AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ ಆಪ್ತರಿಗೆ ಬಿಗ್ ರಿಲೀಫ್, ಸಮನ್ಸ್ ನೀಡದಂತೆ ಇಡಿಗೆ ಸುಪ್ರೀಂ ಸೂಚನೆ

ಕಾಂಗ್ರೆಸ್​ನ ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಆಪ್ತರ ಮನೆಗಳಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಡಿಕೆಶಿ ಆಪ್ತರಿಗೆ ಬಿಗ್ ರಿಲೀಫ್ ದೊರೆತಿದೆ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಡಿಕೆಶಿ ಆಪ್ತರಿಗೆ ಸಮನ್ಸ್ ನೀಡಿದ್ದರು. ಇಡಿ ನೋಟಿಸ್ ಪ್ರಶ್ನಿಸಿ ಡಿಕೆಶಿ ಆಪ್ತರಾದ ಆಂಜನೇಯ, ಸುನಿಲ್ ಕುಮಾರ್ ಶರ್ಮಾ, ರಾಜೇಂದ್ರ, ಸಚಿನ್ ನಾರಾಯಣ್ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ಇದೀಗ ಸುಪ್ರೀಂಕೋರ್ಟ್ ಇಡಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಈ ನಾಲ್ವರಿಗೆ ಸಮನ್ಸ್ ನೀಡದಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್​ನಲ್ಲಿ ಆಂಜನೇಯ, […]

ಡಿಕೆಶಿ ಆಪ್ತರಿಗೆ ಬಿಗ್ ರಿಲೀಫ್, ಸಮನ್ಸ್ ನೀಡದಂತೆ ಇಡಿಗೆ ಸುಪ್ರೀಂ ಸೂಚನೆ
ಸಾಧು ಶ್ರೀನಾಥ್​
|

Updated on:Oct 15, 2019 | 3:20 PM

Share

ಕಾಂಗ್ರೆಸ್​ನ ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಆಪ್ತರ ಮನೆಗಳಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಡಿಕೆಶಿ ಆಪ್ತರಿಗೆ ಬಿಗ್ ರಿಲೀಫ್ ದೊರೆತಿದೆ.

ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಡಿಕೆಶಿ ಆಪ್ತರಿಗೆ ಸಮನ್ಸ್ ನೀಡಿದ್ದರು. ಇಡಿ ನೋಟಿಸ್ ಪ್ರಶ್ನಿಸಿ ಡಿಕೆಶಿ ಆಪ್ತರಾದ ಆಂಜನೇಯ, ಸುನಿಲ್ ಕುಮಾರ್ ಶರ್ಮಾ, ರಾಜೇಂದ್ರ, ಸಚಿನ್ ನಾರಾಯಣ್ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ಇದೀಗ ಸುಪ್ರೀಂಕೋರ್ಟ್ ಇಡಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಈ ನಾಲ್ವರಿಗೆ ಸಮನ್ಸ್ ನೀಡದಂತೆ ಸೂಚಿಸಿದೆ.

ಸುಪ್ರೀಂ ಕೋರ್ಟ್​ನಲ್ಲಿ ಆಂಜನೇಯ, ರಾಜೇಂದ್ರ ಪ್ರಕರಣದಲ್ಲಷ್ಟೆ ಮಧ್ಯಂತರ ಆದೇಶವಾಗಿದೆ. ಮತ್ತಿಬ್ಬರು ಆರೋಪಿಗಳ ಮಧ್ಯಂತರ ರಕ್ಷಣೆ ವಿಸ್ತರಿಸಿ ಎಂದು ಹೈಕೋರ್ಟ್​ ಮೊರೆ ಹೋಗಿದ್ದರು. ಹೀಗಾಗಿ ಒಂದು ವಾರ ಸಚಿನ್ ನಾರಾಯಣ್, ಸುನಿಲ್‌ ಶರ್ಮಾರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆಯನ್ನು ಹೈಕೋರ್ಟ್ ಮುಂದುವರಿಸಿದೆ.

ಐಟಿ ದಾಳಿ ವೇಳೆ ದೆಹಲಿಯ ಡಿಕೆ ಶಿವಕುಮಾರ್ ಮತ್ತು ಆಪ್ತರ ಮನೆಗಳಲ್ಲಿ ದಾಖಲೆಯಿಲ್ಲದ ಹಣ ಪತ್ತೆಯಾಗಿತ್ತು. ಹಣದ ಮೂಲ ನೀಡುವಂತೆ ಇಡಿ ದೂರು ದಾಖಲಿಸಿಕೊಂಡು ಸಮನ್ಸ್ ನೀಡಿತ್ತು. ಈ ಸಂಬಂಧ ಈಗಾಗಲೇ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ.

Published On - 3:04 pm, Tue, 15 October 19