AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲಿ ಬೆಂಕಿ ತಗುಲಿ ಮನೆ ಭಸ್ಮ; ಸುಟ್ಟು ಕರುಕಲಾದ ವೃದ್ಧ

ದೊಡ್ಡಬಸವಯ್ಯ ಎಂಬ ವೃದ್ಧ ಬೆಂಕಿಗಾಹುತಿಯಾದ ದುರ್ದೈವಿ. ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ, ವೃದ್ಧ ದೀಪ ಹೊತ್ತಿಸಿದ್ದರು.

ತುಮಕೂರಿನಲ್ಲಿ ಬೆಂಕಿ ತಗುಲಿ ಮನೆ ಭಸ್ಮ; ಸುಟ್ಟು ಕರುಕಲಾದ ವೃದ್ಧ
ಮನೆಯೊಂದಿಗೆ ಸುಟ್ಟು ಕರಕಲಾಗಿರುವ ವೃದ್ಧ
TV9 Web
| Edited By: |

Updated on:Aug 11, 2021 | 11:56 AM

Share

ತುಮಕೂರು: ಬೆಂಕಿ (Fire) ತಗುಲಿ ಮನೆ ಭಸ್ಮವಾಗಿರುವ ಘಟನೆ ತುಮಕೂರು ತಾಲೂಕಿನ ಅಸಲೀಪುರದಲ್ಲಿ ನಡೆದಿದೆ. ಮನೆಯೊಂದಿಗೆ 70 ವರ್ಷದ ವೃದ್ಧ ಕೂಡಾ ಸಜೀವವಾಗಿ  ಸುಟ್ಟು ಕರುಕಲಾಗಿದ್ದಾರೆ. ದೊಡ್ಡಬಸವಯ್ಯ ಎಂಬ ವೃದ್ಧ ಬೆಂಕಿಗಾಹುತಿಯಾದ ದುರ್ದೈವಿ. ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ, ವೃದ್ಧ ದೀಪ ಹೊತ್ತಿಸಿದ್ದರು. ಮನೆಯಲ್ಲಿ ಇದ್ದ ತೆಂಗಿನ ಮಟ್ಟೆಯ ಚೀಲಕ್ಕೆ ಬೆಂಕಿ ತಗುಲಿ ಮನೆ ಭಸ್ಮ ಸಂಪೂರ್ಣ ಭಸ್ಮಾವಗಿದೆ. ಸದ್ಯ ಸ್ಥಳಕ್ಕೆ ಬೆಳ್ಳಾವಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಸಲೀಪುರ ಗ್ರಾಮದಲ್ಲಿ ಬೆಳಗಿನ ಜಾವ ಮನೆಗೆ ಬೆಂಕಿ ತಗುಲಿ ವೃದ್ಧ ದೊಡ್ಡಬಸವಯ್ಯ ಸಂಪೂರ್ಣ ಸಜೀವ ದಹನವಾಗಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ವೃದ್ಧ ಪ್ರತಿ ರಾತ್ರಿ ದೀಪದ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದರಂತೆ. ರಾತ್ರಿ ಮಲಗುವ ವೇಳೆ ದೀಪ ಹಚ್ಚಿ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದಾಗ ಈ ಘಟನೆ ಸಂಭವಿಸಿದೆ.

ವೃದ್ಧ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಇವರಿಗೆ ಇಬ್ಬರು ಪತ್ನಿಯರಿದ್ದು, ದೊಡ್ಡ ಪತ್ನಿ ಬಿಟ್ಟು ಹೋಗಿದ್ದಾಳೆ. ಚಿಕ್ಕ ಪತ್ನಿ ಮಾನಸಿಕ ಅಸ್ವಸ್ತೆಯಾಗಿದ್ದು, ಮನೆಯಲ್ಲಿ ಇರುತಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ವೃದ್ಧನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ.

ಇದನ್ನೂ ಓದಿ

ಚಿಕ್ಕಮಗಳೂರು ಗ್ರಾಮವೊಂದಕ್ಕೆ ನುಗ್ಗಿದ ಕಾಡಾನೆ, ಜನರಿಗೆ ಆತಂಕ; ಫೋಟೋಗಳು ಇಲ್ಲಿವೆ

Sperm Whale Ambergris: ಮತ್ತೆ 80 ಕೋಟಿ ರೂ ಮೌಲ್ಯದ ಅಂಬರ್​​​ಗ್ರೀಸ್​ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು, ಐವರ ಬಂಧನ

(house has been burned to the fire and elderly man with the house burned to death at tumkur)

Published On - 11:46 am, Wed, 11 August 21

ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು