4 ವರ್ಷದಿಂದ ಕಾಗದ-ಪತ್ರ ಹಂಚದೆ ಈ ಅಂಚೆ ಮಾಮ ಏನ್ಮಾಡ್ತಿದ್ದ!?

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಪೋಸ್ಟ್ ಮ್ಯಾನ್ ಸುರೇಶ ತಳವಾರ ಕಳೆದ 4 ವರ್ಷಗಳಿಂದ ಕಾಗದ ಪತ್ರಗಳನ್ನ ಹಂಚದೆ ಕಾಲ ಕಳೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 4 ವರ್ಷಗಳಿಂದ ಪತ್ರ ಹಂಚದೆ ಈ ಯುವ ಪೋಸ್ಟ್​ಮ್ಯಾನ್ ನಿರ್ಲಕ್ಷ್ಯತೋರಿದ್ದಾನೆ ಎನ್ನಲಾಗಿದೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮ ವಿಭಾಗಕ್ಕೆ ನಾಲ್ಕು ವರ್ಷಗಳಿಂದ ಬಂದಿದ್ದ ಪತ್ರಗಳು, ಎಟಿಎಂ ಕಾರ್ಡ್​ಗಳು, ಪರೀಕ್ಷಾ ಪ್ರವೇಶ ಪತ್ರಗಳು ಸೇರಿದಂತೆ ಯಾವುದೇ ಕಾಗದ ಪತ್ರ ತಲುಪಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾನೆ. 2016ರಿಂದ ಈವರೆಗೂ ಸುರೇಶ […]

4 ವರ್ಷದಿಂದ ಕಾಗದ-ಪತ್ರ ಹಂಚದೆ ಈ ಅಂಚೆ ಮಾಮ ಏನ್ಮಾಡ್ತಿದ್ದ!?
ಸಾಧು ಶ್ರೀನಾಥ್​

Updated on: Nov 11, 2019 | 6:04 PM

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಪೋಸ್ಟ್ ಮ್ಯಾನ್ ಸುರೇಶ ತಳವಾರ ಕಳೆದ 4 ವರ್ಷಗಳಿಂದ ಕಾಗದ ಪತ್ರಗಳನ್ನ ಹಂಚದೆ ಕಾಲ ಕಳೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

4 ವರ್ಷಗಳಿಂದ ಪತ್ರ ಹಂಚದೆ ಈ ಯುವ ಪೋಸ್ಟ್​ಮ್ಯಾನ್ ನಿರ್ಲಕ್ಷ್ಯತೋರಿದ್ದಾನೆ ಎನ್ನಲಾಗಿದೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮ ವಿಭಾಗಕ್ಕೆ ನಾಲ್ಕು ವರ್ಷಗಳಿಂದ ಬಂದಿದ್ದ ಪತ್ರಗಳು, ಎಟಿಎಂ ಕಾರ್ಡ್​ಗಳು, ಪರೀಕ್ಷಾ ಪ್ರವೇಶ ಪತ್ರಗಳು ಸೇರಿದಂತೆ ಯಾವುದೇ ಕಾಗದ ಪತ್ರ ತಲುಪಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾನೆ.
2016ರಿಂದ ಈವರೆಗೂ ಸುರೇಶ ತಳವಾರ 1000ಕ್ಕೂ ಅಧಿಕ ಪತ್ರ, ATM ಕಾರ್ಡ್​​ಗಳನ್ನು ಬಟವಾಡೆ ಮಾಡದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us