AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಗರ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್ ಅರೆಸ್ಟ್; ಘಟನೆ ಹಿಂದಿದೆ ತಂಗಿ ವಿಚಾರ

ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್​​ನನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಗರ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್ ಅರೆಸ್ಟ್; ಘಟನೆ ಹಿಂದಿದೆ ತಂಗಿ ವಿಚಾರ
ಹಲ್ಲೆಗೆ ಯತ್ನ ನಡೆದ ಸ್ಥಳ
Follow us
TV9 Web
| Updated By: ಆಯೇಷಾ ಬಾನು

Updated on:Jan 10, 2023 | 12:03 PM

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್​​ನನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮೀರ್ ಬಂಧನಕ್ಕಾಗಿ 3 ವಿಶೇಷ ಪೊಲೀಸ್​ ತಂಡ ರಚಿಸಿದ್ದ ಎಸ್​​ಪಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್​​​ನನ್ನು ವಶಕ್ಕೆ ಪಡೆದಿದ್ದಾರೆ. ಈ ಕೇಸ್​ನಲ್ಲಿ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್​ ಮೇಲೆ ಮಚ್ಚು ಬೀಸಿದ್ದ A1 ಸಮೀರ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ & ಐಮಾನ್ ಬಂಧಿಸಲಾಗಿದೆ. ಪ್ರಕರಣದಲ್ಲಿ ಇಬ್ಬರ ಪಾತ್ರದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಸುನೀಲ್​ ವಿರುದ್ಧ ಸಮೀರ್​ ತಂಗಿಯನ್ನು ಚುಡಾಯಿಸಿದ ಆರೋಪ

ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣಕ್ಕೆ ವೈಯಕ್ತಿಕ ವಿಚಾರದ ಲಿಂಕ್ ಇದೆ ಎಂದು ಎಸ್​​ಪಿ ಜಿ.ಕೆ.ಮಿಥುನ್​​ ತಿಳಿಸಿದ್ದಾರೆ. ಬಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ತಂಗಿಯನ್ನು ಚುಡಾಯಿಸಿದ್ದ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. 4-5 ತಿಂಗಳಿಂದ ಸಮೀರ್ ತಂಗಿಯನ್ನ ಸುನೀಲ್ ಚುಡಾಯಿಸಿದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಸುನೀಲ್​​ ಸಮೀರ್​ ತಂಗಿಯ ಫೋನ್ ನಂಬರ್​ ಕೇಳಿದನಂತೆ. ಈ ಸಂಬಂಧ ಸುನೀಲ್​ಗೆ ಹಲವು ಬಾರಿ ಸಮೀರ್ ಎಚ್ಚರಿಕೆ ನೀಡಿದ್ದನಂತೆ. ಇದೇ ವಿಚಾರಕ್ಕೆ ಸುನೀಲ್,​​ ಸಮೀರ್ ನಡುವೆ ಗಲಾಟೆ ಆಗಿದೆ.

ನಿನ್ನೆ ಮೇಕೆಗಳಿಗೆ ಸಮೀರ್ ಹುಲ್ಲು ತರಲು ಹೋಗಿದ್ದ​​​. ಈ ವೇಳೆ ಸುನೀಲ್ ಹಾಗೂ ಸಮೀರ್ ನಡುವೆ ಗಲಾಟೆ ಆಗಿದೆ. ಹುಲ್ಲು ಕೊಯ್ಯಲು ತಂದಿದ್ದ ಮಚ್ಚನ್ನು ಸುನೀಲ್ ಮೇಲೆ ಬೀಸಿದ್ದಾನೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜ.08ರಂದು ಅದ್ಧೂರಿಯಾಗಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಬಜರಂಗದಳ ಮತ್ತು ವಿಹೆಚ್‌ಪಿ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ವು. ಇದೇ ಪ್ರೋಗ್ರಾಂಗೆ ಸಾಗರ ನಗರದ ಭಜರಂಗದಳ ಸಹ ಸಂಚಾಲಕ ಸುನೀಲ್‌ ಕೂಡಾ ಬಂದಿದ್ದ. ಹೀಗೆ ಯಾತ್ರೆಗೆ ಬರೋವಾಗ್ಲೇ ಸುನೀಲ್‌ ಹಾಗೂ ಸಾಗರದ ಸಮೀರ್‌ ನಡುವೆ ಮಾತಿನ ಚಕಮಕಿ ಆಗಿತ್ತು. ಸುಮೀರ್‌ ಮಾತಿಗೆ ಡೋಂಟ್‌ ಕೇರ್‌ ಎಂದ ಸುನೀಲ್‌ ಶಿವಮೊಗ್ಗಕ್ಕೆ ಬಂದು ಯಾತ್ರೆಯಲ್ಲಿ ಭಾಗಿಯಾಗಿದ್ದ. ರಾತ್ರಿಯೇ ಸಾಗರಕ್ಕೆ ಮರಳಿದ್ದ. ಆದ್ರೆ ಸಮೀರ್​ಗೆ ಸುನೀಲ್‌ ಮೇಲೆ ಕೋಪವಿತ್ತು. ಹೀಗಾಗಿ ಜ.09ರಂದು ಬೆಳಗಾಗ್ತಿದ್ದಂತೆ ಸುನೀಲ್‌ ಬೈಕ್‌ನಲ್ಲಿ ಹೊರಟಿದ್ದ. ಇದನ್ನ ನೋಡಿದ ಸಮೀರ್‌, ತನ್ನ ಬೈಕ್‌ನಲ್ಲಿದ್ದ ಮಚ್ಚು ತೆಗೆದವನೇ ಸುನೀಲ್‌ ಮೇಲೆ ಅಟ್ಯಾಕ್ ಮಾಡಿದ್ದ.

ಇದನ್ನೂ ಓದಿ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಮಂಗಳವಾರ ಅಘೋಷಿತ ಬಂದ್​ಗೆ ಕರೆ

ಸಮೀರ್‌ ಕೈಯಲ್ಲಿ ಮಚ್ಚು ಹಿಡಿದಿರೋದನ್ನ ನೋಡಿದ್ದ ಸುನೀಲ್‌ ಎಚ್ಚೆತ್ತುಕೊಂಡಿದ್ದ. ಬೈಕ್‌ನಿಂದ ಕೆಳಗಿಳಿಯದೇ ವೇಗವಾಗಿ ಹೊರಟಿದ್ದ. ಹೀಗಾಗಿ ಸ್ವಲ್ಪದ್ರಲ್ಲೇ ಸಾವಿನಿಂದ ಪಾರಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಸಿಟ್ಟಿಗೆದ್ದಿವೆ. ಅದ್ರಲ್ಲೂ ಬಜರಂಗದಳ ಸಂಚಾಲಕನ ಮೇಲೆ ಸಮೀರ್‌ ಮಚ್ಚು ಬೀಸೋ ದೃಶ್ಯ ಮೊಬೈಲ್‌ನಲ್ಲಿ ಹರಿದಾಡ್ತಿದ್ದಂತೆ ಎಲ್ರೂ ಆಕ್ರೋಶಗೊಂಡಿದ್ದಾರೆ. ಸಾಗರ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಮೀರ್‌ ಬಂಧನಕ್ಕೆ ಆಗ್ರಹಿಸಿದ್ದರು. ಹಾಘೂ ಸಾಗರ ಬಂದ್‌ಗೂ ಕರೆ ನೀಡಿದ್ದರು. ಸದ್ಯ ಈಗ ಸಮೀರ್ ಅರೆಸ್ಟ್ ಆಗಿದ್ದಾನೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:47 am, Tue, 10 January 23

‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ