AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಋತ್ಯ ರೈಲ್ವೆಯ ಹಲವು ರೈಲು ರದ್ದು, ಕೆಲವು ಭಾಗಶಃ ರದ್ದು, ಇಲ್ಲಿದೆ ಮಾಹಿತಿ

ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ. 15 ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರ ರದ್ದುಗೊಂಡಿವೆ. ಭಾಗಶಃ ರದ್ದುಗೊಂಡಿವೆ. ಈ ಕುರಿತು ನೈಋತ್ಯ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ನೈಋತ್ಯ ರೈಲ್ವೆಯ ಹಲವು ರೈಲು ರದ್ದು, ಕೆಲವು ಭಾಗಶಃ ರದ್ದು, ಇಲ್ಲಿದೆ ಮಾಹಿತಿ
ರೈಲು
ವಿವೇಕ ಬಿರಾದಾರ
|

Updated on: Mar 02, 2024 | 8:32 AM

Share

ಬೆಂಗಳೂರು, ಮಾರ್ಚ್​​ 02: ಕೆಂಗೇರಿ-ಹೆಜ್ಜಾಲ (Kengeri-Hejjal) ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ. 15 ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರ ರದ್ದುಗೊಂಡಿವೆ (Train Cancelled). ಭಾಗಶಃ ರದ್ದುಗೊಂಡಿವೆ. ಈ ಕುರಿತು ನೈಋತ್ಯ ರೈಲ್ವೆ (South Western Railway) ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮಾರ್ಚ್​​ 6 ರಿಂದ 12ರ ವರೆಗೆ ಈ ಕೆಳಗಿನ ರೈಲುಗಳು ರದ್ದಾಗಲಿವೆ ಅಥವಾ ಭಾಗಶಃ ರದ್ದಾಗಲಿವೆ. ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಹ ಸಂಚಾರ ನಡೆಸಲಿವೆ.

ರದ್ದುಗೊಂಡಿರುವ ರೈಲುಗಳು

  1. ರೈಲು ಸಂಖ್ಯೆ 16021: ಮಾರ್ಚ್ 6 ಮತ್ತು 7 ರಂದು ಡಾ. MGR ಚೆನ್ನೈ ಸೆಂಟ್ರಲ್-ಮೈಸೂರು ಮಧ್ಯೆ ಸಂಚರಿಸುವ ಡೈಲಿ ಎಕ್ಸ್‌ಪ್ರೆಸ್
  2. ರೈಲು ಸಂಖ್ಯೆ 20623: ಮಾರ್ಚ್ 7 ಮತ್ತು 8 ರಂದು ಮೈಸೂರು-KSR ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
  3. ರೈಲು ಸಂಖ್ಯೆ 20624: ಮಾರ್ಚ್ 7 ಮತ್ತು 8 ರಂದು KSR ಬೆಂಗಳೂರು-ಮೈಸೂರು ಡೈಲಿ ಎಕ್ಸ್‌ಪ್ರೆಸ್.
  4. ರೈಲು ಸಂಖ್ಯೆ 16022: ಮಾರ್ಚ್ 7 ಮತ್ತು 8 ರಂದು ಮೈಸೂರು-ಡಾ. MGR ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್
  5. ರೈಲು ಸಂಖ್ಯೆ 06267: ಮಾರ್ಚ್ 7 ಮತ್ತು 12 ರಂದು ಅರಸೀಕೆರೆ-ಮೈಸೂರು ಡೈಲಿ ಎಕ್ಸ್‌ಪ್ರೆಸ್
  6. ರೈಲು ಸಂಖ್ಯೆ 06269: ಮಾರ್ಚ್ 7 ಮತ್ತು 12 ರಂದು ಮೈಸೂರು-SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
  7. ರೈಲು ಸಂಖ್ಯೆ 06560: ಮಾರ್ಚ್ 7 ಮತ್ತು 12 ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ.
  8. ರೈಲು ಸಂಖ್ಯೆ 06270: ಮಾರ್ಚ್ 7 ಮತ್ತು 12 ರಂದು SMVT ಬೆಂಗಳೂರು-ಮೈಸೂರು ಡೈಲಿ ಎಕ್ಸ್‌ಪ್ರೆಸ್ ವಿಶೇಷ
  9. ರೈಲು ಸಂಖ್ಯೆ 06268: ಮಾರ್ಚ್ 8 ಮತ್ತು 13 ರಂದು ಮೈಸೂರು-ಅರಸಿಕೆರೆ ಎಕ್ಸ್‌ಪ್ರೆಸ್
  10. ರೈಲು ಸಂಖ್ಯೆ 06559: ಮಾರ್ಚ್ 8 ಮತ್ತು 13 ರಂದು KSR ಬೆಂಗಳೂರು-ಮೈಸೂರು ಮೆಮು ವಿಶೇಷ
  11. ರೈಲು ಸಂಖ್ಯೆ 01763: ಮಾರ್ಚ್ 8 ಮತ್ತು 13 ರಂದು KSR ಬೆಂಗಳೂರು-ಚನ್ನಪಟ್ಟಣ ಮೆಮು ವಿಶೇಷ

ಇದನ್ನೂ ಓದಿ: ರಾಜ್ಯದ 15 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ಭಾಗಶಃ ರದ್ದಾದ ರೈಲುಗಳು

  1. ರೈಲು ಸಂಖ್ಯೆ 06526: ಮಾರ್ಚ್​ 7 ಮತ್ತು 12 ರಂದು ಮೈಸೂರು- KSR ಬೆಂಗಳೂರು ವಿಶೇಷ ರೈಲು ಚನ್ನಪಟ್ಟಣ- KSR ಬೆಂಗಳೂರು ಮಧ್ಯೆ ಸಂಚಾರ ನಡೆಸುವುದಿಲ್ಲ.

ರೈಲು ಸಂಚಾರ ವಿಳಂಬ

  1. ರೈಲು ಸಂಖ್ಯೆ 16220: ಮಾರ್ಚ್​ 7 ರಂದು ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ 30 ನಿಮಿಷ ತಡವಾಗಲಿದೆ.
  2. ರೈಲು ಸಂಖ್ಯೆ 16231: ಮಾರ್ಚ್​ 12 ರಂದು ಮೈಸೂರು ಡೈಲಿ ಎಕ್ಸ್‌ಪ್ರೆಸ್, ಕೆಂಗೇರಿ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ತಡವಾಗಲಿದೆ.
  3. ರೈಲು ಸಂಖ್ಯೆ 16228: ಮಾರ್ಚ್​ 12 ರಂದು ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‌ಪ್ರೆಸ್ ನಾಯ್ರಾಂಡನಹಳ್ಳಿ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ತಡವಾಗಲಿದೆ.
  4. ರೈಲು ಸಂಖ್ಯೆ 16586: ಮಾರ್ಚ್​ 12 ರಂದು ಮುರ್ಡೇಶ್ವರ-SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ 15 ನಿಮಿಷಗಳ ಕಾಲ ತಡವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Read More
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ