AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷ ಬಳಿಕ ಕೋಡಿ ಬಿದ್ದ ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಬೋರನಕಣಿವೆ ಜಲಾಶಯ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳ ಕಟ್ಟೆ ಬಳಿ ಇರುವ ಬೋರನಕಣಿವೆ ಜಲಾಶಯ, ಸುಮಾರು 30 ಅಡಿ ಎತ್ತರ ಹೊಂದಿದೆ. ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಭರ್ತಿಯಾಗಿದ್ದ ಜಲಾಶಯ ಇಂದು ಕೋಡಿ ತುಂಬಿ ಹರಿದಿದೆ.

22 ವರ್ಷ ಬಳಿಕ ಕೋಡಿ ಬಿದ್ದ ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಬೋರನಕಣಿವೆ ಜಲಾಶಯ
ಬೋರನಕಣಿವೆ ಜಲಾಶಯ
TV9 Web
| Edited By: |

Updated on:Sep 10, 2022 | 7:37 PM

Share

ತುಮಕೂರು: ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ‌ ಮಳೆಗೆ ಜಿಲ್ಲೆಯ(Tumkur Rain) ಬಹುತೇಕ ಕೆರೆ ಕಟ್ಟೆ ನದಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಕೋಡಿ ಬಿದ್ದು ರಭಸವಾಗಿ ಹರಿಯುತ್ತಿವೆ. ಹೀಗಿರುವಾಗ ಪ್ರಸಿದ್ಧ ಬೋರನಕಣಿವೆ ಜಲಾಶಯ(Borana Kanive) ಕೂಡ ಇಂದು ಕೋಡಿ ಹರಿದಿದೆ. ಸರಿಸುಮಾರು ಎರಡು ದಶಕಗಳ ಬಳಿಕ ಕೋಡಿ ಹರಿದು ಬಿದಿದ್ದು ತುಂಬಿದ ಜಲಾಶಯಕ್ಕೆ ಕ್ಷೇತ್ರದ ಶಾಸಕರು ಆಗಿರುವ ಸಚಿವ ಜೆಸಿ ಮಾಧುಸ್ವಾಮಿ(JC Madhu Swamy) ಭಾಗಿನ ಅರ್ಪಿಸಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳ ಕಟ್ಟೆ ಬಳಿ ಇರುವ ಬೋರನಕಣಿವೆ ಜಲಾಶಯ, ಸುಮಾರು 30 ಅಡಿ ಎತ್ತರ ಹೊಂದಿದೆ. ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಭರ್ತಿಯಾಗಿದ್ದ ಜಲಾಶಯ ಇಂದು ಕೋಡಿ ತುಂಬಿ ಹರಿದಿದೆ. ಕೋಡಿ ಹರಿದ ದೃಶ್ಯವನ್ನ ಸ್ಥಳೀಯರು ಕಣ್ಣು ತುಂಬಿಕೊಂಡಿದ್ದಾರೆ. ಇನ್ನೂ ಈ ಜಲಾಶಯವನ್ನ ಮೈಸೂರು ಮಹಾರಾಜರು ನಿರ್ಮಿಸಿದರು. 1888 ರಲ್ಲಿ ಆರಂಭವಾಗಿ 1892 ರಲ್ಲಿ ನಾಲ್ಕು ವರ್ಷಗಳ ಕಾಲ ಜಲಾಶಯ ನಿರ್ಮಿಸಿದ್ದಾರೆ ಎನ್ನಲಾಗಿದೆ. ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಸುಮಾರು 375 ಕೆರೆಗಳು ತುಂಬಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನ ನೀರಾವರಿಗೆ ಸದ್ಬಳಕೆ ಮಾಡಿಕೊಳ್ಳಲು ಜಲಾಶಯ ನಿರ್ಮಿಸಿದ್ದಾರೆ.

tumkur dam

ಇನ್ನೂ ಮೈಸೂರು ಅರಸರಾದ ಚಾಮರಾಜೇಂದ್ರ ಒಡೆಯರ್ ಸ್ಥಳ ವೀಕ್ಷಣೆಗೆ ಎಂದು ಬಂದಾಗ ಕುರಿ ಮೇಯಿಸುವ ಬೋರನೆಂಬ ವ್ಯಕ್ತಿ ಇಲ್ಲಿ ಜಲಾಶಯ ನಿರ್ಮಿಸಿಕೊಡಿ ಅಂತಾ ರಾಜರಿಗೆ ಮನವಿ ಮಾಡಿದ್ದನಂತೆ. ಹೀಗಾಗಿ ಬೋರನಕಣಿವೆ ಅಂತಾ ಹೆಸರು ಬಂದಿದೆ ಎನ್ನಲಾಗಿದೆ. ಇನ್ನೂ ಜಲಾಶಯಕ್ಕೆ ಮೈಸೂರು ಸಂಸ್ಥಾನ 2.80 ಲಕ್ಷ ವೆಚ್ಚ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ. ಜಲಾಶಯದಲ್ಲಿ 2269 ದಶ ಘನಲಕ್ಷ ಅಡಿಗಳಿವೆ ಎನ್ನಲಾಗಿದೆ. ಈ ಜಲಾಶಯ 1977 ಹಾಗೂ 2000 ಇಸವಿಯಲ್ಲಿ ಕೋಡಿ ಬಿದ್ದಿತ್ತು ಎನ್ನಲಾಗಿದೆ. ಸದ್ಯ ಈ ಬಾರಿ ಭರ್ಜರಿ ಮಳೆಯಾದ ಕಾರಣ ಜಲಾಶಯ ನಿರ್ಮಾಣದ ಬಳಿಕ ಮೂರನೇ ಬಾರಿಗೆ ಕೋಡಿ‌ ಹರಿದಿದೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಈ ಬೋರನಕಣಿವೆ ಸಹಕಾರಿಯಾಗಿದೆ.

ವರದಿ: ಮಹೇಶ್, ಟಿವಿ9 ತುಮಕೂರು

Published On - 7:35 pm, Sat, 10 September 22

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ