AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಮಂಡಲದ ಮೂಲಸ್ವರೂಪ ಹಾಲಿಟ್ಟು ಸೇವೆ; ನಾಗಾರಾಧನೆ ಬಗ್ಗೆ ಇಲ್ಲಿದೆ ವಿವರ ಗಮನಿಸಿ

ಆವೇಶಭರಿತ ನಾಗಪಾತ್ರಿ ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ಅದ್ದೂರಿ ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ.

ನಾಗಮಂಡಲದ ಮೂಲಸ್ವರೂಪ ಹಾಲಿಟ್ಟು ಸೇವೆ; ನಾಗಾರಾಧನೆ ಬಗ್ಗೆ ಇಲ್ಲಿದೆ ವಿವರ ಗಮನಿಸಿ
ನಾಗಾರಾಧನೆ
TV9 Web
| Updated By: preethi shettigar|

Updated on: Dec 13, 2021 | 11:54 AM

Share

ಉಡುಪಿ: ನಂಬಿಕೆ ಮತ್ತು ಬುದ್ಧಿವಂತಿಕೆ ಎರಡೂ ಮನೋಧರ್ಮಗಳು ಬಲವಾಗಿ ಬೇರೂರಿರುವ ಸ್ಥಳ ಕರಾವಳಿ. ಕರಾವಳಿಯ ನಾಗಮಂಡಲ ಆಚರಣೆ ಇಲ್ಲಿನ ಜನರ ನಂಬಿಕೆಯ ಪ್ರತೀಕ. ನಾಗ ದೇವರ ಪ್ರೀತ್ಯರ್ಥ ನಡೆಯುವ ಈ ನಾಗಾರಾಧನೆ ಒಂದು ಅದ್ದೂರಿ ಆಚರಣೆ. ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎನ್ನುತ್ತಾರೆ. ಉಡುಪಿಯ ಶ್ರೀ ಕ್ಷೇತ್ರ ಹೆಬ್ರಿಯಲ್ಲಿ ನಡೆದ ಅಪರೂಪದ ನಾಗಾರಾಧನೆಯ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.

ಕರಾವಳಿ ಭೂ ಪ್ರದೇಶದ ಒಡೆಯ ನಾಗದೇವರು ಎನ್ನುವುದು ಇಲ್ಲಿನ ಬಲವಾದ ನಂಬಿಕೆ. ಮನುಷ್ಯರನ್ನು ಬಾಧಿಸುವ ಪ್ರತಿಯೊಂದು ದೋಷಗಳಿಗೂ ನಾಗ ದೇವರೇ ಕಾರಣ ಎನ್ನುವುದು ಇಲ್ಲಿನ ಜನರ ಮಾತು. ಹಾಗಾಗಿ ಬಗೆಬಗೆಯಲ್ಲಿ ನಾಗದೇವರ ಆರಾಧನೆ ನಡೆಸಲಾಗುತ್ತದೆ. ನಾಗಾರಾಧನೆಯ ಅತ್ಯುನ್ನತ ಆಚರಣೆ ಅಂದರೆ ನಾಗಮಂಡಲ. ಲೋಕಕಲ್ಯಾಣಾರ್ಥ ನಡೆಯುವ ನಾಗಮಂಡಲ ಹಲವು ವೈಶಿಷ್ಟ್ಯಗಳ ಆಗರವಾಗಿದೆ. ನಾಗದೇವರ ಮುಂದೆ ನಡೆಸುವ ನರ್ತನ ಸೇವೆ ನಾಗಮಂಡಲದ ವಿಶೇಷ.

ಆವೇಶಭರಿತ ನಾಗಪಾತ್ರಿ ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ಅದ್ದೂರಿ ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ. ಉಡುಪಿಯ ಸಗ್ರಿ ಕ್ಷೇತ್ರದಲ್ಲಿ ನಾಗದೇವರ ಸನ್ನಿಧಾನದಲ್ಲಿ ನಡೆದ ಅಪರೂಪದ ಹಾಲಿಟ್ಟು ಸೇವೆ ಕಂಡು ಭಕ್ತರು ಪುನೀತರಾದರು.

ಹಾಲಿಟ್ಟು ಸೇವೆ ಎಂದರೇನು? ಜೀವಂತ ಜನಪದದ ಸಾಕ್ಷಿರೂಪ ಈ ಹಾಲಿಟ್ಟು ಸೇವೆ. ಪ್ರಾಕೃತಿಕ ಅಲಂಕಾರ, ಪಾಕೃತಿಕ ಬಣ್ಣದ ಮಂಡಲದ ನಡುವೆ ಮಧ್ಯರಾತ್ರಿಯಲ್ಲಿ ನಡೆಯುವ ಈ ದೇವರ ಸೇವೆಯನ್ನು ಕಾಣಲು ನೂರಾರು ಜನರು ಬರುತ್ತಾರೆ. ಪಾಕೃತಿಕ ಬಣ್ಣಗಳಿಂದ ರಚಿಸುವ ನಾಗಮಂಡಲವೆಂಬ ಮಹಾರಂಗವಲ್ಲಿಯ ರಚನೆಗೆ ಅನುಗುಣವಾಗಿಯೇ ದೇವರು ಕುಣಿಯುತ್ತಾರೆ. ನಾಗದೇವರ ಸಂಪ್ರೀತಿಗೆ ಈ ಕುಣಿತ ಸೇವೆ ನಡೆಸಲಾಗುತ್ತದೆ. ಪೂಜಾ ಪದ್ಧತಿಯ ಜೊತೆಗೆ ಪ್ರದರ್ಶನ ಕಲೆಯಾಗಿಯೂ ನಾಗಮಂಡಲ ಗಮನಸೆಳೆಯುತ್ತದೆ. ಕಂಚಿನ ಡಮರುಗ ಹಿಡಿದು ದೇವರನ್ನು ಕುಣಿಸುವ ನಾಗಕನ್ನಿಕೆ ಮತ್ತು ಹಿಂಗಾರದ ಹೂವಿನ ರಾಶಿಯಲ್ಲಿ ಮಿಂದೇಳುವ ನಾಗಪಾತ್ರಿಯ ಆವೇಶ ಮೈ ನವಿರೇಳಿಸುವಂತಿರುತ್ತದೆ.

ಇಷ್ಟೊಂದು ಅದ್ದೂರಿ ಜನಪದ ಆಚರಣೆ ಬೇರೆಲ್ಲೂ ಕಾಣಸಿಗುವುದಿಲ್ಲ ಎನ್ನುವುದು ಈ ಭಾಗದ ಜನರ ಮಾತು. ವೈದಿಕತೆಯ ಪ್ರಭಾವದಿಂದ ನಾಗಮಂಡಲದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಜನಸಾಮಾನ್ಯರು ಈ ಸೇವೆಯನ್ನು ನಡೆಸುವುದು ದುಸ್ಥರವೆಂದೇ ಹೇಳಬೇಕು. ಲೋಕಕಲ್ಯಾಣಾರ್ಥ ಸಾಮೂಹಿಕ ಧನಸಂಗ್ರಹದ ಮೂಲಕ ಈಗಲೂ ಕರಾವಳಿಯಲ್ಲಿ ಈ ಅಪರೂಪದ ಆಚರಣೆ ನಡೆಸಲಾಗುತ್ತದೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ: ಮಂಗಳೂರು: ನಾಗನ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ; ಬಸವರಾಜ ಬೊಮ್ಮಾಯಿಗೆ ವಿಹೆಚ್​ಪಿ ಮುಖಂಡ ಎಚ್ಚರಿಕೆ

ಪ್ರತ್ಯಂಗೀರಾದೇವಿ ಸನ್ನಿಧಿಯಲ್ಲಿ ನಡೆಯುತ್ತದೆ ಒಣ ಮೆಣಸಿನಕಾಯಿ ಹೋಮ; ವಿಶೇಷ ಪೂಜೆಯಲ್ಲಿ ಶಬರಿಮಲೈ ಪ್ರಧಾನ ಅರ್ಚಕರು ಭಾಗಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ