AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ

ಹಿಜಾಬ್ ವಿಷಯದಲ್ಲಿ ಯಶಪಾಲ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು. ಈ ರೀತಿಯ ಪೊಟ್ಟು ಬೆದರಿಕೆಗೆ ಯಶಪಾಲ ಸುವರ್ಣ ಬೆದರುವುದಿಲ್ಲ. ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ. ಅವರ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧವಿದ್ದೇವೆ.

ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on:Jun 08, 2022 | 3:08 PM

Share

ಉಡುಪಿ: ಹಿಂದೂ ನಾಯಕ ಯಶಪಾಲ ಸುವರ್ಣಗೆ (Yashpal Suvarna) ಬೆದರಿಕೆ ಬಂದಿರುವ ಹಿನ್ನೆಲೆ ಹಿಂದೂ ಯುವ ಸೇನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ. ಯಶಪಾಲ ತಲೆ ಕಡಿದವರಿಗೆ 10 ಲಕ್ಷ ಎಂದು ಇನ್ಸ್ಟಾಗ್ರಾಂ ಪೇಜ್ (Instagram Page) ಮೂಲಕ ಬೆದರಿಕೆ ಹಾಕಿದ್ದಾರೆ. ಯಶಪಾಲ ಸುವರ್ಣ ಜೊತೆ ಪ್ರಮೋದ್ ಮುತಾಲಿಕ್ಗೂ ಬೆದರಿಕೆ ಹಾಕಿದ್ದು, ಸೂಕ್ತ ಕ್ರಮ ಜರಗಿಸುವಂತೆ ಹಿಂದೂ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಯುವಸೇನೆ ಮುಖಂಡ ಮಂಜು ಕೊಳ, ಯಶಪಾಲ ಸುವರ್ಣ ಬಾಲ್ಯದಿಂದಲೇ ಹಿಂದುತ್ವಕ್ಕಾಗಿ ಹೋರಾಡಿದವರು. ಇದು ಯಶಪಾಲ ಸುವರ್ಣಗೆ ಹಾಕಿದ ಬೆದರಿಕೆಯಲ್ಲ. ಹಿಂದೂ ಸಮಾಜಕ್ಕೆ ಹಾಕಿರುವ ಬೆದರಿಕೆ ಎಂದು ಭಾವಿಸುತ್ತೇವೆ. ಅಷ್ಟು ಸುಲಭವಾಗಿ ಈ ವಿಚಾರ ಕೈಬಿಡಲು ಸಾಧ್ಯವಿಲ್ಲ. ಇಂತಹ ಬೆದರಿಕೆಯಿಂದ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಧಕ್ಕೆ ಆಗುತ್ತೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಜಾಲತಾಣ ಮೂಲಕ ಬೆದರಿಕೆ ಹಾಕಿದವರು ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ ಎಂದು ತಿಳಿಸಿದರು.

ಹಿಜಾಬ್ ವಿಷಯದಲ್ಲಿ ಯಶಪಾಲ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು. ಈ ರೀತಿಯ ಪೊಟ್ಟು ಬೆದರಿಕೆಗೆ ಯಶಪಾಲ ಸುವರ್ಣ ಬೆದರುವುದಿಲ್ಲ. ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ. ಅವರ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧವಿದ್ದೇವೆ. ಹಿಂದೂ ಸಮಾಜದ ಕೆಲಸವನ್ನು ಮತ್ತಷ್ಟು ಮುಂಚೂಣಿಯಲ್ಲಿ ನಿಂತು ಮಾಡುತ್ತಾರೆ ಎಂದು ಯುವಸೇನೆ ಮುಖಂಡ ಮಂಜು ಕೊಳ ಹೇಳಿದರು.

ಇದನ್ನೂ ಓದಿ
Image
Political Analysis: ನೂಪುರ್ ಶರ್ಮಾ ಅಮಾನತು: ಬಿಜೆಪಿಯಲ್ಲಿ ಪರ-ವಿರೋಧ ಹೊಯ್ದಾಟ, ಆರ್​ಎಸ್​ಎಸ್​ ಮೌನಕ್ಕೆ ಹಲವು ಅರ್ಥ
Image
ನನ್ನನ್ನು ಮುಂದಿನ ಮುಖ್ಯಮಂತ್ರಿಯೆಂದು ಹೇಳುತ್ತಿರುವುದು ಸರಿಯಲ್ಲ: ಬಿವೈ ವಿಜಯೇಂದ್ರ
Image
Mithali Raj: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್
Image
Avyan Meaning: ನಿಖಿಲ್ ಕುಮಾರ್ ಮಗ ಅವ್ಯಾನ್ ಹೆಸರಿನ ಅರ್ಥವೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: ದೇವೇಗೌಡರ ಮರಿ ಮೊಮ್ಮೊಗನ ನಾಮಕರಣ ಶಾಸ್ತ್ರ: ಹೇಗಿದ್ದಾನೆ ನೋಡಿ ನಿಖಿಲ್ ಕುಮಾರ್ ಮಗ

ಇನ್ನು ಟಿವಿ9ಗೆ ಹೇಳಿಕೆ ನೀಡಿದ ಯಶಪಾಲ ಸುವರ್ಣ, ನನ್ನ ಬೆಲೆ ಎಷ್ಟು ಎಂದು ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. 10 ಲಕ್ಷ ಅಲ್ಲ 1 ಕೋಟಿ ಬೆಲೆ ಕಟ್ಟಿದರು ಹೆದರುವುದಿಲ್ಲ. ಇಂತಹ ಟೀಕೆಗಳಿಂದ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ. ಹಿಂದುತ್ವದ ಸಿದ್ಧಾಂತದಲ್ಲಿ ಯಾವುದೇ ರಾಜಿಯೇ ಇಲ್ಲ. ರಾಷ್ಟ್ರೀಯತೆಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. 20 ವರ್ಷಗಳಿಂದ ಸಂಘಟನಾತ್ಮಕವಾಗಿ ಕೆಲಸ ಮಾಡ್ತಿದ್ದೇನೆ. ಹಿಂದೂಗಳಿಗೆ ಅನ್ಯಾಯವಾದಾಗ ನಾನು ಎದ್ದು ನಿಂತಿದ್ದೇನೆ. ಬೆದರಿಕೆ ಹಾಕಿದವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಜಾಬ್ ಸಂಘರ್ಷ ಶುರುವಾದಾಗಿನಿಂದ ಹೋರಾಡಿದ್ದೇನೆ. ನಾನು ಹಿಂದೆ ಸರಿಯಬಹುದು ಎಂದು ಭಾವಿಸಿದರೆ ತಪ್ಪು ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡ

Published On - 3:06 pm, Wed, 8 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ