AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಕೊಂಚ ತಿಳಿಯಾಗಿದೆ… ಐಸಿಯು, ವೆಂಟಿಲೇಟರ್ ಬೆಡ್ ಅಭಾವ ಕೊಂಚ ಇಳಿಕೆಯಾಗಿದೆ

ಪರಿಸ್ಥಿತಿ ಹೀಗೆ ಕೊರೊನಾದಿಂದ ದೂರವಾಗಿ ಸದ್ಯ ತಿಳಿಯಾಗುತ್ತಿದೆ. ಆದರೆ ಕೊಂಚವೇ ಯಾಮಾರಿದರೂ ಕೊರೊನಾ ಮಹಾಮಾರಿ ಮತ್ತೆ ಧುತ್ತನೆ ಎದುರಾಗುವುದು ನಿಶ್ಚಿತ. ಏಕೆಂದರೆ ಕೊರೊನಾ ಸಂಪೂರ್ಣವಾಗಿ ಮಾಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಿಗೆ ಕೊರೊನಾ 3ನೆಯ ಅಲೆ ಎದುರಾಗುವ ಅಪಾಯ ಎದುರಿಗೇ ಇದೆ. ಹಾಗಾಗಿ, ಸ್ವಯಂ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ನಮಗೂ ಕ್ಷೇಮ ನಾಡಿಗೂ ಕ್ಷೇಮ

ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಕೊಂಚ ತಿಳಿಯಾಗಿದೆ... ಐಸಿಯು, ವೆಂಟಿಲೇಟರ್ ಬೆಡ್  ಅಭಾವ ಕೊಂಚ ಇಳಿಕೆಯಾಗಿದೆ
ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಕೊಂಚ ತಿಳಿಯಾಗಿದೆ... ಐಸಿಯು, ವೆಂಟಿಲೇಟರ್ ಬೆಡ್ ಅಭಾವ ಕೊಂಚ ಇಳಿಕೆಯಾಗಿದೆ
ಸಾಧು ಶ್ರೀನಾಥ್​
|

Updated on: May 29, 2021 | 9:39 AM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಈಗ ಕೊಂಚ ತಿಳಿಯಾಗಿದೆ. ಕೊರೊನಾ ಎರಡನೆಯ ಅಲೆ ಭಯಾನಕವಾಗಿ ಎದುರಾದಾಗ ರಾಜ್ಯ ಸರ್ಕಾರ ತರಾತುರಿಯಲ್ಲಿ ಲಾಕ್ಡೌ​ನ್ ಜಾರಿಗೊಳಿಸಿತ್ತು. ದಿಢೀರನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳು ಲಭ್ಯವಾಗದೆ ಆತಂಕದ ಗೂಡಾಗಿತ್ತು ರಾಜಧಾನಿ ಬೆಂಗಳೂರು. ಆಕ್ಸಿಜನ್, ಐಸಿಯು, ವೆಂಟಿಲೇಟರ್​​ಗಳು, ಔಷಧಗಳು ಲಭ್ಯವಾಗದೆ ಸೋಂಕಿತರು ರಸ್ತೆರಸ್ತೆಗಳಲ್ಲಿ, ಆಸ್ಪತ್ರೆಗಳ ಬಾಗಿಲ ಬಳಿಯೇ ಪ್ರಾಣ ಬಿಡುವಂತಹ ಪ್ರಕರಣಗಳು ಹೆಚ್ಚಾಗತೊಡಗಿದವು. ಕೊನೆಗೆ ಮೃತ ಸೋಂಕಿತರ ಅಂತ್ಯಸಂಸ್ಕಾರವೂ ಕಗ್ಗಂಟಾಗಿತ್ತು. ಇದಕ್ಕೆಲ್ಲ ಪರಿಹಾರೋಪಾಯ ಎಂಬಂತೆ ನಿಯಂತ್ರಣ ಕ್ರಮವಾಗಿ ಲಾಕ್​ಡೌನ್​ ಅನ್ನು ಜಾರಿಗೊಳಿಸಿತು. ದೇಶದ ಬಹುತೇಕ ರಾಜ್ಯಗಳ ಪರಿಸ್ಥಿತಿಯೂ ಹೀಗೇ ಆಗಿತ್ತು. ಅದಾದ ಬಳಿಕ, ಕಟ್ಟುನಿಟ್ಟಾಗಿ ಲಾಕ್ಡೌ​ನ್ ಜಾರಿಗೊಳಿಸಿದ ಪರಿಣಾಮ ಕೊರೊನಾ ವೈರಸ್​​ ಚೈನ್​ ಕಟ್​ ಆಗಿ ಸೋಂಕು ತಹಬಂದಿಗೆ ಬಂದಿದೆ ಅನ್ನಬಹುದು. ಆದರೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಹಿಡಿತಕ್ಕೆ ಸಿಕ್ಕಿದೆ ಅನ್ನುವ ಹಾಗಿಲ್ಲ. ಏಕೆಂದ್ರೆ ಬರೀ ಕೊರೊನಾ ಮಾರಿಯೊಂದೇ ಅಲ್ಲ ಅದರ ಜೊತೆಜೊತೆಗೆ ಫಂಗಸ್​ಗಳೂ ಬಣ್ಣ ಬಣ್ಣಗಳಲ್ಲಿ ಬಂದಿದ್ದು ಮನುಷ್ಯ ಪೇಲವವಾಗತೊಡಗಿದ್ದಾನೆ. ಆದರೂ ಪರಿಸ್ಥಿತಿ ತಿಂಗಳ ಹಿಂದೆಯಿದ್ದಷ್ಟು ಭೀಕರವಾಗಿಲ್ಲ ಅನ್ನಬಹುದು. ಇದಕ್ಕೆ ಪೂರಕವಾಗಿ ಕೆಳಗಿನ ಅಂಶಗಳನ್ನು ನೋಡುವುದಾದರೆ..

ಹೌದು, ರಾಜ್ಯದ ಜನ ಸರ್ಕಾರದ ಆದೇಶದಂತೆ ಲಾಕ್​ಡೌನ್​ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರ ಪರಿಣಾಮ ಐಸಿಯು, ಐಸಿಯು ವೆಂಟಿಲೇಟರ್ ಹಾಸಿಗೆಗಳ ಅಭಾವ ಕೊಂಚ ಇಳಿಕೆಯಾಗಿದೆ. ಆಕ್ಸಿಜನ್​ ಸಕಾಲಕ್ಕೆ ಸಿಗುವಂತಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ. ಶೇ.10 ರಷ್ಟು ಐಸಿಯು ಬೆಡ್ ಗಳು ನಗರದಲ್ಲಿ ಲಭ್ಯವಾಗುತ್ತಿವೆ. ಸಧ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು ಹೆಚ್​ಡಿಯು ಬೆಡ್ ಗಳು 1554 ಇದ್ದು ಬಹುತೇಕ ಖಾಲಿ ಇವೆ. ಇನ್ನು ಐಸಿಯು ಬೆಡ್ 291, ಐಸಿಯು ವಿತ್ ವೆಂಟಿಲೇಟರ್ ಬೆಡ್ 174 ಗಳು ಇವೆ.

ಹಾಗೆಯೇ, ಬೆಂಗಳೂರಿನ ಮೆಡಿಕಲ್ ಕಾಲೇಜ್ ಗಳಲ್ಲಿ ಹೆಚ್​ಡಿಯು ಹಾಸಿಗೆಗಳು 1849 ಇವೆ, ಐಸಿಯು -146, ಐಸಿಯು ವಿತ್ ವೆಂಟಿಲೇಟರ್ -159 ಹಾಸಿಗೆಗಳು ಇವೆ. ಇನ್ನು ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜ್ ಗಳಲ್ಲಿ ಹೆಚ್​ಡಿಯು -265 ಹಾಸಿಗೆಗಳು, ಐಸಿಯು -23 ಹಾಸಿಗೆಗಳು, ಐಸಿಯು ವಿತ್ ವೆಂಟಿಲೇಟರ್ -22 ಹಾಸಿಗೆಗಳು ಇವೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್​ಡಿಯು -100 ಹಾಸಿಗೆಗಳು, ಐಸಿಯು -70 ಹಾಸಿಗೆಗಳು, ಐಸಿಯು ವಿತ್ ವೆಂಟಿಲೇಟರ್- 79 ಹಾಸಿಗೆಗಳಿದ್ದು ಈ‌ ಪೈಕಿ ಬಹುತೇಕ ಬೆಡ್ ಗಳು ಫುಲ್‌ ಆಗಿದ್ದು, ಶೇ. 10 ರಷ್ಟು ಮಾತ್ರ ಐಸಿಯು ಬೆಡ್ ಗಳು ಖಾಲಿ ಇವೆ.

ಪರಿಸ್ಥಿತಿ ಹೀಗೆ ಕೊರೊನಾದಿಂದ ದೂರವಾಗಿ ಸದ್ಯ ತಿಳಿಯಾಗುತ್ತಿದೆ. ಆದರೆ ಕೊಂಚವೇ ಯಾಮಾರಿದರೂ ಕೊರೊನಾ ಮಹಾಮಾರಿ ಮತ್ತೆ ಧುತ್ತನೆ ಎದುರಾಗುವುದು ನಿಶ್ಚಿತ. ಏಕೆಂದರೆ ಕೊರೊನಾ ಸಂಪೂರ್ಣವಾಗಿ ಮಾಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಿಗೆ ಕೊರೊನಾ 3ನೆಯ ಅಲೆ ಎದುರಾಗುವ ಅಪಾಯ ಎದುರಿಗೇ ಇದೆ. ಹಾಗಾಗಿ, ಸ್ವಯಂ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ನಮಗೂ ಕ್ಷೇಮ ನಾಡಿಗೂ ಕ್ಷೇಮ, ಅಲ್ಲವೇ!?

(Thanks to strict lockdown guidelines coronavirus havoc reducing in bengaluru icu beds are available)

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​