದನ್ನು ತಡೆಗಟ್ಟಲು ಸಾಧ್ಯವಾಗೆ ವೈದ್ಯ ಲೋಕ ಕೈಚೆಲ್ಲಿದೆ. ಸೂಕ್ತ ಔಷಧ, ಇಂಜೆಕ್ಷನ್​ ಕೊರತೆಯೂ ಎದುರಾಗಿದೆ. ಅಸಲಿಗೆ ಯಾವ ಫಂಗಸ್​ಗೆ ಯಾವ ಇಂಜಕ್ಷನ್​/ ಔಷಧ ಎಂಬುದು ವೈದ್ಯಲೋಕಕ್ಕೂ ಖಚಿತವಾಗಿ ತಿಳಿದುಬಂದಿಲ್ಲ. ಈ ಮಧ್ಯೆ ಮಲೆನಾಡಿನ ಶಿವಮೊಗ್ಗದಲ್ಲಿ 48 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ, ಬ್ಲ್ಯಾಕ್ ಫಂಗಸ್‌ ಅನ್ನು ದೂರಮಾಡಲಾಗಿದೆ. ಸೋಂಕಿತ ಅಪಾಯದಿಂದ ಪಾರಾಗಿದ್ದಾರೆ

ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನಡೆದಿದ್ದು, ರಿಪ್ಪನ್‌ಪೇಟೆಯ 48 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಕಿವಿ,ಮೂಗು ಮತ್ತು ಗಂಟಲು (ENT) ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಗಮನಾರ್ಹವೆಂದ್ರೆ ಈ ಹಿಂದೆ ಚಿಕ್ಕಮಗಳೂರಿನ ಒಬ್ಬ ಸೋಂಕಿತನಿಗೆ ಇದೇ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಗಮನಾರ್ಹವೆಂದ್ರೆ ಈ ಎರಡೂ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯ ಲೋಕದಲ್ಲಿ ಸಾಧನೆ ಮಾಡಿರುವುದು ಒಂದೇ ವೈದ್ಯ ತಂಡ.

ಜಿಲ್ಲೆಯ ರಿಪ್ಪನ್ ಪೇಟೆಯ 48 ವರ್ಷದ ವ್ಯಕ್ತಿಗೆ 20 ದಿನಗಳ ಹಿಂದೆ ಕೊರೋನ ಸೋಂಕು ತಗುಲಿತ್ತು. ಆತನಿಗೆ ಇಂದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಡಾ.ಗಂಗಾಧರ್ ಅವರ ನೇತೃತ್ವದ ಇಎನ್​ಟಿ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

(Shivamogga megan hospital doctor gangadhar successfully conducts surgery on black fungus in covid patient)

ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಬ್ಲ್ಯಾಕ್ ಫಂಗಸ್​ ಚಿಕಿತ್ಸೆಗೆ ಆದೇಶ: ರಾಜ್ಯ ಸರ್ಕಾರದ ಸಿಎಸ್ ರವಿಕುಮಾರ್

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us