AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ಕೌರವರಾಗೋಕೂ ಲಾಯಕ್ಕಲ್ಲ, ನಂಗೇನೂ ಗೊತ್ತಿಲ್ದೆ 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ!?’

ಬೆಂಗಳೂರು: ಪ್ರತಿಪಕ್ಷ ನಾಯಕ ಮತ್ತು ರಾಜ್ಯ ಸರ್ಕಾರದ ನಡುವಿನ ಸಮರ ಕಡಿಮೆಯಾಗುವ ಬದಲು ಮತ್ತಷ್ಟು ತಾರಕಕ್ಕೇರುತ್ತಿದೆ. ಸಿದ್ದರಾಮಯ್ಯ ಮಾಡಿದ ಭಷ್ಟಾಚಾರ ಆರೋಪಗಳಿಗೆ ರಾಜ್ಯ ಸರ್ಕಾರದ 5 ಮಂದಿ ಹಿರಿಯ ಸಚಿವರು ತಿರುಗೇಟು ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಇವತ್ತು ಮತ್ತೇ ಯಡಿಯೂರಪ್ಪ ಸರ್ಕಾರದ ವಿರುದ್ಧ ಬುಸುಗುಟ್ಟಿದ್ದಾರೆ. ಹೌದು ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಅದ್ರಲ್ಲೂ ಒಂದು ಕಾಲದ ತಮ್ಮ ಶಿಷ್ಯ ಕೆ ಸುಧಾಕರ್‌ ಮೇಲೆ ಕೆಂಡಾಮಂಡಲವಾದ್ರು. ಕಾರ್ಮಿಕ ಇಲಾಖೆಯ ಫುಡ್ ಪ್ಯಾಕೆಟ್ಸ್‌ ಕೊಡುವಾಗ […]

‘ಅವರು ಕೌರವರಾಗೋಕೂ ಲಾಯಕ್ಕಲ್ಲ, ನಂಗೇನೂ ಗೊತ್ತಿಲ್ದೆ 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ!?’
Guru
| Edited By: |

Updated on:Jul 25, 2020 | 7:59 PM

Share

ಬೆಂಗಳೂರು: ಪ್ರತಿಪಕ್ಷ ನಾಯಕ ಮತ್ತು ರಾಜ್ಯ ಸರ್ಕಾರದ ನಡುವಿನ ಸಮರ ಕಡಿಮೆಯಾಗುವ ಬದಲು ಮತ್ತಷ್ಟು ತಾರಕಕ್ಕೇರುತ್ತಿದೆ. ಸಿದ್ದರಾಮಯ್ಯ ಮಾಡಿದ ಭಷ್ಟಾಚಾರ ಆರೋಪಗಳಿಗೆ ರಾಜ್ಯ ಸರ್ಕಾರದ 5 ಮಂದಿ ಹಿರಿಯ ಸಚಿವರು ತಿರುಗೇಟು ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಇವತ್ತು ಮತ್ತೇ ಯಡಿಯೂರಪ್ಪ ಸರ್ಕಾರದ ವಿರುದ್ಧ ಬುಸುಗುಟ್ಟಿದ್ದಾರೆ.

ಹೌದು ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಅದ್ರಲ್ಲೂ ಒಂದು ಕಾಲದ ತಮ್ಮ ಶಿಷ್ಯ ಕೆ ಸುಧಾಕರ್‌ ಮೇಲೆ ಕೆಂಡಾಮಂಡಲವಾದ್ರು. ಕಾರ್ಮಿಕ ಇಲಾಖೆಯ ಫುಡ್ ಪ್ಯಾಕೆಟ್ಸ್‌ ಕೊಡುವಾಗ ಅವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದು, ಅವತ್ತು ನೋಡಿದ್ರೆ ಕೋವಿಡ್‌ಗೆ ಬರೀ 324 ಕೋಟಿ ಖರ್ಚು ಮಾಡಿದ್ದೇವೆ ಅಂತ ಹೇಳಿದ್ದರಿ. ನಿನ್ನೆ ನೋಡಿದ್ರೆ 2018 ಕೋಟಿ ಅಂತಾ ಹೇಳಿದ್ದಿರಿ, ಸರ್ಕಾರದಲ್ಲಿರುವ ಸಚಿವರಿಗೇ ನಿಖರ ಮಾಹಿತಿ ನೀಡಿಲ್ಲ ಅಂದ್ರೆ ಕಳ್ಳತನ ಆಗಿದೆ ಅಂತಲ್ವಾ ಅರ್ಥ ಎಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು. ಸುಧಾಕರ್ ಇಲಾಖೆಯ 815 ಕೋಟಿ ಪ್ರಸ್ತಾಪ ಅವರದೇ ದಾಖಲೆಯಲ್ಲಿ ಇರೋದು. ನಂಗೆ ಏನೂ ಗೊತ್ತಿಲ್ಲದೇ ಟಿಕೆಟ್ ಕೊಡಿಸಿದೆನಾ? ಅಧಿಕಾರ ಇದೆ ಅಂತ ಬಾಯಿಗೆ ಬಂದಂಗೆ ಮಾತಾಡಬಾರದು, ನಂಗೇ ಪಾಠ ಹೇಳಿಕೊಡೋದಾ?

ಅಧಿಕಾರದ ಅಹಂನಿಂದ ಸುಧಾಕರ್ ಹೀಗೆಲ್ಲ ಮಾತಾಡ್ತಿದ್ದಾರೆ. ಅಪ್ರೂವ್ ಅಂದ್ರೆನು, ಸ್ಯಾಂಕ್ಷನ್ ಅಂದ್ರೇನು, ಎಕ್ಸ್‌ಪೆಂಡಿಚರ್ ಅಂದ್ರೇನು ಇದೆಲ್ಲ ಗೊತ್ತಿಲ್ಲ ನಂಗೆ, ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ? ಎಂದು ಸುಧಾಕರ್‌ ಅವರತ್ತ ವ್ಯಂಗ್ಯದ ಬಾಣ ಬೀಸಿದರು.

ನಾನು 14 ದಾಖಲಾತಿಗಳನ್ನು ಕೊಟ್ಟಿದ್ದೆ, ಅವರೇನಾದರೂ ದಾಖಲಾತಿ ಕೊಟ್ಟರಾ? ನಿನ್ನೆ ಅವರು ಬಿಡುಗಡೆ ಮಾಡಿದ ದಾಖಲೆ ನನ್ನ ಸರ್ಕಾರದ್ದಾ? ನಾನು ಸಿಎಂ ಆಗಿದ್ದೇನಾ ಆಗ..? ಯಾವಾಗ ತಪ್ಪು ಮಾಡಿದ್ರು ತಪ್ಪೆ, ಯಾರು ತಪ್ಪು ಮಾಡಿದ್ರೂ ತಪ್ಪೆ? ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.

Published On - 1:37 pm, Fri, 24 July 20

Follow Us
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ