AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಬ್ಬಿ ಜೆಡಿಎಸ್ ಶಾಸಕ​​ಗೆ ಹೆಚ್​​ಡಿ ಕುಮಾರಸ್ವಾಮಿ ಫೋನ್ ಕಾಲ್, ಮನವೊಲಿಕೆ ಯತ್ನ: ಆದರೆ ಮಾರ್ಮಿಕ ಪ್ರಶ್ನೆ ಎತ್ತಿದ ಶ್ರೀನಿವಾಸ್

ಇನ್ನೇನು ರಾಜ್ಯ ಅಸೆಂಬ್ಲಿಗೆ ಸಾರ್ವತ್ರಿಕ ಚುನಾವಣೆ ಎದುರಿಗೇ ಇದೆ. ಮುಂದಿನ ವರ್ಷ ಇಷ್ಟೊತ್ತಿಗೆ ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುತ್ತದೆ. ಇದನ್ನು ಮನಗಂಡ ಪ್ರಮುಖ ರಾಜಕೀಯ ಪಕ್ಷಗಳು ಅದಾಗಲೇ ಚುನಾವಣೆ ಮೋಡ್​ಗೆ ಬಂದಿವೆ. ತಾಜಾ ಬೆಳವಣಿಗೆಯಲ್ಲಿ ಗುಬ್ಬಿ ಜೆಡಿಎಸ್ ಶಾಸಕ​​ ಶ್ರೀನಿವಾಸ್​ಗೆ ಹೆಚ್​​ಡಿ ಕುಮಾರಸ್ವಾಮಿ ಫೋನ್ ಮಾಡಿ, ಮನವೊಲಿಕೆ ಯತ್ನ ನಡೆಸಿದ್ದಾರೆ.

ಗುಬ್ಬಿ ಜೆಡಿಎಸ್ ಶಾಸಕ​​ಗೆ ಹೆಚ್​​ಡಿ ಕುಮಾರಸ್ವಾಮಿ ಫೋನ್ ಕಾಲ್, ಮನವೊಲಿಕೆ ಯತ್ನ: ಆದರೆ ಮಾರ್ಮಿಕ ಪ್ರಶ್ನೆ ಎತ್ತಿದ  ಶ್ರೀನಿವಾಸ್
ಗುಬ್ಬಿ ಜೆಡಿಎಸ್ ಶಾಸಕ​​ಗೆ ಹೆಚ್​​ಡಿ ಕುಮಾರಸ್ವಾಮಿ ಫೋನ್ ಕಾಲ್, ಮನವೊಲಿಕೆ ಯತ್ನ: ಆದರೆ ಮಾರ್ಮಿಕ ಪ್ರಶ್ನೆ ಎತ್ತಿದ ಶ್ರೀನಿವಾಸ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 27, 2022 | 2:39 PM

ತುಮಕೂರು: ಇನ್ನೇನು ರಾಜ್ಯ ಅಸೆಂಬ್ಲಿಗೆ ಸಾರ್ವತ್ರಿಕ ಚುನಾವಣೆ (Karnataka Assembly Elections 2023) ಎದುರಿಗೇ ಇದೆ. ಮುಂದಿನ ವರ್ಷ ಇಷ್ಟೊತ್ತಿಗೆ ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುತ್ತದೆ. ಇದನ್ನು ಮನಗಂಡ ಪ್ರಮುಖ ರಾಜಕೀಯ ಪಕ್ಷಗಳು ಅದಾಗಲೇ ಚುನಾವಣೆ ಮೋಡ್​ಗೆ ಬಂದಿವೆ. ಅದರಲ್ಲೂ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್ ಚುನಾವಣೆ ತಂತ್ರಗಾರಿಕೆ ಹೆಣೆಯುವುದರಲ್ಲಿ ಮಗ್ನವಾಗಿವೆ. ಈ ವಿದ್ಯಮಾನಗಳ ಸಮ್ಮುಖದಲ್ಲಿ ಸದ್ಯಕ್ಕೆ ಜೆಡಿಎಸ್ 123 ಗುರಿಯೊಂದಿಗೆ ತುಸು ಹೆಚ್ಚೇ ಅನ್ನುವಷ್ಟು ಚುನಾವಣೆಯತ್ತ ಮುಖ ಮಾಡಿದೆ. ಜೆಡಿಎಸ್ ಶಾಸಕ, ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ​ ಅವ್ರು (HD Kumaraswamy) ಇತ್ತೀಚೆಗಷ್ಟೇ ತಮ್ಮ ಪಕ್ಷದ ಶಾಸಕ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್​​ ಅವರಿಂದ ವಿಮುಖರಾಗಿದ್ದರು. ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಆದರೆ ತಾಜಾ ಬೆಳವಣಿಗೆಯಲ್ಲಿ ಶ್ರೀನಿವಾಸ್ ಅವರಿಗೆ ಮತ್ತೆ ಹೆಚ್​​ಡಿಕೆ ಗಾಳ ಹಾಕಿದ್ದಾರೆ. ಅಸಮಾಧಾನಗೊಂಡಿದ್ದ ಶಾಸಕ ಶ್ರೀನಿವಾಸ್​ ಮನವೊಲಿಕೆ ಯತ್ನ ನಡೆಸಿದ್ದಾರೆ. ಕುಮಾರಸ್ವಾಮಿ​ ಅವರು ಶಾಸಕ ಶ್ರೀನಿವಾಸ್​ಗೆ (Gubbi JDS MLA SR Srinivas) 2 ಬಾರಿ ಫೋನ್ ಕರೆ ಮಾಡಿದ್ದಾರೆ.

Also Read:

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಟ ರಿಷಭ್ ಶೆಟ್ಟಿ ಚಾಲನೆ; 3 ದಿನಗಳ ಕಾಲ ನಡೆಯುವ ಎಕ್ಸ್ಪೋಗೆ ಭೇಟಿ ಕೊಟ್ಟು ಚಿನ್ನ ಗೆಲ್ಲಿ

ಅಸಮಾದಾನಿತ ಶಾಸಕ ಮನವೊಲಿಕೆಗೆ ಕುಮಾರಸ್ವಾಮಿ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ತುಮಕೂರು ಜಿಲ್ಲೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ನಾನು ಎಂದೂ ಜೆಡಿಎಸ್ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ಜೆಡಿಎಸ್ ಮುಖಂಡರೇ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದಾರೆ. ಆ ವ್ಯಕ್ತಿಯನ್ನೇ ಮುಂದಿನ ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದಾರೆ. ಆದ್ರೀಗ ಇದೀಗ ಮತ್ತೆ ನನಗೆ ಕೆರೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾತುಕತೆಗೆ ಜೆಡಿಎಸ್ ಮುಖಂಡರು ಆಹ್ವಾನಿಸುತ್ತಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟಿಲ್ಲ ಎಂದು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಇದೀಗ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬನನ್ನು ಕರೆದುಕೊಂಡುಬಂದು ಅವರೇ ಮುಂದಿನ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು. ಆತ ಕ್ಷೇತ್ರದಲ್ಲಿ ಹಣ ಖರ್ಚು ಮಾಡಿ, ಜನತಾ ಜಲಧಾರೆ ಕಾರ್ಯಕ್ರಮ ಸಹ ಮಾಡಿದ್ದಾನೆ. ಆತನನ್ನು ಇದೀಗ ಜೆಡಿಎಸ್ ಮುಖಂಡರು ನಡುನೀರಿನಲ್ಲಿ ಕೈಬಿಟ್ಟಂತೆ ಆಗುವುದಿಲ್ಲವೇ!? ಎಂದು ತುಮಕೂರಿನ ಗುಬ್ಬಿಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Fri, 27 May 22

ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ರಥಯಾತ್ರೆಯಲ್ಲಿ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ ಆನೆ
ರಥಯಾತ್ರೆಯಲ್ಲಿ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ ಆನೆ
ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ವಿವರಿಸಿದ ಮಡೆನೂರು ಮನು
ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ವಿವರಿಸಿದ ಮಡೆನೂರು ಮನು