ತಣ್ಣಗಿದ್ದ ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?: ಓರ್ವನ ಡೆಡ್ಲಿ ಮರ್ಡರ್​

ತುಮಕೂರಿನ ಮಂಜುನಾಥ ನಗರದಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಕೊಲೆಯಾಗಿದ್ದು, ರೌಡಿಶೀಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾಂಗು-ಮಚ್ಚುಗಳನ್ನು ಬಳಸಿ ನಡೆಸಿದ ಈ ಅಟ್ಯಾಕ್​, ತುಮಕೂರಿನಲ್ಲಿ ಗ್ಯಾಂಗ್‌ವಾರ್ ಮತ್ತೆ ಶುರುವಾಯ್ತಾ ಎಂಬ ಅನುಮಾನ ಹುಟ್ಟುಹಾಕಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ತಣ್ಣಗಿದ್ದ ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?: ಓರ್ವನ ಡೆಡ್ಲಿ ಮರ್ಡರ್​
ಕೊಲೆಯಾದ ಅಭಿಷೇಕ್​
Updated By: ಪ್ರಸನ್ನ ಹೆಗಡೆ

Updated on: Nov 14, 2025 | 7:43 PM

ತುಮಕೂರು, ನವೆಂಬರ್​ 14: ಹಳೆ ದ್ವೇಷಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕೊಲೆಯಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಲಾಂಗು-ಮಚ್ಚುಗಳಿಂದ ನಡೆದ ಫೈಟ್​​ನಲ್ಲಿ ಕ್ಯಾತ್ಸಂದ್ರದ ನಿವಾಸಿ ಅಭಿಷೇಕ್​ ಎಂಬಾಂತ ಮೃತಪಟ್ಟಿದ್ದು, ಎನ್​​ಇಪಿಎಸ್ ಠಾಣೆಯ ರೌಡಿಶೀಟರ್ ಮನೋಜ್​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆ ಬಗ್ಗೆ ಇನ್ನೂ ಸಿಕ್ಕಿಲ್ಲ ಸ್ಪಷ್ಟತೆ

ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ್​ ಮತ್ತು ಮನೋಜ್​ ಗುಂಪಿನ ಹುಡುಗರು ಬಾರ್​​ನಲ್ಲಿ ಕಿರಿಕ್​ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಕಳೆದ ತಿಂಗಳು ಒಂದೆರಡು ಬಾರಿ ರಾಜಿ ಸಂಧಾನದ ಯತ್ನವೂ ನಡೆದಿತ್ತು. ನಿನ್ನೆ (ನ.13) ರಾತ್ರಿಯೂ ಇದೇ ವಿಚಾರವಾಗಿ ಮಾತುಕತೆ ನಡೆದಿದ್ದು, ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಭಿಷೇಕ್ ತನ್ನ ಇಬ್ಬರು ಗೆಳೆಯರ ಜೊತೆ ಬಂದು ಮನೋಜ್ ಮೇಲೆ ಮೊದಲು ಅಟ್ಯಾಕ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಮನೋಜ್​ ತನ್ನ ಜೊತೆಗಾರರನ್ನು ಕರೆಸಿ ಅಭಿಷೇಕ್ ಮೇಲೆ ದಾಳಿ ಮಾಡಿ ಹತ್ಯೆಮಾಡಿದ್ದಾನೆ. ಮತ್ತೊಂದು ಗುಂಪಿನ ದಾಳಿಯಿಂದ ಮನೋಜ್​ಗೂ ಗಂಭೀರ ಗಾಯವಾಗಿ ಎನ್ನಲಾಗಿದೆ. ಆದರೆ ನಿಜಕ್ಕೂ ಅಲ್ಲಾಗಿದ್ದೇನು ಎಂಬುದು ಸದ್ಯಕ್ಕೆ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಭಿಷೇಕ್ ಹತ್ಯೆ ಸಂಬಂಧ ಕೊಲೆ ಪ್ರಕರಣ ಹಾಗೂ ರೌಡಿಶೀಟರ್ ಮನೋಜ್ ಮೇಲಿನ ಹಲ್ಲೆ ಸಂಬಂಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೋಟೆಲ್​​​ನಲ್ಲಿ ಮಲಗಿದ್ದಲ್ಲೇ ಹೆಣವಾದ ಯುವಕ, ಸಾವಿನ ಹಿಂದೆ ಮಹಿಳೆಯ ಕರಿನೆರಳು?

ತುಮಕೂರಲ್ಲಿ ಶುರುವಾಯ್ತಾ ಗ್ಯಾಂಗ್​​ವಾರ್​?

ಘಟನೆ ಬೆನ್ನಲ್ಲೇ ಇಷ್ಟು ದಿನ ತಣ್ಣಗಿದ್ದ ತುಮಕೂರಿನಲ್ಲಿ ಮತ್ತೆ ಗ್ಯಾಂಗ್​ವಾರ್​ ಆರಂಭವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಮಾರಮಾರಿಯೇ ನಡೆದಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಲಾಂಗು-ಮಚ್ಚುಗಳಿಂದ ಅಟ್ಟಹಾಸ ನಡೆದು ರಕ್ತ ಹರಿದಿದ್ದು, ರೌಡಿಗಳು ಫೀಲ್ಡ್​​ನಲ್ಲಿ ಮತ್ತೆ ಆ್ಯಕ್ಟೀವ್​​ ಆಗಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.