ಭಗವದ್ಗೀತೆಯಂತಿರುವ ಪುಸ್ತಕದೊಳಗೆ ಬೈಬಲ್ -ಕುರಾನ್ ವೈಭವೀಕರಣ: ಮಲೆನಾಡಿನಲ್ಲಿ ಮತಾಂತರದ ಹೊಸ ತಂತ್ರ

ಮತಾಂತರಕ್ಕೆ ಪ್ರಚೋದನೆ ಪುಸ್ತಕ ಮಾರಾಟವಾಗುತ್ತಿದೆ. ಇದರೊಂದಿಗೆ ಮಲೆನಾಡಿನಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಈ ಪುಸ್ತಕದಲ್ಲಿ ಏನಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಭಗವದ್ಗೀತೆಯಂತಿರುವ ಪುಸ್ತಕದೊಳಗೆ ಬೈಬಲ್ -ಕುರಾನ್ ವೈಭವೀಕರಣ: ಮಲೆನಾಡಿನಲ್ಲಿ ಮತಾಂತರದ ಹೊಸ  ತಂತ್ರ
convert operation in bhadravathi
Follow us
| Updated By: ರಮೇಶ್ ಬಿ. ಜವಳಗೇರಾ

Updated on:Oct 30, 2022 | 8:47 PM

ಶಿವಮೊಗ್ಗ: ಮಲೆನಾಡಿನಲ್ಲಿ ಕೆಲ ವರ್ಷಗಳಿಂದ ತಣ್ಣಗಾಗಿದ್ದ ಮತಾಂತರ ಪ್ರಕ್ರಿಯೆ ಇದೀಗ ಮತ್ತೆ ಆರಂಭಗೊಂಡಿದೆಯೇ ಎಂಬ ಅನುಮಾನ ಆರಂಭಗೊಂಡಿದೆ. ಹೌದು.. ಇದುವರೆಗೆ ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವ ಕೆಲಸ ನಡೆಯುತಿತ್ತು. ಆದರೆ ಇದೀಗ ಜನರಿಗೆ ಅವರ ಧರ್ಮದ ಬಗ್ಗೆಯೇ ಕೀಳರಿಮೆ ಬೆಳೆಸಿ ಆ ಮೂಲಕ ಅವರನ್ನು ಅನ್ಯಧರ್ಮದತ್ತ ಸೆಳೆಯುವ ತಂತ್ರಗಾರಿಕೆ ಮಲೆನಾಡಿನಲ್ಲಿ ನಡೆಯುತ್ತಿದೆ. ಮಲೆನಾಡಿನಾದ್ಯಂತ ಮಾರಾಟವಾಗುತ್ತಿರುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕ. ಈ ಪುಸ್ತಕದಲ್ಲಿ ಏನಿದೆ? ಪುಸ್ತಕಕ್ಕೂ ಮತಾಂತರಕ್ಕೂ ಏನು ಸಂಬಂಧ ಕುರಿತು ಒಂದು ವರದಿ ಇಲ್ಲಿದೆ..

ಮಲೆನಾಡು ಜಿಲ್ಲೆ ಶಿವಮೊಗ್ಗದ ಹಾಗೂ ಭದ್ರಾವತಿ ಅವಳಿ ನಗರದಲ್ಲಿ ಉತ್ತರ ಭಾರತದ ಹರಿಯಾಣ ರಾಜ್ಯದಿಂದ ಯುವಕರು ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕವನ್ನು ವ್ಯಾಪಕವಾಗಿ ಮಾರಾಟ ಮಾಡುತಿದ್ದಾರೆ. ಈ ಪುಸ್ತಕದ ಮುಖಪುಟ ನೋಡಲು ಭಗದ್ಗೀತೆಯಂತೆಯೇ ಇದೆ. ಆದರೆ ಪುಸ್ತಕದ ಒಳಭಾಗದಲ್ಲಿ ಹಿಂದು ಧರ್ಮವನ್ನು ವಿಡಂಬಾತ್ಮಕವಾಗಿ ಬಿಂಬಿಸಲಾಗಿದೆ. ಇದಲ್ಲದೆ ಹಿಂದು ಧರ್ಮದ ದೇವರ ಗ್ರಂಥಗಳು ಸರಿಯಿಲ್ಲ. ಹಿಂದು ದೇವತೆಗಳು ಪೂಜೆಗೆ ಅರ್ಹರಲ್ಲ ಎಂಬ ಉಲ್ಲೇಖವನ್ನೂ ಮಾಡಲಾಗಿದೆ.

ಇದರ ಜೊತೆಗೆ ಬೈಬಲ್ ಹಾಗೂ ಕುರಾನ್ ಗ್ರಂಥಗಳನ್ನು ವೈಭವೀಕರಿಸಿರುವುದು ಹಿಂದು ಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಸಿಕ್ಕಿಬಿದ್ದ ಪುಸ್ತಕ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಹಳೇ ನಗರ ಪೊಲೀಸರಿಗೆ ಕೊಟ್ಟಿದ್ದಾರೆ. ಹೀಗೆ ಹಿಂದೂ ಧರ್ಮದ ಕುರಿತು ಅಪಪ್ರಚಾರ ಮತ್ತು ಮತಾಂತರಕ್ಕೆ ಪ್ರಚೋದನೆಯನ್ನು ಈ ಪುಸ್ತದಲ್ಲಿದೆ ಎಂದು ಭಜರಂಗದ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕವನ್ನು ದೆಹಲಿಯ ಕಬೀರ್ ಪಬ್ಲಿಕೇಷನ್ ನವರು ಮುದ್ರಿಸಿದ್ದಾರೆ‌. ಹೀಗೆ ಮುದ್ರಣವಾಗಿರುವ ನೂರು ರೂಪಾಯಿ ಮುಖಬೆಲೆಯ ಪುಸ್ತಕಗಳನ್ನು ಮಲೆನಾಡಿನಲ್ಲಿ ಕೇವಲ ಹತ್ತು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಭದ್ರಾವತಿಯಲ್ಲಿ ಬಡವರ್ಗದವರಿಗೆ ಈ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವಾಗ ಅನುಮಾನಗೊಂಡ ಹಿಂದೂಪರ ಕಾರ್ಯಕರ್ತರು ಪುಸ್ತಕವನ್ನು ಪರಿಶೀಲನೆ ನಡೆಸಿದಾಗ ಪುಸ್ತಕದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಮಾಡುತ್ತಿದ್ದವರ ಮೇಲೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ಶಿವಮೊಗ್ಗ ನಗರದಲ್ಲಿ ಹೀಗೆ ಅನ್ಯ ರಾಜ್ಯದಿಂದ ಬಂದಂತಹ ಯುವಕರು ಈ ಪುಸ್ತಕವನ್ನು ಮಾರಾಟ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಯಾವಾಗ ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತರು ಈ ವಿವಾದಾತ್ಮಕ ಪುಸ್ತಕದಲ್ಲಿರುವ ಸಂಗತಿ ಹೊರಹಾಕಿದ್ದರಿಂದ ಸದ್ಯ ಎರಡು ನಗರದಲ್ಲಿ ಮತಾಂತರಕ್ಕೆ ಪ್ರಚೋದನೆ ಮಾಡುತ್ತಿರುವ ಪುಸ್ತಕರ ಹಂಚಿಕೆ ಸದ್ಯಕ್ಕೆ ಸ್ಥಗಿತವಾಗಿದೆ. ಅನ್ಯ ರಾಜ್ಯದಿಂದ ಬಂದಿರುವ ಯುವಕರು ಸದ್ಯ ಅಲರ್ಟ್ ಆಗಿದ್ದಾರೆ. ಪುಸ್ತಕ ಮಾರಾಟ ಮಾಡುವುದನ್ನು ನಿಲ್ಲಿಸುವ ಮೂಲಕ ಚಾಣಾಕ್ಷತನ ತೋರಿದ್ದಾರೆ. ಸದ್ಯ ಈ ಪುಸ್ತಕ ಕೊಟ್ಟಿದ್ದರು ಯಾರು.,.. ಯಾಕೇ ಇಷ್ಟೊಂದು ಕಡಿಮೆ ಬೆಲೆಗೆ ಪುಸ್ತಕ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕೆಂದು ಭಜರಂಗದಳ ಸಂಘಟನೆಯು ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.

ಒಟ್ಟಾರೆಯಾಗಿ ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಣ್ಣಗಾಗಿದ್ದ ಮತಾಂತರ ಪರ್ವ ಮತ್ತೆ ಇದೀಗ ಆರಂಭಗೊಂಡಿದೆಯೇ ಎಂಬ ಅನುಮಾನ ಆರಂಭಗೊಂಡಿದೆ. ಮೊದಲೇ ಮಲೆನಾಡಿನಲ್ಲಿ ಕೋಮುಗಲಭೆಯು ಸಣ್ಣ ಪುಟ್ಟ ವಿಷಯಕ್ಕೆ ಹೊತ್ತಿಕೊಳ್ಳುತ್ತಿವೆ. ಈ ನಡುವೆ ಈ ರೀತಿ ಮತಾಂತರಕ್ಕೆ ಪ್ರಚೋದನೆ ಪುಸ್ತಕ ಮಾರಾಟವು ಮತ್ತೆ ಮಲೆನಾಡಿನಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

Published On - 8:45 pm, Sun, 30 October 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ