AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಮಾಂಸ ನಿಷೇಧಿಸಿದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿ; ದರಿದ್ರ ಸರ್ಕಾರ ಎಂದ ಮಾಜಿ ಸಿಎಂ

ಎಷ್ಟು ದಿನ ಗೋಮಾತೆಯ ಪೂಜೆ ಮಾಡುತ್ತಾರೆ? ಸಗಣಿ ಎತ್ತದೆ ಇದ್ದವರು, ಬೆರಣಿ ತಟ್ಟದೆ ಇರುವರು, ಗಂಜಲ ಮುಟ್ಟದೆ ಇರೋರೆಲ್ಲ ಗೋಮಾತೆಯ ಪೂಜೆ ಮಾಡುತ್ತಾರೆ. ಹಾಲು ಕೊಡದೆ ಇರುವ ಹಸುಗಳನ್ನು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೋಮಾಂಸ ನಿಷೇಧಿಸಿದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿ; ದರಿದ್ರ ಸರ್ಕಾರ ಎಂದ ಮಾಜಿ ಸಿಎಂ
ವಿಪಕ್ಷ ನಾಯಕ ಸಿದ್ದರಾಮಯ್ಯ
Lakshmi Hegde
| Edited By: |

Updated on: Jan 10, 2021 | 4:28 PM

Share

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನವನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೆ ಅದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಎಷ್ಟು ದಿನ ಗೋಮಾತೆಯ ಪೂಜೆ ಮಾಡುತ್ತಾರೆ? ಸಗಣಿ ಎತ್ತದೆ ಇದ್ದವರು, ಬೆರಣಿ ತಟ್ಟದೆ ಇರುವರು, ಗಂಜಲ ಮುಟ್ಟದೆ ಇರೋರೆಲ್ಲ ಗೋಮಾತೆಯ ಪೂಜೆ ಮಾಡುತ್ತಾರೆ. ಹಾಲು ಕೊಡದೆ ಇರುವ ಹಸುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಇಡೀ ದೇಶದಲ್ಲಿ ಗೋಮಾಂಸ ನಿಷೇಧಿಸಿ. ವಿದೇಶಗಳಿಂದ ಬೀಫ್​ ಆಮದು ಆಗುವುದನ್ನೂ ಬ್ಯಾನ್​ ಮಾಡಿ. ಕೇರಳದಲ್ಲೇಕೆ ಗೋಹತ್ಯೆ ನಿಷೇಧ ಮಾಡಿಲ್ಲ ಎಂದರು. ಹಾಗೇ, ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಗ್ರಾಮೀಣ ಪ್ರದೇಶದ ಜನರು, ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಚರ್ಮ ಉದ್ಯಮದ ಮೇಲೆ ಕೂಡ ಪ್ರಭಾವ ಬೀರುತ್ತದೆ ಎಂದು ಹೇಳಿದರು.

ದರಿದ್ರ ಸರ್ಕಾರ ಬಿಜೆಪಿಯ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯನವರು, ಬಿಜೆಪಿಯವರು ದರಿದ್ರದವರು. ಅವರದ್ದು ದರಿದ್ರ ಸರ್ಕಾರ. ‘ನಮ್ಮ ಹಳ್ಳಿಯಲ್ಲಿ ನೀನು ತಂದಾಕು, ನಾನು ಉಂಡಾಕ್ತೀನಿ’ ಅನ್ನೋ ತರ ಬಿಜೆಪಿಯವರು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ!

Follow Us
Lakshmi Hegde
Lakshmi Hegde